ಸಾವಿತ್ರಿಬಾಯಿ ಫುಲೆ ಜಯಂತಿ ಪ್ರಯುಕ್ತ ಕವನ ಸ್ಪರ್ಧೆಗೆ ಆಹ್ವಾನ

ಸಾವಿತ್ರಿಬಾಯಿ ಫುಲೆ ಜಯಂತಿ ಪ್ರಯುಕ್ತ ಕವನ ಸ್ಪರ್ಧೆಗೆ ಆಹ್ವಾನ Invitation for poetry competition on the occasion of Savitribai Phule Jayanti

  

ಧಾರವಾಡ 23: 19ನೇ ಶತಮಾನದ ಬ್ರಿಟಿಷ್ ಆಳ್ವಿಕೆಯ ಭಾರತ ದೇಶದ ​‍್ರ​‍್ರಥಮ ಶಿಕ್ಷಕಿ, ಸಮಾಜ ಸುಧಾರಕಿ, ಕವಯಿತ್ರಿ ಸಾವಿತ್ರಿಬಾಯಿ ಫುಲೆಯವರ 195ನೇಯ ಜಯಂತಿ ಪ್ರಯುಕ್ತ ಧಾರವಾಡದ ಗಣಕರಂಗ ಸಂಸ್ಥೆಯು ಮುಕ್ತ ಕವಿಗೋಷ್ಠಿಯನ್ನು “ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆ” ಶೀರ್ಷಿಕೆಯೊಂದಿಗೆ ಕನ್ನಡದಲ್ಲಿ ಆಯೋಜಿಸಿದೆ. ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆಯವರ ಜೀವನ, ಹೋರಾಟದ ಕುರಿತ 20ರಿಂದ 30ಸಾಲುಗಳ ಮಿತಿಯ ಕವನ ಕಳಿಸಲು ಕೊನೆಯ ದಿನಾಂಕ : 31-12-2025. ಪ್ರಥಮ ಬಹುಮಾನ ನಗದು ರೂ.2000/-, ದ್ವಿತೀಯ ಬಹುಮಾನ ನಗದು ರೂ.1000/- ಮತ್ತು ತೃತೀಯ ಬಹುಮಾನ ನಗದು ರೂ.500/- ಜೊತೆಗೆ ಐವರು ಕವಿಗಳಿಗೆ ಮೆಚ್ಚುಗೆ ಬಹುಮಾನ ನೀಡಲಾಗುವುದು. ವಿಜೇತರಿಗೆ ಮತ್ತು ಭಾಗವಹಿಸಿದ ಎಲ್ಲರಿಗೂ ಗಣಕರಂಗ ಇ-ಪ್ರಮಾಣಪತ್ರ ನೀಡಿ ಗೌರವಿಸಲಾಗುವುದು. ಕವನ ಸ್ಪರ್ಧೆಯ ನಿಯಮಗಳು ಮತ್ತು ಹೆಚ್ಚಿನ ಮಾಹಿತಿಗೆ 9845109480, 9902674005, 7353359969, 9740691429 ್ಘ 9620685599 ಈ ಸಂಖ್ಯೆಗಳಿಗೆ ಸಂಪರ್ಕಿಸಲು ವಿನಂತಿಸಲಾಗಿದೆ.