ಕ.ಸಾ.ಪ ದತ್ತಿ ಪ್ರಶಸ್ತಿ ಪ್ರಕಟ : ಶಿವನಗೌಡ ಪೋಲೀಸ್ ಪಾಟೀಲ್, ಪಿ. ಎಸ್‌.ಅಮರದೀಪ್, ಜಯಶ್ರೀ ಹಕ್ಕಂಡಿ, ಗೀತಾ ಎನ್‌.ಮಲ್ಲನಗೌಡ ಆಯ್ಕೆ

ಕ.ಸಾ.ಪ ದತ್ತಿ ಪ್ರಶಸ್ತಿ ಪ್ರಕಟ : ಶಿವನಗೌಡ ಪೋಲೀಸ್ ಪಾಟೀಲ್,  ಪಿ. ಎಸ್‌.ಅಮರದೀಪ್, ಜಯಶ್ರೀ ಹಕ್ಕಂಡಿ, ಗೀತಾ ಎನ್‌.ಮಲ್ಲನಗೌಡ ಆಯ್ಕೆ  K.S.P Charity Award Announced : Shivanagowda Police Patil, P. S. Amardeep, Jayashree Hakkandi, Geeta

ಕ.ಸಾ.ಪ ದತ್ತಿ ಪ್ರಶಸ್ತಿ ಪ್ರಕಟ : ಶಿವನಗೌಡ ಪೋಲೀಸ್ ಪಾಟೀಲ್,  ಪಿ. ಎಸ್‌.ಅಮರದೀಪ್, ಜಯಶ್ರೀ ಹಕ್ಕಂಡಿ, ಗೀತಾ ಎನ್‌.ಮಲ್ಲನಗೌಡ ಆಯ್ಕೆ  

ಕೊಪ್ಪಳ 04: ಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪಳ ತಾಲೂಕಾ ಘಟಕವು ಪ್ರಕಟಿಸುವ ದಿ. ಮರಿಗೌಡ ಮಲ್ಲನಗೌಡರ ಅವರ ಹೆಸರಿನಲ್ಲಿ ಡಾ. ಮಹಾಂತೇಶ ಮಲ್ಲನಗೌಡರ ನೀಡುವ ಕೊಪ್ಪಳ ಜಿಲ್ಲಾ ಲೇಖಕರ ಬರಹಗಳಿಗೆ ಪ್ರಕಟಿಸುವ ದತ್ತಿ ಪ್ರಶಸ್ತಿಗೆ ಸಾಹಿತಿ ಶಿವನಗೌಡ ಪೋಲೀಸ್ ಪಾಟೀಲ್  ಅವರ ಛಲಬಿಡದ ಸಾಧಕಿಯರು ಸಂಕಲನ ಮತ್ತು ಪಿ. ಎಸ್‌.ಅಮರದೀಪ್ ಅವರ ಮರಳಿ ಮನೆ ಸಾಗಿದೆ ಸಂಕಲನ ಕೃತಿ ಹಾಗೂ ಜಿಲ್ಲಾ ಮಹಿಳಾ ಬರಹಗಾರರಿಗೆ ನೀಡುವ ಅಂದಮ್ಮ ಮರಿಗೌಡ ಮಲ್ಲನಗೌಡರ ಅವರ ಹೆಸರಿನಲ್ಲಿ ನೀಡುವ ದತ್ತಿ ಪ್ರಶಸ್ತಿಗೆ ಶ್ರೀಮತಿ ಜಯಶ್ರೀ ಹಕ್ಕಂಡಿ ಅವರ ಉಲಿದಷ್ಟೇ ದನಿ ಕವಿತೆಗಳ ಸಂಕಲನ ಮತ್ತು ಶ್ರೀಮತಿ ಗೀತಾ ಎನ್ ಮಲ್ಲನಗೌಡ ಅವರ ವಚನ ಸಿರಿ ಆಧುನಿಕ ವಚನಗಳ ಸಂಕಲನಗಳು ಆಯ್ಕೆಯಾಗಿವೆ. ಈ ಬಾರಿ ಎರಡೂ ಪ್ರಶಸ್ತಿಗಳಿಗೆ ತಲಾ ಇಬ್ಬರು ಆಯ್ಕೆಯಾಗಿರುವುದು ವಿಶೇಷ ಎಂದು ಕೊಪ್ಪಳ ತಾಲೂಕಾ ಕಸಾಪ ಘಟಕದ ಅಧ್ಯಕ್ಷರಾದ ರಾಮಚಂದ್ರಗೌಡ ಗೊಂಡಬಾಳ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದೂರವಾಣಿ ಸಂಖ್ಯೆ: 9845085709