ಹಿರೇಬೆಂಡಿಗೇರಿ ಹಿರೇಮಠದಲ್ಲಿ ಸರ್ವಧರ್ಮ ಸಾಮೂಹಿಕ ವಿವಾಹ ಹಾಗೂ ರಥೋತ್ಸವ
Interfaith mass wedding and chariot festival at Hirebendigeri Hiremath
ಶಿಗ್ಗಾವಿ 18: ಯುಗಾದಿ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ಹಿರೇ ಬೆಂಡಿಗೇರಿ ಹಿರೇಮಠದಲ್ಲಿ ಸರ್ವಧರ್ಮ ಸಾಮೂಹಿಕ ವಿವಾಹ ಹಾಗೂ ವಿಶ್ವರಾಧ್ಯರ ರಥೋತ್ಸವ ಜರಗುವವು ಎಂದು ಭಾವೈಕ್ಯ ಹಿರೇಮಠದ ಸಮಿತಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು. ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದಲ್ಲಿ ದಿ 19 ರಂದು ಗುರುವಾರ ಮಧ್ಯಾಹ್ನ 12:30 ಕ್ಕೆ ಸರ್ವಧರ್ಮ ಸಾಮೂಹಿಕ ವಿವಾಹ ಜರುಗುವವು ಹಾಗೂ ಅಂದೇ ಸಾಯಂಕಾಲ 4:00 ಗಂಟೆಗೆ ಶ್ರೀ ವಿಶ್ವರಾಧ್ಯರ ರಥೋತ್ಸವ ಜರಗುವುದು. ಅಲ್ಲದೇ ಇವೆಲ್ಲ ಕಾರ್ಯಕ್ರಮಗಳು ಗಂಜಿಗಟ್ಟಿ ಶ್ರೀಗಳಾದ ಷ.ಬ್ರ. ಶಿವಲಿಂಗೇಶ್ವರ ಶ್ರೀಗಳು. ಬಂಕಾಪುರ ಅರಳೆಲೆ ಮಠದ ಷ.ಬ್ರ.ರೇವಣಸಿದ್ದೇಶ್ವರ ಶ್ರೀಗಳು. ಹಿರೇಮಣಿಕಟ್ಟಿ ಷ. ಬ್ರ. ವಿಶ್ವರಾಧ್ಯ ಶ್ರೀಗಳು.
ಶಿಗ್ಗಾವಿ ವಿರಕ್ತ ಮಠದ ಮ. ನಿ. ಪ್ರ. ಸಂಗನಬಸವ ಶ್ರೀಗಳು.ಹಿರೇ ಬೆಂಡಿಗೇರಿ ಹಿರೇಮಠದ ನೂತನ ಷ. ಬ್ರ.ವಿಶ್ವೇಶ್ವರ ಶ್ರೀಗಳು. ಹಾಗೂ ಹರ ಗುರು ಚರಮೂರ್ತಿಗಳು. ರಾಜಕೀಯ ಮುಖಂಡರು ಸಮಾಜ ಸೇವಕರು ತಾಲೂಕಿನ ಎಲ್ಲ ಸ್ತರದ ನಾಯಕರು ಹಾಗೂ ಹಿರೇಬೆಂಡಿಗೇರಿ ಗ್ರಾಮದ ಸಮಸ್ತ ನಾಗರಿಕರು ತಾಯಂದಿರು ಭಕ್ತರು ಪಾಲ್ಗೊಳ್ಳುವರು ಎಂದರು . ಈ ಸಂದರ್ಭದಲ್ಲಿ ವಿಶ್ವರಾಧ್ಯರ ರಥೋತ್ಸವ ದಾನ ಮಾಡಿದ ಜನಾಬ್, ಮೌಲಾಸಾಬ್ ತಹಸಿಲ್ದಾರ್. ಬಸವರಾಜ್ ಹುಬ್ಬಳ್ಳಿ , ವೇದಮೂರ್ತಿ ಮೃತ್ಯುಂಜಯ ಹಿರೇಮಠ. ಬಸಪ್ಪ ಬಂಗಿ. ಶೇಖಪ್ಪ ನಾಶಿಪುಡಿ. ಹನುಮಂತಪ್ಪ ಮಂಟೂರ್. ಯಂಕಪ್ಪ ಮಂಟೂರ್. ಕೃಷ್ಣಪ್ಪ ಬಡಿಗೇರ್. ಈರ್ಪ ಮಲ್ಲೂರ್. ಗುರುಪಾದ ಲಂಗೂಟಿ. ಈರ್ಪ ನಾಗಪ್ಪನವರ್. ಗೋವಿಂದಪ್ಪ ಧರ್ಮಣ್ಣವರ ಸೇರಿದಂತೆ ಇನ್ನೂ ಅನೇಕ ಮುಖಂಡರು ಪಾಲ್ಗೊಂಡಿದ್ದರು
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 