ಅಪರಿಚಿತ ವಾಹನ ಡಿಕ್ಕಿ: ಪತ್ರಕರ್ತ ಕಾನಗೊಂಡ ಸಾವು
Journalist Kanagonda dies after being hit by unknown vehicle
ಲೋಕದರ್ಶನ ವರದಿ
ಕ್ರೈಂ,
ಲೋಕದರ್ಶನ ವರದಿ,
ಅಪರಿಚಿತ ವಾಹನ ಡಿಕ್ಕಿ: ಪತ್ರಕರ್ತ ಕಾನಗೊಂಡ ಸಾವು
ಜಮಖಂಡಿ 09: ತಾಲ್ಲೂಕಿನ ಮಧರಖಂಡಿ ಗ್ರಾಮದ ಕೆಂಪು ಕೆರೆ ಹತ್ತಿರ ಪತ್ರಕರ್ತ ಬಸವರಾಜ ಕಾನಗೊಂಡ ಅವರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ ಧಾರುಣ ಘಟನೆ ಸಂಭವಿಸಿದೆ.
ಆಲಗೂರ ಗ್ರಾಮದ ಪತ್ರಕರ್ತ ಬಸವರಾಜ ರಾಮಪ್ಪ ಕಾನಗೊಂಡ (40) ಅವರು ಬನಹಟ್ಟಿಯಿಂದ ಸ್ಕೂಟಿ ಬೈಕ್ ಮೇಲೆ ಜಮಖಂಡಿ ಕಡೆಗೆ ಬರುವ ಸಮಯದಲ್ಲಿ ಹಿಂಬದಿಯಿಂದ ವೇಗವಾಗಿ ಬಂದ ವಾಹನ ಡಿಕ್ಕಿ ಹೊಡೆತಕ್ಕೆ ಸ್ಕೂಟಿ ಹಿಂಬದಿಯ ಚಕ್ರ ಹಾಗೂ ಇಂಜೀಯನ್ ಕಿತ್ತು ಬಿದ್ದಿದ್ದು. ಸ್ಕೂಟಿ ಬೈಕ್ ಹಿಂಬದಿ ಹಾಗೂ ಮುಂಬದಿ ಬಲ್ಪಗಳು ಹತ್ತಿದ್ದು ಇರುತ್ತದೆ.
ಅಪರಿಚಿತ ವಾಹನ ಸ್ಕೂಟಿ ಬೈಕ್ಗೆ ಹಿಂಬದಿ ಬಂದು ವೇಗವಾಗಿ ಹೊಡೆದ ರಭಸಕ್ಕೆ ಪಕ್ಕದ ಹೊಲದ ಗದ್ದೆಯಲ್ಲಿ ಬಿದ್ದು ಸ್ಥಳದಲ್ಲಿಯೇ ಸಾವನ್ನಪಿದ್ದಾರೆ ಎಂದು ತಿಳಿದು ಬಂದಿರುತ್ತದೆ. ಘಟನಾ ಸ್ಥಳಕ್ಕೆ ಡಿಎಸ್ಪಿ, ರೋಷನ್ ಸೈಯದ ಜಮೀರ, ಸಿಪಿಐ, ಮಲ್ಲಪ್ಪ ಮಡ್ಡಿ, ಗ್ರಾಮೀಣ ಠಾಣಿ ಪಿಎಸ್ಐ ಭೇಟಿ ನೀಡಿ ತನಿಖೆಯನ್ನು ಮುಂದುವರಿಸಿದ್ದಾರೆ. ಇನ್ನೂ ಪ್ರಕರಣಕ್ಕೆ ನಿಖರವಾದ ಮಾಹಿತಿ ತಿಳಿದು ಬಂದಿರುವುದಿರುವುದಿಲ್ಲ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 