ಜಲಾಶಯ ನೀರನ್ನು ನದಿಗೆ ಬಿಡುವ ಬದಲು ಕಾಲುವೆ ಬಿಡಿ
Instead of releasing the reservoir water into the river, release it into a canal
ಕಂಪ್ಲಿ 05: ತುಂಗಭದ್ರಾ ಜಲಾಶಯದ ಹೆಚ್ಚಿನ ನೀರನ್ನು ನದಿಗೆ ಬಿಡುವ ಬದಲು ಜು.10ರಿಂದ ಎಚ್ಎಲ್ಸಿ ಕಾಲುವೆ ಬಿಟ್ಟು, ಡಿ.3, ಡಿ6, ಡಿ.7ಗೆ ನೀರು ಹರಿಸಬೇಕೆಂದು ರೈತ ಮುಖಂಡ ಶ್ರೀನಾಥ ಹೇಳಿದರು.
ಅವರು ಶನಿವಾರ ತಾಲೂಕಿನ ಸುಗ್ಗೇನಹಳ್ಳಿ ಗ್ರಾಪಂಯ ಶ್ರೀರಾಮರಂಗಾಪುರ(ಕೊಟ್ಟಾಲ್) ಗ್ರಾಮದ ಶ್ರೀಕೋದಂಡರಾಮ ದೇವಸ್ಥಾನ ಬಳಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಬಾರಿ ಸರಿಯಾದ ಮಳೆ, ಬೆಳೆ ಇಲ್ಲದೇ ಮತ್ತು ಬೆಂಬಲ ಬೆಲೆ ದೊರಕದ ಹಿನ್ನಲೆ ರೈತರು ಸಾಲದ ಸುಳಿಗೆ ಸಿಲುಕಿದ್ದಾರೆ. ಈ ಬಾರಿಯಾದರೂ ಎರಡು ಬೆಳೆಗೆ ನೀರು ಸಿಗಬಹುದು ಎನ್ನುವಷ್ಟರಲ್ಲಿ ಟಿಬಿ ಬೋರ್ಡ್ನವರು ಹೊಸ ಕ್ರಸ್ ಗೇಟ್ ಅಳವಡಿಸುವ ಹಿನ್ನಲೆ ಮುಂಗಾರು ಬೆಳೆಗೆ ಮಾತ್ರ ನೀರು ಹರಿಸಲು ನಿರ್ಧಸಿದ್ದಾರೆ. ಆದರೆ, ಈಗಾಗಲೇ ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚಾಗಿ ನದಿಗೆ ಹರಿಸಿ ಪೋಲು ಮಾಡಲಾಗುತ್ತಿದೆ. ಅದೇ ನೀರನ್ನು ಕಾಲುವೆಗಳಿಗೆ ಹರಿಸಿದರೆ ಮೊದಲ ಬೆಳೆಯನ್ನು ಆದಷ್ಟು ಬೇಗ ತೆಗೆದುಕೊಳ್ಳಬಹುದು. ಎಚ್ಎಲ್ಸಿ ಕಾಲುವೆ ಆಶ್ರಿತ ಡಿ3 ವ್ಯಾಪ್ತಿಯಲ್ಲಿ ಬರುವ ಶ್ರೀರಾಮರಂಗಾಪುರ, ಸುಗ್ಗೇನಹಳ್ಳಿ, ದರೋಜಿ, ಮಾದಾಪುರ, ಹೊನ್ನಳ್ಳಿ, ಮಾವಿನಹಳ್ಳಿ, ಗೋನಾಳ್, ಹಂಪಾದೇವಹಳ್ಳಿ ಭಾಗಕ್ಕೆ ಹಾಗೂ ಡಿ6ನ ಏಳುಬೆಂಚಿ, ಮಾದಾಪುರ, ಹೊನ್ನಳ್ಳಿ ಹಾಗೂ ಡಿ7ನ ಬೋರಿಂಗ್ ಕ್ಯಾಂಪ್, ಸುಗ್ಗೇನಹಳ್ಳಿ, ಶ್ರೀರಾಮರಂಗಾಪುರ ಪ್ರದೇಶದ ರೈತರ ಜಮೀನಿಗಳಿಗೆ ನೀರು ಹರಿಯುತ್ತದೆ. ಆದರೆ, ಕೆಳ ಭಾಗದಲ್ಲಿರುವ ಈ ರೈತರಿಗೆ ಜಮೀನಿಗಳಿಗೆ ತಲುಪಬೇಕಾಗಿದೆ. ಆದ್ದರಿಂದ ಟಿಬಿ ಬೋರ್ಡ್ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರೈತರ ಬಗ್ಗೆ ಹೆಚ್ಚಿನ ಕಾಳಜಿವಹಿಸಿ, ನದಿಗೆ ನೀರು ಪೋಲು ಮಾಡುವುದನ್ನು ಸ್ಥಗಿತಗೊಳಿಸಿ, ಎಚ್ಎಲ್ಸಿ ಕಾಲುವೆ ಮೂಲಕ ಕೆಳ ಹಂತದ ರೈತರ ಹೊಲಗದ್ದೆಗಳಿಗೆ ನೀರು ಹರಿಸಿ, ಮೊದಲ ಬೆಳೆ ಬೆಳೆಯಲು ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಭಾಸ್ಕರ್, ರಾಮಾಂಜಿನಿ, ರಾಧಾಕೃಷ್ಣ, ಎಂ.ಮಂಜುನಾಥ, ಸಾಯಿ, ಯರೆ್ರ್ಪ, ಪಿ.ಶ್ರೀನಿವಾಸಲು, ತಾಳೂರು ಶ್ರೀನಿವಾಸಲು ಸೇರಿದಂತೆ ಇತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 