ಧರ್ಮಸ್ಥಳಕ್ಕೆ ಚ್ಯುತಿ ಬರೋ ಕೆಲಸ ಆಗಬಾರದು: ಈಶ್ವರ​‍್ಪ

ಧರ್ಮಸ್ಥಳಕ್ಕೆ ಚ್ಯುತಿ ಬರೋ ಕೆಲಸ ಆಗಬಾರದು: ಈಶ್ವರ​‍್ಪ It should not happen that the fall of Dharmasthala will happen: Ishwarpa

ಧರ್ಮಸ್ಥಳಕ್ಕೆ ಚ್ಯುತಿ ಬರೋ ಕೆಲಸ ಆಗಬಾರದು: ಈಶ್ವರ​‍್ಪ 

ಬಳ್ಳಾರಿ   06:   ಧರ್ಮಸ್ಥಳದಲ್ಲಿ ಅಸಹಜ ಸಾವುಗಳ ಕುರಿತು ಎಸ್ಸ್‌ಐಟಿಯಿಂದ ತನಿಖೆ ನಡೆಸುತ್ತಿದೆ. ಯಾವುದೇ ಅನುಮಾನ ಉಳಿಯಕೂಡದು ಪ್ರಭಾವಿ ವ್ಯಕ್ತಿಗಳು ಹಿಂದೆ ಇದ್ದಾರೆ, ಪೊಲೀಸರಿದ್ದಾರೆಹೌದೋ ಅಲ್ಲವೋ ಚರ್ಚೆಯಾಗಬೇಕು. ತನಿಖೆಯಾಗಬೇಕು.ಒಮ್ಮೆ ಎಲ್ಲವೂ ಕ್ಲಿಯರ್ ಅಗಿಬಿಡಲಿ. ಆದ್ರೇ ಧರ್ಮಸ್ಥಳಕ್ಕೆ ಚ್ಯುತಿ ಬರೋ ಕೆಲಸ ಆಗಬಾರದು. ಧರ್ಮಸ್ಥಳ ಎಂದ್ರೇ ಹಿಂದೂ ಶ್ರದ್ಧಾಕೇಂದ್ರ ಅದಕ್ಕೆ ದಕ್ಕೆಯಾಗಬಾರದು.ಅ ರೀತಿಯಲ್ಲಿ ತನಿಖೆ ನಡೆದು ಸತ್ಯಾಂಶ ಹೊರಬರಬೇಕು ಎಂದು ಮಾಜಿ ಸಚಿವ ಕೆ.ಎಸ್‌. ಈಶ್ವರ​‍್ಪ ಹೇಳಿದ್ದಾರೆ. 

ನಗರದಲ್ಲಿಂದು ತಮ್ಮನ್ನು ಭೇಟಿ ಮಾಡಿದ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು. ಯಾರೊಬ್ಬರೂ ಬಿಜೆಪಿ ವಿರೋಧಿಗಳಲ್ಲ, ಪಕ್ಷದಲ್ಲಿ ಪ್ರತ್ಯೇಕ ಬಣವಿಲ್ಲ. ಆದ್ರೇ ಎಲ್ಲರದ್ದೂ ಒಂದೇ ಮಾತು ಬಿಜೆಪಿ ಶುದ್ದೀಕರಣವಾಗಬೇಕು ಎನ್ನುವ ಮೂಲಕ. ಪರೋಕ್ಷವಾಗಿ ಲಿಂಬಾವಳಿ, ಜಾರಕಿಹೊಳಿ, ಕುಮಾರ ಬಂಗಾರ​‍್ಪ ಟೀಂನ್ನು ಬೆಂಬಲಿಸಿದ್ದಾರೆಹೈಕಮೆಂಡ್ ಲೇವಲ್ ನಲ್ಲಿ ಯತ್ನಾಳ, ಈಶ್ವರ​‍್ಪ ಕರೆತರೋ ಬಗ್ಗೆ ಚರ್ಚೆ ನಡೆಯುತ್ತಿರೋದು ನನಗೆ ಗೊತ್ತಿಲ್ಲ. ನಾನು ಯಾ ಟೀಂ ಜೊತೆಗೆ ಗುರುತಿಸಿಕೊಳ್ಳಲ್ಲ ಮತ್ತು ಹೋಗುವುದಿಲ್ಲ.ನನ್ನದು ಬಿಜೆಪಿ ಟೀಂ ಅಷ್ಟೇ, ಅದ್ರೆ ಅದು ಶುದ್ಧೀಕರಣ ಆಗಬೇಕೆಂದು ಹೊರ ಬಂದಿರುವೆ. ಶುದ್ಧೀಕರಣ ಅಗುವ ಕೆಲಸವಾಗ್ತಿದೆ. ಬಿಜೆಪಿ ಬಿಟ್ಟು ನಾನೆಲ್ಲಿಗೆ ಹೋಗಲಿ. ರಮೇಶ್ ಜಾರಕಿಹೊಳಿ, ಲಿಂಬಾವಳಿ ಪ್ರತಾಪ್ ಸಿಂಹ ಎಲ್ಲರೂ ಬಿಜೆಪಿಯವರೇ. ಬಿಜೆಪಿ ಸರಿಹೋಗಬೇಕೆ ಎನ್ನುವ ಉದ್ದೇಶ ಎಲ್ಲರದ್ದಾಗಿದೆ.ಬಿಜೆಪಿ ವಿರುದ್ಧ ಹಿಂದುತ್ವದ ವಿರುದ್ಧ, ಯಾರೊಬ್ಬರೂ ಇಲ್ಲ. ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ವ್ಯವಸ್ಥೆ ಸರಿಯಲ್ಲ ಎನ್ನುವದು ಎಲ್ಲರ ಅಭಿಪ್ರಾಯ ಸರಿ ಹೋಗುವ ವಿಶ್ವಾಸವಿದೆ. ಹತ್ತಾರು ವರ್ಷ ತಪಸ್ಸು ಮಾಡಿ ಕಟ್ಡಿರೋ ಪಕ್ಷವಿದು ತಪಸ್ಸಿಗೆ ಫಲವಿದೆ ಸರಿ ಹೋಗುವ ವಿಶ್ವಾಸವಿದೆಂದರು.ಈ ವೇಳೆ ಕೆ.ಎ.ರಾಮಲಿಂಗಪ್ಪ ಮೊದಲಾದವರು ಇದ್ದರು.