ಪದ್ಮಾವತಿ ದೇವಿಯ ದರ್ಶನಕ್ಕೆ ಜೈನ ದಿಗಂಬರ ಭಕ್ತಾದಿಗಳ ಪಾದಯಾತ್ರೆ
Jain Digambara devotees embark on a pilgrimage to see Goddess Padmavati
ಶಿಗ್ಗಾವಿ 18 : ತಾಲೂಕಿನ ದುಂಡಸಿ ಅ. ಮ. ಕೊಪ್ಪದಿಂದ ಶ್ರೀ ಕ್ಷೇತ್ರ ಹೊಠುಜಿ ಪದ್ಮಾವತಿ ದೇವಿಯ ದರ್ಶನ ಪಡೆಯಲು ಪ್ರತಿ ವರ್ಷದಂತೆ ಈ ವರ್ಷವೂ ಪಾದಯಾತ್ರೆ ಮೂಲಕ 75 ಜನ ಜೈನ ದಿಗಂಬರ ಭಕ್ತಾದಿಗಳು ಆತ್ಮಕಲ್ಯಾಣಕ್ಕಾಗಿ ಸರ್ವಧರ್ಮದ ಜನರಿಗೆ ಒಳ್ಳೆಯದಾಗಲಿ ಹಾಗೂ ಮಳೆ ಬೆಳೆ ಚೆನ್ನಾಗಿ ಬೆಳೆಯಲೆಂದು ಪದ್ಮಾವತಿ ದೇವಿಯಲ್ಲಿ ಪ್ರತಿ ವರ್ಷ ಪ್ರಾರ್ಥನೆ ಮಾಡಿ ಪಾದಯಾತ್ರೆ ಕೈಗೊಳ್ಳುತ್ತೇವೆ ಎಂದರು.
ತಾಲೂಕಿನ ದುಂಡಸಿಯಿಂದ ಕೋಣನಕೇರಿ ಮಾರ್ಗವಾಗಿ ಹಾನಗಲ್ ಶಿರಾಳಕೊಪ್ಪ ಮಾರ್ಗವಾಗಿ ಒಟ್ಟು 160 ಕಿಲೋಮೀಟರ್ 4 ದಿನ ಪಾದಯಾತ್ರೆ ರಸ್ತೆಯ ಮಾರ್ಗ ಮಧ್ಯದಲ್ಲಿ ಸ್ಥಳೀಯ ಗ್ರಾಮದ ಭಕ್ತಾದಿಗಳು ಊಟದ ವ್ಯವಸ್ಥೆ ಮಾಡಿರುತ್ತಾರೆ. ಈ ಮೂಲಕ ಶ್ರೀ ಕ್ಷೇತ್ರ ಹೊಠಜಿ ಶ್ರೀ ದೇವಿಯ ಕ್ಷೇತ್ರಕ್ಕೆ ತಲುಪುತ್ತಾರೆ. ಈ ಸಂದರ್ಭದಲ್ಲಿ ಧರಣೇಂದ್ರ ಪುಟ್ಟಣ್ಣವರ, ಬಾಹುಬಲಿ ಧರಣ್ಣಪ್ಪನವರ, ಪಾಯಪ್ಪ ಬ್ಯಾಹಟ್ಟಿ, ರಮೇಶ ಗಂಗಣ್ಣವರ, ಚಂದ್ರು ವೈಗುಡ್ಡಿ ಸೇರಿದಂತೆ ನೂರಾರು ಪದ್ಮಾವತಿ ದೇವಿಯ ಭಕ್ತಾದಿಗಳು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 