ಕರ್ನಾಟಕ ರಕ್ಷಣಾ ವೇದಿಕೆಯಿಂದ ಕನ್ನಡ ರಾಜ್ಯೋತ್ಸವ

ಕರ್ನಾಟಕ ರಕ್ಷಣಾ ವೇದಿಕೆಯಿಂದ ಕನ್ನಡ ರಾಜ್ಯೋತ್ಸವ  Kannada Rajyotsava by Karnataka Rakshana Vedike

ರನ್ನ ಬೆಳಗಲಿ 05: ಪಟ್ಟಣದ ಜನತಾ ಪ್ಲಾಟ್ ಕಾಲೋನಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸಂಘಟನೆಯ ಆಶ್ರಯದಲ್ಲಿ 70ನೆಯ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಘಟಕದ ಅಧ್ಯಕ್ಷ ಸದಾಶಿವ ಹೊರಗನಿಮನಿ, ಉಪಾಧ್ಯಕ್ಷ ಸದಾಶಿವ ಹೊಸೂರ, ಕಾರ್ಯದರ್ಶಿ ಈರ​‍್ಪ ಗುಡ್ಲಾರ ಸದಸ್ಯರಾದ ಅಲ್ಲಸಾಬ್ ನದಾಫ್, ಬಸವರಾಜ ಕಡಕೋಳ,ಮಹಾಂತೇಶ ದೊಡಮನಿ,ಮಲ್ಲಪ್ಪ ಹೊರಗಿನಮನಿ,ಶಿಕ್ಷಕ ರಾಜು ತೋಟಗಿ, ಬಸು ದೊಡಮನಿ,ಬಸವರಾಜ ಹೊರಗಿನಮನಿ, ಪರುಶುರಾಮ ಮತ್ತು ಇನ್ನಿತರ ಹಾಜರಿದ್ದರು.