ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಈರಗೌಡ ಪಾಟೀಲ ಚಾಲನೆ

ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಈರಗೌಡ ಪಾಟೀಲ ಚಾಲನೆ Iragowda Patil launches International Yoga Day celebrations

ರಾಯಬಾಗ, 21 : ದೈಹಿಕ ಸದೃಡತೆಗಾಗಿ ಮತ್ತು ಮಾನಸಿಕ ನೆಮ್ಮದಿ ಪಡೆಯಲು ಯೋಗ ಸಹಾಯಕಾರಿಯಾಗಿದೆ ಎಂದು ಆದರ್ಶ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಈರಗೌಡ ಪಾಟೀಲ ಹೇಳಿದರು.  

ಶನಿವಾರ ತಾಲೂಕಿನ ಬಾವನಸೌಂದತ್ತಿ ಗ್ರಾಮದ ಆದರ್ಶ ಶಿಕ್ಷಣ ಸಂಸ್ಥೆಯ ಹೊಸ ಕನ್ನಡ ಮಾಧ್ಯಮ ಅನುದಾನಿತ ಪ್ರಾಥಮಿಕ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ನಿತ್ಯ ಯೋಗ ಮಾಡುವುದರಿಂದ ಆರೋಗ್ಯಯುತ ಜೀವನ ನಡೆಸಲು ಸಾಧ್ಯ. ನಮ್ಮ ಪ್ರಾಚೀನ ಋಷಿ ಮುನಿಗಳು ಯೋಗ ಸಾಧನೆಯಿಂದ ನೂರಾರು ವರ್ಷಗಳ ಕಾಲ ಶಾಂತಿ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು. ಕೇವಲ ಒಂದು ದಿನ ಯೋಗ ಮಾಡದೇ, ನಿತ್ಯ ಯೋಗವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.  

ರಾಯಬಾಗ ಪಟ್ಟಣದ ಯೋಗ ತರಬೇತಿದಾರ ಗಣೇಶ ಅನ್ವೇಕರ ಅವರು ವಿದ್ಯಾರ್ಥಿಗಳಿಗೆ ಯೋಗ ಪ್ರಾತ್ಯಕ್ಷಿಕೆ ಮೂಲ ಆಸನಗಳನ್ನು ತಿಳಿಸಿಕೊಟ್ಟರು.  

ಕಾರ್ಯಕ್ರಮದಲ್ಲಿ ಗ್ರಾ.ಪಂ.ಉಪಾಧ್ಯಕ್ಷ ಅಜಾದ ತಾಶಿವಾಲೆ, ಕುಮಾರ ಕಾಮಗೌಡ, ಅರಿಹಂತ ಕಾಮಗೌಡ, ಮಹಾದೇವ ಮಂಗಸೂಳೆ, ಡಾ.ರಾಮಪ್ಪ ತಮದಡ್ಡಿ, ಉತ್ತಮ ಕಾಮಗೌಡ, ಸಾಯಿಬರಾವ ದೇಸಾಯಿ, ಅಜೀತ ಅರಗೆ, ಅನೀಲ ಶಿಂಧೆ, ರಂಜಾನ ಮಕಾಂದಾರ, ಮುಖ್ಯ ಶಿಕ್ಷಕ ಅರುಣ ಸಲಗರೆ, ಎಸ್‌.ಬಿ.ಬೆನ್ನಾಡೆ, ಸೌಮ್ಯಾ ಅನ್ವೇಕರ ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು.  

ಡಿ.ಆರ್‌.ಭೆಂಡೆ ಸ್ವಾಗತಿಸಿದರು, ಸಾವಿತ್ರಿ ಗಂಗಾಯಿ ನಿರೂಪಿಸಿದರು, ಎಸ್‌.ಎಸ್‌.ರುಪ್ಪಾಳೆ ವಂದಿಸಿದರು.