ಶ್ರೀಶೈಲಕ್ಕೆ ಹೊಗುವ ಭಕ್ತರಿಗೆ ಕಡಕ್ ರೊಟ್ಟಿ
Kadak Roti for devotees going to Srisailam
ತಾಂಬಾ 01 : ಪ್ರತಿ ವರ್ಷದಂತೆ ಈ ಭಾರಿಯೂ ಮಾರ್ಚ 4ರಂದು ಗ್ರಾಮಸ್ಥರು ಶ್ರೀಶೈಲ ಪಾದಯಾತ್ರೀಕರು ಶ್ರೀಶೈಲಕ್ಕೆ ಪಾದಯಾತ್ರೆಯ ಮೂಲಕ ತೆರಳಲಿದ್ದಾರೆ. ಅವರಿಗೆ 15ದಿನಗಳಿಂದ ಸಾಕಾಗುವಷ್ಟು ಹಾಗೂ ಅವರ ಜೋತೆ ಬರುವ ಎಲ್ಲ ಯಾತ್ರೀಕರಿಗೆ ಹೊಟ್ಟೆತುಂಬುವಷ್ಟು ಕಡಕ್ ರೊಟ್ಟಿ ತಯಾರಿಸಿ ಇಟ್ಟಿದ್ದಾರೆ.
ಗ್ರಾಮಸ್ಥರೆಲ್ಲರು ಕುಡಿಕೊಂಡು ಶ್ರೀಶೈಲ ಮಲ್ಲಿಕಾರ್ಜುನ ಯಾತ್ರೀಕರಿಗೆ ಸುಮಾರು 50ಸಾವಿರದಷ್ಟು ಜನರಿಗೆ ಸಾಕಾಗುವಷ್ಟು ಗುರುಬಸವ ವೀರಕ್ತಮಠ ಹಾಗೂ ಮೈಸೂರು ಮಹಾರಾಜರ ಮಠದಲ್ಲಿ ಸಂಗ್ರಹಿಸಿಟ್ಟಿದ್ದಾರೆ. ಮಾ.4 ರಂದು ಮೈಸೂರು ಮಹಾರಾಜರ ಮಠದಿಂದ ಸಂಜೆ 9ಕ್ಕೆ ಪಾದಯಾತ್ರೆ ಬೆಳಸುವರು. ಮಹಿಳೆಯರು ಪುರುಷರು ಸೇರಿದಂತೆ ಸುಮಾರು 5ಸಾವಿರ ಜನರು ಭಾಗಿಯಾಗಲಿದ್ದಾರೆ. ಶ್ರೀಗಳ ಹಾಗೂ ಗ್ರಾಮದ ಹಿರಿಯರ ಮಾರ್ಗದರ್ಶನದಲ್ಲಿ ಸಾಗುವ ಶ್ರೀಶೈಲ ಪಾದಯಾತ್ರೀಕರಿಗೆ ಗ್ರಾಮದ ಎಲ್ಲ ನಾಗರಿಕರ ಸಹಕಾರ ವಿದೆ. ಪಾದಯಾತ್ರೆಯಲ್ಲಿ ಊಟ, ವಸತಿ, ತಂಗುವ ವ್ಯವಸ್ಥೆ, ಓಷದ ಉಪಚಾರ ಮುತ್ತಾದ ಸೌಕರ್ಯಗಳನ್ನು ಕಮಿಟಿಯವರು ಮಾಡುತ್ತಾರೆ.
1)ಪ್ರತಿಸಲದಂತೆ ಈಸಲವು ಯಾತ್ರೀಕರಿಗೆ ಸಾಕಾಗುವಷ್ಟು ಗ್ರಾಮಸ್ಥರು ಕಡಕ್ ರೊಟ್ಟಿಗಳನ್ನು ತಯಾರಿಸಿ ಕೊಟ್ಟಿರುತ್ತಾರೆ. ತಾಂಬಾ ಗ್ರಾಮದ ಭಕ್ತರ ಭಕ್ತಿಯನ್ನು ನೋಡಿ ಸಾಕ್ಷಾತ್ ಶ್ರೀಶೈಲ ಮಲ್ಲಯ್ಯಸ್ವಾಮಿನೆ ಮೆಚ್ಚಿ ನಾವು ತಂದ ಎಲ್ಲ ಪ್ರಸಾದ ಸಾಕಾಗಿ ಇನ್ನು ಸಾಕಷ್ಟು ಉಳಿಯುತ್ತದೆ. ಮಲ್ಲಯ್ಯನ ದ್ಯಾನ ಮಾಡುತ್ತಾ ಸಾಗುವೆವು. ಯಾವತೊಂದರೆಯು ಭಕ್ತರಿಗೆ ಆಗುವದಿಲ್ಲ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 