ಶಾಲೆಯಲ್ಲಿ ಕನಕದಾಸ ಜಯಂತಿ ಆಚರಣೆ

ಶಾಲೆಯಲ್ಲಿ ಕನಕದಾಸ ಜಯಂತಿ ಆಚರಣೆ Kanakadasa Jayanti celebration in school

ಸವಣೂರು 11 :ತಾಲೂಕಿನ ಯಲವಿಗಿ ತಾಂಡದ ಸ.ಹಿ.ಪ್ರಾ.ಶಾಲೆಯಲ್ಲಿ ದಾಸ ಶ್ರೇಷ್ಠ ಭಕ್ತ ಕನಕದಾಸರ ಜಯಂತಿಯನ್ನು  ಆಚರಿಸಲಾಯಿತು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಕುಮಾರ ನಾಯಕ ಮಾತನಾಡಿ ಕನಕದಾಸರ ಹೆಸರು ತಿಮ್ಮಪ್ಪನಾಯಕ,ತಂದೆ ಬೀರ​‍್ಪನಾಯಕ,ತಾಯಿ ಬಚ್ಚಮ್ಮ. ಅವರು ಹುಟ್ಟಿದ್ದು ನಮ್ಮ ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ. ಬಂಕಾಪೂರದಲ್ಲಿ ಶ್ರೀನಿವಾಸಾಚಾರ್ಯರಲ್ಲಿ ಶಿಕ್ಷಣ ಪಡೆದರು.ಕನಕದಾಸರು ಯುದ್ಧವೊಂದರಲ್ಲಿ ಸೋತು ವೈರಾಗ್ಯ ಉಂಟಾಗಿ,ಎಲ್ಲವನ್ನೂ ತ್ಯಜಿಸಿ ಸಮಾಜ ಸುಧಾರಣೆಗಾಗಿ ಲೋಕ ಸಂಚಾರ ಮಾಡಿದರು.ಇವರ ಅಂಕಿತನಾಮ ಆದಿಕೇಶವ ಕನಕದಾಸರು ರಚಿಸಿರುವ ಕೃತಿಗಳು ಹರಿ-ಭಕ್ತಿಸಾರ, ರಾಮಧ್ಯಾನ ಚರಿತೆ, ಮೋಹನ ತರಂಗಿಣಿ, ಮತ್ತು ನಳ್ಳಚರಿತ್ರೆ ಇವಲ್ಲದೆ ನೂರಾರು ಕೀರ್ತನೆಗಳು ಉಗಾಭೋಗ, ಸುಳಾದಿಗಳು ಮತ್ತು ಮಂಡಿಗೆಗಳಷ್ಟ ರಚಿಸಿದ್ದಾರೆ. ಕನಕದಾಸರು ಮತ್ತು ಪ್ರರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ ಎಂದರು. 

 ಶಿಕ್ಷಕ ಎಫ್ ಆರ್ ಹಿರೇಮಠ ಮಾತನಾಡಿದರು.ದೈಹಿಕ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಆಯ್ ಎಸ್ ಮುದಗಲ್ ಮಕ್ಕಳಿಗೆ ವಂದೇ ಮಾತರಂ ಗೀತೆಯನ್ನು ರಾಗಬದ್ಧವಾಗಿ ಹೇಳಿಸಿದರು.ಕಾರ್ಯಕ್ರಮದಲ್ಲಿ ಮುಖಂಡರಾದ ನಾಗಪ್ಪ ಚವ್ಹಾಣ,ಶಾಲಾ ಉಪಾಧ್ಯಕ್ಷೆ ಸೀತವ್ವ ಲಮಾಣಿ,ಸುನೀತಾ ಲಮಾಣಿ,ಲಿಂಗರಾಜ, ಪ್ರ.ಗು ಎಸ್ ಎನ್ ಶಿಡೇನೂರ, ರತ್ನಾ.ಯರಗಲ್, ಶ್ರೀರೇಖಾ ಕೆರೂರ,ನಡಕಟ್ಟಿನ ಪದ್ಮಾ ಮತ್ತು ಶಾಲಾ ಮಕ್ಕಳು ಹಾಜರಿದ್ದರು.