ಜೆ.ಎಸ್‌.ಎಸ್ ಶಾಲಾ ಮಕ್ಕಳು ಜಿಮ್ನಾಸ್ಟಿಕ್‌ನಲ್ಲಿ ಸಾಧನೆ

ಜೆ.ಎಸ್‌.ಎಸ್ ಶಾಲಾ ಮಕ್ಕಳು ಜಿಮ್ನಾಸ್ಟಿಕ್‌ನಲ್ಲಿ ಸಾಧನೆ JSS school children excel in gymnastics

ಧಾರವಾಡ 14: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರ ಮತ್ತು ಕರ್ನಾಟಕ ಒಲಿಂಪಿಕ್ ಸಂಸ್ಥೆ ವತಿಯಿಂದ ಬೆಂಗಳೂರಿನಲ್ಲಿ ನಡೆದ 4ನೇ ಮಿನಿ ಕರ್ನಾಟಕ ಕ್ರೀಡಾಕೂಟದ ಜಿಮ್ನಾಸ್ಟಿಕ ಕ್ರೀಡೆಯಲ್ಲಿ ಜನತಾ ಶಿಕ್ಷಣ ಸಮಿತಿ ವಿವಿಧ ಶಾಲೆಯ ಮಕ್ಕಳು 1 ಬಂಗಾರ 1 ಬೆಳ್ಳಿ 17 ಕಂಚು ಪದಕಗಳನ್ನು ಪಡೆದಿದ್ದಾರೆ. ಸಾಧನೆಗೈದ ಮಕ್ಕಳನ್ನು ಜೆ.ಎಸ್‌.ಎಸ್ ನ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದ, ಆಡಳಿತಾಧಿಕಾರಿಗಳಾದ ಶ್ರೀ ಅರಿಹಂತ ಪ್ರಸಾದ, ಮಹಾವಿರ ಉಪಾದ್ಯೆ, ಸಾಧನಾ. ಎಸ್, ರೇಣು ಪಾಟೀಲ್, ತ್ರಿವೇಣಿ. ಆರ್ ಎಲ್ಲ ಶಿಕ್ಷಕ ಹಾಗು ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.