ರಾಣೆಬೆನ್ನೂರಲ್ಲಿ ವಿಜೃಂಭಣೆಯಿಂದ ಜರುಗಿದ ಜಿಹ್ವೇಶ್ವರ ಜಯಂತ್ಯತ್ಸವ
Jihveshwara Jayanthyasava celebrated with great pomp in Ranebennur
ರಾಣೆಬೆನ್ನೂರಲ್ಲಿ ವಿಜೃಂಭಣೆಯಿಂದ ಜರುಗಿದ ಜಿಹ್ವೇಶ್ವರ ಜಯಂತ್ಯತ್ಸವ
ರಾಣೆಬೆನ್ನೂರ 09: ಸ್ವಕುಳಸಾಳಿ ಸಮಾಜದ ಆರಾಧ್ಯ ದೈವ ಭಗವಾನ್ ಜಿಹ್ವೇಶ್ವರ ಜಯಂತೋತ್ಸವವು ನಗರದಲ್ಲಿ ಗುರುವಾರದಂದು ಸಂಭ್ರಮ ಹಾಗೂ ಸಡಗರದಿಂದ ನೂರಾರು ಭಕ್ತರ ಮಧ್ಯೆ ಅದ್ದೂರಿಯಾಗಿ ನೆರವೇರಿತು.
ದೇವರಗುಡ್ಡ ರಸ್ತೆಯಲ್ಲಿನ ತುಳಜಾಭವಾನಿ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆಯು ಮುಂಜಾನೆ ನಗರದ ಪ್ರಮುಖ ಬೀದಿಗಳಲ್ಲಿ ಜೀಹ್ವೇಶ್ವರರ ಭಾವಚಿತ್ರದ ಮೆರವಣಿಗೆ ಮತ್ತು ಪಾಲಕಿ ಉತ್ಸವವು ಜರುಗಿತು ಇದಕ್ಕೂ ಮುನ್ನ ತುಳಜಾಭವಾನಿ ದೇವಿಗೆ ಮುಂಜಾನೆಯಿಂದಲೇ ಅಭಿಷೇಕ, ಪುಷ್ಪಾಲಂಕಾರ, ಮಹಾಪೂಜೆ , ಮಂಗಳಾರತಿ ಹಾಗೂ ತೊಟ್ಟಿಲು ಉತ್ಸವ, ಪುರಾಣ ಪ್ರವಚನ ಕಾರ್ಯಕ್ರಮಗಳು ನೂರಾರು ಮಹಿಳಾಮಣಿಗಳ ಮಧ್ಯೆ ಸಂಭ್ರಮದಿಂದ ಅದ್ದೂರಿಯಾಗಿ ನೆರವೇರಿದವು.
ಇದೇ ಸಂದರ್ಭದಲ್ಲಿ ಸಮಾಜದ ಹಿರಿಯ ನಾಗರಿಕರಿಗೆ ಹಾಗೂ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮಗಳು ಜರುಗಿದವು. ಸ್ವಕುಳ ಸಾಳಿ ಸಮಾಜದ ಗೌರವಾಧ್ಯಕ್ಷ ಖಂಡೆಪ್ಪ ರೋಖಡೆ, ಅಧ್ಯಕ್ಷ ವಿಠಲ್ ಏಡಿಕೆ, ಮಹಿಳಾ ಮಾಜಿ ಅಧ್ಯಕ್ಷೆ ತಾರಾಬಾಯಿ ಕ್ಷೀರಸಾಗರ, ರಾಜೇಶ್ವರಿ ಏಕಬೋಟೆ, ಸುನಂದಾ ಏಕಪೋಟೆ, ತುಕಾರಾಂ ಪಾಣಿ ಬಾತೆ, ಗೋಪಾಲ್ ಕ್ಷೀರಸಾಗರ, ಪ್ರೊ. ಧೀರೇಂದ್ರ ಏಕಬೋಟೆ, ರಾಮಕೃಷ್ಣ ತಾಂಬೆ, ದೇವರಾಜ್ ರೋಖಡೆ, ಕರಬಸಪ್ಪ ಏಕಬೋಟೆ, ಪರುಶುರಾಮ ರೋಖಡೆ ಸೇರಿದಂತೆ ಜಿಹ್ವೇಶ್ವರ ಉತ್ಸವ ಸಮಿತಿ, ಮಹಿಳಾ- ಯುವಕ ಮಂಡಳಿ ಹಾಗೂ ಸ್ವಕುಳಸಾಳಿ ಸಮಾಜದ ಹಿರಿಯ- ಕಿರಿಯ ಮುಖಂಡರುಗಳು ಮಹಿಳೆಯರು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 