ಭಾರತಕ್ಕೆ ಶತ್ರುಗಳ ಕಣ್ಣಲ್ಲಿ ಕಣ್ಣಿಟ್ಟು ನೋಡಲು ತಿಳಿದಿದೆ; ಮೋದಿ
ನವದೆಹಲಿ, ಜೂ 28: ಭಾರತ ತನ್ನ ಸಶಸ್ತ್ರ ಪಡೆಯ ಧೈರ್ಯದ ಸ್ವಭಾವ ಮತ್ತು ಶೌರ್ಯವನ್ನು ಎಂದಿಗೂ ಮರೆಯುವುದಿಲ್ಲ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಭಾರತಕ್ಕೆ ಸ್ನೇಹಿಯಾಗಿರಲು ತಿಳಿದಿದೆ, ಅದೇ ರೀತಿ ಶತ್ರುಗಳ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಧೈರ್ಯವನ್ನೂ ಹೊಂದಿದೆ ಎಂದಿದ್ದಾರೆ. ತಮ್ಮ ಮಾಸಿಕ ಬಾನುಲಿ ಕಾರ್ಯಕ್ರಮ 'ಮನ್ ಕೀ ಬಾತ್'ನಲ್ಲಿ ಮಾತನಾಡಿದ ಅವರು, ಭಾರತ ನೆರೆ ಗಡಿ ವಿವಾದವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದು, ದೇಶ ಇನ್ನಷ್ಟು ಸದೃಢವಾಗಿ ಹೊರಹೊಮ್ಮಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಲಡಾಕ್ನಲ್ಲಿ, ನಮಗೆ ಸವಾಲೊಡ್ಡಿದವರಿಗೆ ಸಮರ್ಥ ಪ್ರತಿಕ್ರಿಯೆ ನೀಡಲಾಗಿದೆ. ನಮ್ಮ ಶೂರ ಯೋಧರು ಅತ್ಯುನ್ನತ ತ್ಯಾಗ ಮಾಡಿದ್ದಾರೆ, ಆದರೆ, ಎದುರಾಳಿ ಮೇಲುಗೈ ಸಾಧಿಸಲು ಅನುವು ಮಾಡಿಕೊಟ್ಟಿಲ್ಲ. ನಮಗೆ ಅವರನ್ನು ಕಳೆದುಕೊಂಡಿರುವ ನೋವಿದೆ. ಅವರ ಶೌರ್ಯವೇ ದೇಶದ ಶಕ್ತಿ ಎಂದರು. ಯೋಧರ ಕುಟುಂಬಗಳು ತಮ್ಮ ಕೆಚ್ಚೆದೆಯ ಪುತ್ರರ ಸರ್ವೋಚ್ಚ ತ್ಯಾಗ ಮತ್ತು ದೇಶದ ಬಗೆಗಿನ ಅವರ ಹೆಮ್ಮೆಯ ಆಂತರಿಕ ಪ್ರಜ್ಞೆ ನಿಜವಾದ ದೇಶದ ಶಕ್ತಿಯನ್ನು ರೂಪಿಸುತ್ತದೆ. ಭಾರತ ನಮ್ಮ ಧೈರ್ಯಶಾಲಿ ಹುತಾತ್ಮರಿಗೆ ನಮಸ್ಕರಿಸುತ್ತದೆ. ಅವರು ಯಾವಾಗಲೂ ಭಾರತವನ್ನು ಸುರಕ್ಷಿತವಾಗಿರಿಸಿದ್ದಾರೆ. ಅವರ ಶೌರ್ಯವನ್ನು ಯಾವಾಗಲೂ ನೆನಪಿಸಿಕೊಳ್ಳಲಾಗುವುದು ಎಂದರು. ಗಾಲ್ವಾನ್ ಗಣಿಯಲ್ಲಿ ಹುತಾತ್ಮರಾದ ಸೇನಾ ಯೋಧರಿಗೆ ಗೌರವ ತೋರಿದ ಮೋದಿ, ಈ ಸೇನಾ ಯೋಧರು ಯಾರಿಗೂ ತಾಯಿ ಭಾರತಿಯ ಘನತೆಗೆ ಕುಂದುಂಟು ಮಾಡಲು ಅವಕಾಶ ನೀಡಲಿಲ್ಲ ಎಂದರು. ಇದರಲ್ಲಿ ಭಾರತದ ಜನರು ಕೂಡ ಪಾಲ್ಗೊಳ್ಳಬೇಕು ಮತ್ತು ಇದೊಂದು ಅಗತ್ಯ ಚಳವಳಿಯಾಗಿದೆ ಎಂದು ಹೇಳಿದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 