ಪಕ್ಷಗಳನ್ನು ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆ ಪ್ರಾರಂಭ

ಪಕ್ಷಗಳನ್ನು ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆ ಪ್ರಾರಂಭ Initiation of delisting of parties

ರಾಯಬಾಗ, 03 : ಮುಖ್ಯ ಚುನಾವಣೆ ಆಯುಕ್ತ ಜ್ಞಾನೇಶ್ ಕುಮಾರ ಅವರ ಅಧ್ಯಕ್ಷತೆಯಲ್ಲಿ 2019 ರಿಂದ ಕಳೆದ ಆರು ವರ್ಷಗಳಿಂದ ಒಂದೇ ಒಂದು ಚುನಾವಣೆಯಲ್ಲಿಯೂ ಸ್ಪರ್ಧಿಸುವ ಅಗತ್ಯ ಷರತ್ತುನ್ನು ಪೂರೈಸಲು ವಿಫಲವಾಗಿರುವ 345 ನೋಂದಾಯಿತ ಗುರುತಿಸಲಾಗದ ರಾಜಕೀಯ ಪಕ್ಷಗಳ (ಖಗಕಕ) ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ನೋಂದಾಯಿತ ಪಕ್ಷಗಳ ಪಟ್ಟಿಯಿಂದ "ಕರ್ನಾಟಕ ಸ್ವರಾಜ್ಯ ಪಕ್ಷ" ವನ್ನು ತೆಗೆದು ಹಾಕಲು ಪ್ರಸ್ತಾವ ಬಂದ ಹಿನ್ನೆಲೆಯಲ್ಲಿ ಬುಧವಾರ ರಾಯಬಾಗ ಕಂದಾಯ ನೀರೀಕ್ಷಕರು ಪಟ್ಟಣದ ಸಾಯಿನಗರದ ಚಿದಂಬರ ಕೃಪಾದಲ್ಲಿ ಸ್ಥಾನಿಕ ಪರೀಶೀಲನೆ ನಡೆಸಿದ್ದು, ಅಲ್ಲಿ "ಕರ್ನಾಟಕ ಸ್ವರಾಜ್ಯ ಪಕ್ಷ" ವು ಕಚೇರಿ ಕಾರ್ಯನಿರ್ವಹಿಸದೇ, ಅಲ್ಲಿ ಈಗ ಬಂಧನ ಬ್ಯಾಂಕ ಕಾರ್ಯ ನಿರ್ವಹಿಸುತ್ತಿರುವುದಾಗಿ ಕಂಡು ಬಂದಿರುವುದಾಗಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ