ಉಗಾರದಲ್ಲಿ ಜನಶಕ್ತಿ ಸೇವಾ ಸಂಘ ಉದ್ಘಾಟನೆ
Janshakti Seva Sangha inaugurated in Ugara
ಲೋಕದರ್ಶನ ವರದಿ
ಕಾಗವಾಡ 22: ಜನಶಕ್ತಿ ಸೇವಾ ಸಂಘವು ದೇಶದಲ್ಲಿ ಹಾಗೂ ರಾಜ್ಯದಲ್ಲಿ ಮಾದರಿ ಸಂಘವಾಗಲ್ಲಿ ಎಂದು ಉಗಾರ ಶುಗರ್ಸ ಕಾರ್ಖಾನೆಯ ಜನರಲ್ ಮ್ಯಾನೇಜರ್ ಅನಂತ ಸಿದ್ದಾಂತಿ ಶುಭ ಹಾರೈಸಿದರು.
ಅವರು ರವಿವಾರ ದಿ. 19 ರಂದು ತಾಲೂಕಿನ ಉಗಾರ ಖುರ್ದ ಪಟ್ಟಣದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಜನಶಕ್ತಿ ಸೇವಾ ಸಂಘದ ಉದ್ಘಾಟನೆಯನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ನೆರವೇರಿಸಿ, ಮಾತನಾಡುತ್ತಿದ್ದರು. ಸಂಘವು ಜನರ ಶಕ್ತಿ, ದೇಶದ ಶಕ್ತಿಯಾಗಲಿ. ಉಗಾರ ಖುರ್ದ ಪಟ್ಟಣದ ಮತ್ತು ಸುತ್ತಮುತ್ತಲಿನ ಜನರಿಗೆ, ನೊಂದ, ನಿರ್ಗತಿಕರಿಗೆ ಅನುಕೂಲವಾಗಲಿ. ಹಾಗೂ ಕಾನೂನು ಚೌಕಟ್ಟಿನಲ್ಲಿ ಈ ಸಂಘ ಸ್ಪಂದಿಸಲಿ ಎಂದರು. ಅತಿಥಿಗಳಾಗಿ ಅಥಣಿ ನ್ಯಾಯವಾದಿ ರಾಘವೇಂದ್ರ ಹಳಿಂಗಳಿ ಮಾತನಾಡುತ್ತ, ಕಾನೂನು ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಇಲ್ಲಿ ಮೇಲು-ಕೀಳು ಎಂಬ ಭೇದವಿಲ್ಲದೆ ಎಲ್ಲರೂ ಕೂಡಿಕೊಂಡು ಸಂಘವನ್ನು ಬೆಳೆಸಬೇಕು. ಸಂಘದ ನೇತ್ರತ್ವ ವಹಿಸಿರುವ ಕಾಗವಾಡ ಮತಕ್ಷೇತ್ರ ಯುವನಾಯಕ ನ್ಯಾಯವಾದಿ ರಾಹುಲ ಕಟಗೇರಿಯವರು ಚಿಕ್ಕವಯಸ್ಸಿನಲ್ಲೇ ಸಮಾಜ ಸೇವೆಯಲ್ಲಿ ತೊಡಗಿಕೊಂಡು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ನ್ಯಾಯವಾದಿ ವಿಜಯ ದೇಸಾಯಿ, ಹಿರಿಯರಾದ ವಿರಭದ್ರ ಕಟಗೇರಿ, ವಿನಾಯಕ ಕಾಂಬಳೆ, ರಾಜು ಯಶವಾಡೆ, ದಾವಲಮಲಿಕ ಜಮಖಾನೆ, ಹಾರೂಣ ಮುಲ್ಲಾ, ಶಾನೂರ ಜಮಖಾನೆ, ದೀಲೀಪ್ ಕಾಂಬಳೆ, ಹಾಜಿಸಾಬ ಶೇಖ, ತೋಪೇಲಹ್ಮದ ಮುಜಾವರ, ಮುಬಾರಕ ನದಾಪ, ಕುಮಾರ ಯಾದವ, ಜೈನುದಿನ ಇನಾಮದಾರ, ಚಂದ್ರಕಾಂತ ಶೆಟ್ಟಿ, ರಾಮಾ ಕಾಂಬಳೆ ಸೇರಿದಂತೆ ಪಟ್ಟಣದ ನಾಗರಿಕರು, ಇತರರು ಉಪಸ್ಥಿತರಿದ್ದರು.ನ್ಯಾಯವಾದಿ ರಾಹುಲ ಕಟಗೇರಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 