ಪದ್ಮಾವತಿ ದೇವಿಯ ದರ್ಶನಕ್ಕೆ ಜೈನ ದಿಗಂಬರ ಭಕ್ತಾದಿಗಳ ಪಾದಯಾತ್ರೆ
Jain Digambara devotees embark on a pilgrimage to see Goddess Padmavati
ಶಿಗ್ಗಾವಿ 18 : ತಾಲೂಕಿನ ದುಂಡಸಿ ಅ. ಮ. ಕೊಪ್ಪದಿಂದ ಶ್ರೀ ಕ್ಷೇತ್ರ ಹೊಠುಜಿ ಪದ್ಮಾವತಿ ದೇವಿಯ ದರ್ಶನ ಪಡೆಯಲು ಪ್ರತಿ ವರ್ಷದಂತೆ ಈ ವರ್ಷವೂ ಪಾದಯಾತ್ರೆ ಮೂಲಕ 75 ಜನ ಜೈನ ದಿಗಂಬರ ಭಕ್ತಾದಿಗಳು ಆತ್ಮಕಲ್ಯಾಣಕ್ಕಾಗಿ ಸರ್ವಧರ್ಮದ ಜನರಿಗೆ ಒಳ್ಳೆಯದಾಗಲಿ ಹಾಗೂ ಮಳೆ ಬೆಳೆ ಚೆನ್ನಾಗಿ ಬೆಳೆಯಲೆಂದು ಪದ್ಮಾವತಿ ದೇವಿಯಲ್ಲಿ ಪ್ರತಿ ವರ್ಷ ಪ್ರಾರ್ಥನೆ ಮಾಡಿ ಪಾದಯಾತ್ರೆ ಕೈಗೊಳ್ಳುತ್ತೇವೆ ಎಂದರು.
ತಾಲೂಕಿನ ದುಂಡಸಿಯಿಂದ ಕೋಣನಕೇರಿ ಮಾರ್ಗವಾಗಿ ಹಾನಗಲ್ ಶಿರಾಳಕೊಪ್ಪ ಮಾರ್ಗವಾಗಿ ಒಟ್ಟು 160 ಕಿಲೋಮೀಟರ್ 4 ದಿನ ಪಾದಯಾತ್ರೆ ರಸ್ತೆಯ ಮಾರ್ಗ ಮಧ್ಯದಲ್ಲಿ ಸ್ಥಳೀಯ ಗ್ರಾಮದ ಭಕ್ತಾದಿಗಳು ಊಟದ ವ್ಯವಸ್ಥೆ ಮಾಡಿರುತ್ತಾರೆ. ಈ ಮೂಲಕ ಶ್ರೀ ಕ್ಷೇತ್ರ ಹೊಠಜಿ ಶ್ರೀ ದೇವಿಯ ಕ್ಷೇತ್ರಕ್ಕೆ ತಲುಪುತ್ತಾರೆ. ಈ ಸಂದರ್ಭದಲ್ಲಿ ಧರಣೇಂದ್ರ ಪುಟ್ಟಣ್ಣವರ, ಬಾಹುಬಲಿ ಧರಣ್ಣಪ್ಪನವರ, ಪಾಯಪ್ಪ ಬ್ಯಾಹಟ್ಟಿ, ರಮೇಶ ಗಂಗಣ್ಣವರ, ಚಂದ್ರು ವೈಗುಡ್ಡಿ ಸೇರಿದಂತೆ ನೂರಾರು ಪದ್ಮಾವತಿ ದೇವಿಯ ಭಕ್ತಾದಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 