ಸಂಗೋಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ
Installation of the statue of Sangolli Rayanna
ಸಂಗೋಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ
ತಾಂಬಾ 21 : ಗ್ರಾಮದ ಕ್ರಾಂತೀವೀರ ಸಂಗೋಳ್ಳಿ ರಾಯಣ್ಣ ಯುವ ಘಟಕದಿಂದ ದಿ.23 ರಂದು ಬೆಳಿಗ್ಗೆ 8 ಗಂಟೆಗೆ ಬಂಥನಾಳದ ವೃಷಭಲಿಂಗೇಶ್ವರ ಮಹಾಶಿವಯೋಗಿಗಳ ಸಾನಿದ್ಯದಲ್ಲಿ ಕ್ರಾಂತೀವೀರ ಸಂಗೋಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವದು.ಗೋಳಸಾರದ ಅಭೀನವ ಪುಂಡಲಿಂಗ ಮಾಹಾರಾಜರು ಸಮ್ಮುಖ ವಹಿಸುವರು. ಪಟ್ಟದ ಮಾರಾಯರಾದ ಭೂಸಪ್ಪ ಪೂಜಾರಿ, ಶಿವಲಿಂಗಪ್ಪ ಪೂಜಾರಿ, ನಂದಪ್ಪ ಬೀಸನಾಳ ಸಾನಿದ್ಯ ವಹಿಸುವರು. ಸಿಂದಗಿ ಶಾಸಕ ಅಶೋಕ ಮನಗೂಳಿ ಉದ್ಘಾಟಿಸುವರು ಗ್ರಾಪಂ ಅಧ್ಯಕ್ಷ ಆಸ್ಮಾ ರಜಾಕಸಾಬ ಚಿಕ್ಕಗಸಿ ಅಧ್ಯಕ್ಷತೆ ವಹಿಸುವರು, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಜೋತಿ ಬೆಳೆಗಿಸುವರು, ಮಾಜಿ ಶಾಸಕ ರಮೇಶ ಭೂಸನೂರ, ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ, ಮುಖ್ಯ ಅಥಿತಿಗಳಾಗಿ ಆಗಮಿಸುವರು ರಾಮಚಂದ್ರ ದೋಡಮನಿ, ರಾಜು ಗಂಗನಳ್ಳಿ, ರಾಚಪ್ಪ ಗಳೇದ, ಏಗಪ್ಪ ಹೋರಪೆಟಿ, ಸಿದ್ದು ಹತ್ತಳ್ಳಿ, ಪರಸು ಬೀಸನಾಳ, ಮಹ್ಮದ ದಡೆದ, ಅರ್ಜುನ ಚಟ್ಟರಕಿ, ಆರ್.ಎಸ್.ಪೂಜಾರಿ, ಎಸ್.ಎಸ್.ಕನಾಳ, ಸಿದ್ದು ಸುರಗಿಹಳ್ಳಿ, ಜೆ.ಆರ್.ಪೂಜಾರಿ, ಕೆ.ಎಸ್.ಉಕ್ಕಲಿ, ಅಪ್ಪಣ್ಣ ನಂದರಗಿ, ಎಸ್.ಎಸ್,ಹಿರೇಕುರಬರ, ಶ್ರೀನಾಥ ಚಟ್ಟರಕಿ ಸೇರಿದಂತೆ ಮತ್ತಿತರರು ಉಪಸ್ಥಿತರಿರುವರು. ನಂತರ ಅನೇಕ ವಾದ್ಯ ವೈಭವಗಳೋಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೇರವಣಿಗೆ ಮಾಡಲಾಗುವದು. ಸಂಜೆ 5 ಗಂಟೆಗೆ ಮೂರ್ತಿ ಉದ್ಘಾಟನೆ ಇಬ್ಬನಿ ಸಿಂಚನ ಮೇಲೋಡಿಸ್ ಅವರಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ ಎಂದು ಕ್ರಾಂತೀವೀರ ಸಂಗೋಳ್ಳಿ ರಾಯಣ್ಣ ಯುವ ಘಟಕದ ಅಧ್ಯಕ್ಷ ರಾಯಗೋಂಡ ಬೀಸನಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 