ಯಲಬುರ್ಗಾದಲ್ಲಿ ಸಂಭ್ರಮದಿಂದ ಕಾರಹುಣ್ಣಿಮೆ ಆಚರಣೆ
Karahunnima celebrated with enthusiasm in Yelaburga
ಯಲಬುರ್ಗಾ 29: ಉತ್ತರ ಕರ್ನಾಟಕದ ರೈತರ ಪ್ರಮುಖ ಹಬ್ಬಗಳಲ್ಲಿ ಒಂದಾದ ಕಾರಹುಣ್ಣಿಮೆಯನ್ನು ಯಲಬುರ್ಗಾ ತಾಲ್ಲೂಕಿನಲ್ಲಿ ರೈತರು ಸಡಗರ-ಸಂಭ್ರಮದಿಂದ ಆಚರಿಸಿದರು. ಕಾರಹುಣ್ಣಿಮೆ ಅಂಗವಾಗಿ ರೈತರು ಎತ್ತು, ಹೋರಿಗಳನ್ನು ಸ್ನಾನ ಮಾಡಿಸಿ, ಕೊಂಬುಗಳಿಗೆ ಬಣ್ಣ ಬಳಿದು, ವಿವಿಧ ಅಲಂಕಾರಗಳೊಂದಿಗೆ ಸಿಂಗರಿಸಿ ಮೆರವಣಿಗೆ ನಡೆಸಿದರು. ಈ ದಿನ ಎತ್ತುಗಳಿಗೆ ಕೃಷಿ ಕೆಲಸದಿಂದ ವಿಶ್ರಾಂತಿ ನೀಡಿ, ಹೋಳಿಗೆ, ಕಡುಬು ಸೇರಿದಂತೆ ವಿಶೇಷ ತಿನಿಸುಗಳನ್ನು ಉಣಬಡಿಸುವ ಮೂಲಕ ತಮ್ಮ ಅಭಿಮಾನ ವ್ಯಕ್ತಪಡಿಸಿದರು.
ಹಬ್ಬದ ಪ್ರಮುಖ ಆಕರ್ಷಣೆಯಾಗಿದ್ದ ಕರಿ ಹರಿಯುವ ಕಾರ್ಯಕ್ರಮದಲ್ಲಿ ಬಿಳಿ ಹಾಗೂ ಕೆಂದು ಬಣ್ಣದ ಎತ್ತುಗಳನ್ನು ಮಾತ್ರ ಓಟಕ್ಕೆ ಬಿಡಲಾಯಿತು. ಈ ಬಾರಿ ಬಿಳಿ ಎತ್ತು ಮೊದಲು ಕರಿ ಹರಿದ ಹಿನ್ನೆಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಬಿಳಿ ಜೋಳದ ಫಸಲು ಸಮೃದ್ಧವಾಗಿ ಬೆಳೆಯಲಿದೆ ಎಂಬ ನಂಬಿಕೆಯನ್ನು ರೈತರು ವ್ಯಕ್ತಪಡಿಸಿದರು. ಕೆಂದು ಬಣ್ಣದ ಎತ್ತು ಮೊದಲು ಕರಿ ಹರಿದರೆ ಮುಂಗಾರು ಬೆಳೆ ಉತ್ತಮವಾಗುತ್ತದೆ ಎಂಬುದು ರೈತರ ನಂಬಿಕೆಯಾಗಿದೆ.
ಕರಿ ಹರಿದ ಎತ್ತಿಗೆ ಗ್ರಾಮಸ್ಥರು ಮೆರವಣಿಗೆ ನಡೆಸಿ ಗೌರವ ಸಲ್ಲಿಸಿದರು. ಬಳಿಕ ಗುಂಡು ಎತ್ತುವ ಸ್ಪರ್ಧೆ ಸೇರಿದಂತೆ ವಿವಿಧ ಗ್ರಾಮೀಣ ಕ್ರೀಡಾಕೂಟಗಳು ನಡೆದವು. ನಂತರ ರೈತರು ಶಕ್ತಿ ದೇವತೆಗಳ ದೇವಾಲಯಗಳಿಗೆ ತೆರಳಿ ಉತ್ತಮ ಮಳೆ ಹಾಗೂ ಸಮೃದ್ಧ ಬೆಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಆನಂದ ಉಳ್ಳಾಗಡ್ಡಿ, ಶಿವಪ್ಪ ಭೂತೆ, ಬಸವಲಿಂಗಪ್ಪ ಕೊತ್ತಲ್, ಮಲ್ಲೇಶಗೌಡ ಮಾಲಿಪಾಟೀಲ್, ಮಲ್ಲಣ್ಣ ತೆಂಗಿನಕಾಯಿ, ಮಂಜುನಾಥ ಅಧಿಕಾರಿ, ವಿರೂಪಾಕ್ಷಯ್ಯ ಗಂಧದ, ಹೇಮಣ್ಣ ಖಾನಾವಳಿ, ದೊಡ್ಡಪ್ಪ ಉಳ್ಳಾಗಡ್ಡಿ, ಕಳಕಪ್ಪ ಗದ್ದಿ, ಕಳಕಪ್ಪ ಗುಳಗುಳ್ಳಿ, ಬಸವರಾಜ ಕೋಣದ, ಮಲ್ಲಪ್ಪ ಸ್ಟಾಂಪಿನ ಸೇರಿದಂತೆ ರೈತರು, ಯುವಕರು ಹಾಗೂ ಮಹಿಳೆಯರು ಭಾಗವಹಿಸಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 