ವಿಶ್ವಕರ್ಮ ಪಂಚಲೋಹ ಉತ್ಸವ ಮೂರ್ತಿಯ ಪ್ರತಿಷ್ಠಾಪನೆ

ವಿಶ್ವಕರ್ಮ ಪಂಚಲೋಹ ಉತ್ಸವ ಮೂರ್ತಿಯ ಪ್ರತಿಷ್ಠಾಪನೆ Installation of the Vishwakarma Panchaloha idol

ರಾಯಬಾಗ  31: ತಾಲ್ಲೂಕಿನ ಬಾವನಸೌಂದತ್ತಿ ಗ್ರಾಮದ ವಿಶ್ವಕರ್ಮ  ಸಮಾಜ ಸಂಘದ  ವತಿಯಿಂದ ವಿಶ್ವಕರ್ಮ ಪಂಚಲೋಹ ಉತ್ಸವ ಮೂರ್ತಿಯ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮವನ್ನು ನವೆಂಬರ್ 2 ಹಾಗೂ 3 ರಂದು  ಗ್ರಾಮದಲ್ಲಿ ಆಯೋಜಿಸಲಾಗಿದೆ.ನ.2 ರಂದು ಬೆಳಿಗ್ಗೆ 6 ಗಂಟೆಗೆ  ಧ್ವಜಾರೋಹಣ,   ವಿಶ್ವಕರ್ಮ ಪಂಚಲೋಹ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ಬೆಳಿಗ್ಗೆ 8 ಗಂಟೆಗೆ  ಮಹಿಳೆಯರಿಂದ ಕುಂಭ ಮೇಳ ಹಾಗೂ ವಿವಿಧ ವಾದ್ಯಗೊಳೊಂದಿಗೆ  ಪ್ರಮುಖ ಬೀದಿಯಿಂದ ಮೆರವಣಿಗೆ   ನಡೆಯಲಿದೆ.ನ.3 ರಂದು  ಬೆಳಿಗ್ಗೆ 11 ಗಂಟೆಗೆ ಧರ್ಮ ಸಭೆ ಆಯೋಜಿಸಿದ್ದು,  ಈ ಕಾರ್ಯಕ್ರಮದಲ್ಲಿ ಎಕದಂಡಗಿ ಮಠ ಶಾಹಾಪುರದ    ಕಾಳಹಸ್ತೇಂದ್ರ ಸ್ವಾಮಿಜಿ,  ಬಾವನಸೌಂದತ್ತಿ ಓಂಕಾರ ಆಶ್ರಮದ    ಶಿವಶಂಕರ ಮಹಾಸ್ವಾಮಿಜಿಗಳು  ಸಾನಿಧ್ಯ ವಹಿಸುವರು. ವಿಶ್ವಕರ್ಮ ಸಮಾಜ ಸಂಘ ಅಧ್ಯಕ್ಷ  ಕುಮಾರ ರಾಮು ಬಡಿಗೇರ ಅಧ್ಯಕ್ಷತೆ ವಹಿಸುವರು. 

ಆದರ್ಶ ಶಿಕ್ಷಣ ಸಂಸ್ಥೆ ಅಧ್ಯಕ್ಷ ಈರಗೌಡ ಪಾಟೀಲ, ಸಿ.ಬಿ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ತಾತ್ಯಾಸಾಹೇಬ ಕಾಟೆ,  ಗ್ರಾ ಪಂ ಅಧ್ಯಕ್ಷ ರಾಮಚಂದ್ರ ಕಾಟೆ, ಉಪಾಧ್ಯಕ್ಷ ಆಜಾದ  ತಾಶೀವಾಲೆ, ಗ್ರಾ ಪಂ ಸದಸ್ಯರಾದ  ಧುಳಗೌಡ  ಪಾಟೀಲ,  ಅಜೀತ  ಖೆಮಲಾಪೂರೆ,  ಅನೀಲ  ಹಂಜೆ, ಹಾರೂಗೇರಿಯ ಪುರಸಭೆಯ ನಾಮನಿರ್ದೇಶಿತ ಸದಸ್ಯ ಕಲ್ಲಪ್ಪಾ  ಬಡಿಗೇರ,  ಪಂಚಲೋಹ ಮೂರ್ತಿಕಾರ ರಾಮಚಂದ್ರ  ಯರಕದಾವರ ಅವರು ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.