ಯಶಸ್ವಿಯಾಗಿ ಜರುಗಿದ ಕಳಸಾರೋಹನ ಸಮಾರಂಭ
Kalasarohana ceremony successfully held
ಯಮಕನಮರಡಿ 18: ಸಮೀಪದ ದಾದಾಬಾನಹಟ್ಟಿ ಗ್ರಾಮದ ಜಾಗೃತ ದೇವತೆ ಶಕ್ತಿ ಸ್ವರೂಪಿಣಿ ಆದ ಶ್ರೀ ಲಕ್ಷ್ಮಿ ದೇವಿ ಮಂದಿರದ ನೂತನ ಶಿಖರದ ಕಳಸಾರೋಹಣ ಸಮಾರಂಭ ಯಶಸ್ವಿಯಾಗಿ ದಿನಾಂಕ 18 ರಂದು ಜರುಗಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹತ್ತರಗಿ ಕಾರಿಮಠದ ಪೂಜ್ಯರಾದ ಗುರು ಸಿದ್ದೇಶ್ವರ ಮಹಾಸ್ವಾಮಿಗಳು ಹಾಗೂ ಯಮಕನಮರಡಿ ಹತ್ತರಗಿ ಹರಿಮಂದಿರದ ಪೂಜ್ಯರಾದ ಆನಂದ ಮಹಾರಾಜ್ ಗೋಸಾವಿ ಅವರು ವಹಿಸಿ ಕಳಸ ಪೂಜೆ ನೆರವೇರಿಸಿ ಹೋಮ ಹವನ ಇತ್ಯಾದಿ ಕಾರ್ಯಕ್ರಮಗಳು ನೆರವೇರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸತ್ಯಪ್ಪ ಜಮಕೋಳಿ, ಉಪಾಧ್ಯಕ್ಷ ನಾರಾಯಣ ಪವಾರ, ಕಾರ್ಯದರ್ಶಿ ಮಂಜುನಾಥ್ ಓಮನವರ್, ಖಜಾಂಚಿ ಈರಣ್ಣ ಕ ಘಸ್ತಿ, ಸದಸ್ಯರಾದ ಲಗಮಣ್ಣ ಜಮಕೋಳಿ, ರಮೇಶ್ ಡೊಳ್ಳಿ, ಮಹಾದೇವ ಢಂಗ, ವಸಂತ ಗಸ್ತಿ, ಬಸವರಾಜ ಗಸ್ತಿ, ಪರಸಪ್ಪ ಶಿರನಗಿ, ಅಜ್ಜಪ್ಪ ಅತ್ಯಾಳಿ, ಲಗಮಣ್ಣ ಬರಗಾಲಿ, ಜಗದೀಶ ಪವಾರ್, ಭೀಮಪ್ಪ ಚನ್ನಬಸವಣ್ಣವರ , ಮಲ್ಲಪ್ಪ ಮಜತಿ, ರವೀಂದ್ರ ಗಸ್ತಿ, ನಾಗೇಂದ್ರ ಮಜತಿ, ಈರಪ್ಪಣ್ಣ ಘಸ್ತಿ ಹಾಗೂ ಗ್ರಾಮದ ಸಕಲ ಭಕ್ತಾದಿಗಳು ಹತ್ತರಿಗಿಯಿಂದ ಬಂದಿರುವ ಎಲ್ಲ ಭಕ್ತಾದಿಗಳು ಉಪಸ್ಥಿತರಿದ್ದು ಕಳಸಾರೋಹಣ ನೆರವೇರಿಸುವಲ್ಲಿ ಯಶಸ್ವಿಯಾದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 