ಪದ್ಮಾವತಿ ದೇವಿಯ ದರ್ಶನಕ್ಕೆ ಜೈನ ದಿಗಂಬರ ಭಕ್ತಾದಿಗಳ ಪಾದಯಾತ್ರೆ
Jain Digambara devotees embark on a pilgrimage to see Goddess Padmavati
ಶಿಗ್ಗಾವಿ 18 : ತಾಲೂಕಿನ ದುಂಡಸಿ ಅ. ಮ. ಕೊಪ್ಪದಿಂದ ಶ್ರೀ ಕ್ಷೇತ್ರ ಹೊಠುಜಿ ಪದ್ಮಾವತಿ ದೇವಿಯ ದರ್ಶನ ಪಡೆಯಲು ಪ್ರತಿ ವರ್ಷದಂತೆ ಈ ವರ್ಷವೂ ಪಾದಯಾತ್ರೆ ಮೂಲಕ 75 ಜನ ಜೈನ ದಿಗಂಬರ ಭಕ್ತಾದಿಗಳು ಆತ್ಮಕಲ್ಯಾಣಕ್ಕಾಗಿ ಸರ್ವಧರ್ಮದ ಜನರಿಗೆ ಒಳ್ಳೆಯದಾಗಲಿ ಹಾಗೂ ಮಳೆ ಬೆಳೆ ಚೆನ್ನಾಗಿ ಬೆಳೆಯಲೆಂದು ಪದ್ಮಾವತಿ ದೇವಿಯಲ್ಲಿ ಪ್ರತಿ ವರ್ಷ ಪ್ರಾರ್ಥನೆ ಮಾಡಿ ಪಾದಯಾತ್ರೆ ಕೈಗೊಳ್ಳುತ್ತೇವೆ ಎಂದರು.
ತಾಲೂಕಿನ ದುಂಡಸಿಯಿಂದ ಕೋಣನಕೇರಿ ಮಾರ್ಗವಾಗಿ ಹಾನಗಲ್ ಶಿರಾಳಕೊಪ್ಪ ಮಾರ್ಗವಾಗಿ ಒಟ್ಟು 160 ಕಿಲೋಮೀಟರ್ 4 ದಿನ ಪಾದಯಾತ್ರೆ ರಸ್ತೆಯ ಮಾರ್ಗ ಮಧ್ಯದಲ್ಲಿ ಸ್ಥಳೀಯ ಗ್ರಾಮದ ಭಕ್ತಾದಿಗಳು ಊಟದ ವ್ಯವಸ್ಥೆ ಮಾಡಿರುತ್ತಾರೆ. ಈ ಮೂಲಕ ಶ್ರೀ ಕ್ಷೇತ್ರ ಹೊಠಜಿ ಶ್ರೀ ದೇವಿಯ ಕ್ಷೇತ್ರಕ್ಕೆ ತಲುಪುತ್ತಾರೆ. ಈ ಸಂದರ್ಭದಲ್ಲಿ ಧರಣೇಂದ್ರ ಪುಟ್ಟಣ್ಣವರ, ಬಾಹುಬಲಿ ಧರಣ್ಣಪ್ಪನವರ, ಪಾಯಪ್ಪ ಬ್ಯಾಹಟ್ಟಿ, ರಮೇಶ ಗಂಗಣ್ಣವರ, ಚಂದ್ರು ವೈಗುಡ್ಡಿ ಸೇರಿದಂತೆ ನೂರಾರು ಪದ್ಮಾವತಿ ದೇವಿಯ ಭಕ್ತಾದಿಗಳು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 