ಮಾನವೀಯ ಮೌಲ್ಯಗಳನ್ನು ಮೀರಿಸುವ ಜೇಸಿ ಸಂಸ್ಥೆಯಾಗಿದೆ: ಅಜಯ ಚಿನ್ನಿಕಟ್ಟಿ
JC is an organization that transcends human values: Ajay Chinnikatty
ರಾಣೇಬೆನ್ನೂರು 22: ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಇವೆರಡರ ಮಧ್ಯೆ ಬದುಕು ಸಾಗಿಸುವುದೇ ನಿಜವಾದ ಮಾನವೀಯ ಧರ್ಮವಾಗಿದೆ. ಎಂದು ಜೆಸಿ ತರಬೇತುದಾರ ಅಜಯ್ ಚಿನ್ನಿಕಟ್ಟಿ ಹೇಳಿದರು.
ಅವರು, ಇಲ್ಲಿನ ವಿಹಾನ್ ಸಭಾಭವನದಲ್ಲಿ ಜೆಸಿ ಸಂಸ್ಥೆಯ 2024-25 ಪದಾಧಿಕಾರಿಗಳ, ಸೇವಾ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಮನುಷ್ಯ ಸಂಘಜೀವಿ, ಎಂದಿಗೂ ಒಂಟಿಯಲ್ಲ, ಸದಾಕಾಲವು ಜಂಟಿಯಾಗಿಯೇ ಇರಬೇಕು ಇದರಿಂದ ಮಾನಸಿಕ ಶಾಂತಿ ಮತ್ತು ನೆಮ್ಮದಿ ಸಾಧ್ಯವಿದೆ. ಜೆಸಿ ಸಂಸ್ಥೆ ವ್ಯಕ್ತಿತ್ವ ನಿರ್ಮಿಸುವ ಬಹು ದೊಡ್ಡ ಪಾತ್ರ ವಹಿಸುವ ದೇಶದ ಅಪ್ರತಿಮ ಸಂಸ್ಥೆಯಾಗಿದೆ ಎಂದರು.
ಮಾನವನ ಸಮಗ್ರ ವಿಕಾಸತೆಯೇ ಜೆಸಿ ಸಂಸ್ಥೆಯ ಮುಖ್ಯ ಧ್ಯೇಯ ವಾಕ್ಯವಾಗಿದೆ ಎಂದ ಅವರು. ತಮಗೆ ಮಾತು ಕಲಿಸಿದ ಸಂಸ್ಥೆ ಇದಾಗಿದೆ. ತಮಗೆ ಸಹಕಾರ ನೀಡಿದ ಎಲ್ಲರನ್ನು ಅಭಿನಂದಿಸಿದರು.
ಸಂಸ್ಥೆ ಸಮಾಜ ಮತ್ತು ವ್ಯಕ್ತಿತ್ವ ವಿಕಾಸತೆ ಕುರಿತು ಜೆಸಿ ವಲಯಾಧ್ಯಕ್ಷ ಪ್ರಭುಲಿಂಗಪ್ಪ ಹಲಗೇರಿ ಅವರು ಸಾಧ್ಯಂತವಾಗಿ ಮಾತನಾಡಿದರು. ಮಾಜಿ ಅಧ್ಯಕ್ಷ ಶಿವಶಂಕರ್ ಕೆ, ವಿದ್ಯಾಧರ ಹಲಗೇರಿ, ಕಾರ್ಯದರ್ಶಿ ಇಬ್ರಾಹಿಂ ನೀಲಗಾರ್, ವಿ. ಎಸ್. ಹಿರೇಮಠ, ಲಕ್ಷ್ಮಿಕಾಂತ್ ಹಲಗೂರು, ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 