ಜಮಖಂಡಿ : ಯುವಕನಿಗೆ ಚಾಕುವಿನಿಂದ ಇರಿದು ಹಲ್ಲೆ
Jamkhandi: Young man stabbed and attacked with a knife
ಲೋಕದರ್ಶನ ವರದಿ,
ಜಮಖಂಡಿ 20 : ನಗರದ ಮಟ್ಟನ್ ಮಾರ್ಕೆಟ್ ಬಳಿ ಯುವಕನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ಜರುಗಿದೆ. ರಾತ್ರಿ ಸಮಯದಲ್ಲಿ ಮುಸ್ಲಿಂ ಯುವಕರ ನಡುವೆ ಜಗಳ- ಗಲಾಟೆ ಶುರುವಾಗಿದ್ದು. ಅಲ್ಲಿಗೆ ಕೆಲವಂದಿಂಷ್ಟು ಹಿಂದು ಯುವಕರ ಸಹ ಸೇರಿದ್ದಾರೆ. ಹಿಂದು ಯುವಕರ ಮಧ್ಯ ಮುಸ್ಲಿಂ ಯುವಕರ ನಡುವೆ ಹೊಡೆದಾಟ ತೀವ್ರ ಸ್ವರೂಪಕ್ಕೆ ತಿರುಗಿದ ಹಿನ್ನಲೆಯಲ್ಲಿ ಹನುಮಂತ ಶಿವಾಜಿ ಗಾಡಿವಡ್ಡರ (18) ಯುವಕನಿಗೆ ಮುಸ್ಲಿಂ ಯುವಕರು ಸೇರಿ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾರೆ. ಚಾಕುವಿನಿಂದ ಇರಿತಕ್ಕೆಗೊಳಗಾದ ಹನುಮಂತ ಶಿವಾಜಿ ಗಾಡಿವಡ್ಡರ ಯುವಕನನ್ನು ಜಮಖಂಡಿ ಸರಕಾರಿ ಉಪವಿಭಾಗಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳಕ್ಕೆ ಶಹರ ಪೋಲಿಸ್ ಠಾಣೆಯ ಪಿಎಸ್ಐ, ಅನೀಲ ಕುಂಬಾರ, ಸಿಬಂಧಿಗಳಾದ ಸದಾಶಿವ ಹೊಸೂರ, ಲೋಕೇಶ ಯಳಶೆಟ್ಟಿ, ಶಕಂರ ಆಸಂಗಿ, ಶೇಖರ ನಾಯಕ, ಶಂಕರ ಮೂಲಿಮನಿ ಭೇಟಿ ನೀಡಿ ತನಿಖೆಯನ್ನು ಮುಂದುವರಿಸಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 