ಅರಿಹಂತ ಪಿಯು ಹಾಗೂ ಪದವಿ ಮಹಾವಿದ್ಯಾಲಯದಲ್ಲಿ ಸ್ವಾತಂತ್ರ್ಯ ಸಂಭ್ರಮ
Independence Day celebrations at Arihant PU and Graduate College
ಮುದ್ದೆಬಿಹಾಳ 16: ಮುದ್ದೇಬಿಹಾಳದ ಅರಿಹಂತ ಪಿಯು ಹಾಗೂ ಪದವಿ ಮಹಾವಿದ್ಯಾಲಯದಲ್ಲಿ 79 ನೇ ವರ್ಷದ ಸ್ವಾತಂತ್ರ್ಯ ಮಹೋತ್ಸವವನ್ನು ಅತ್ಯಂತ ಗೌರವ ಹಾಗೂ ಸಂಭ್ರಮದೊಂದಿಗೆ ಆಚರಿಸಲಾಯಿತು.
ಸಂಸ್ಥೆಯ ಅದ್ಯಕ್ಷ ಮಹಾವೀರ ಬ. ಸಗರಿಯವರು ಧ್ವಜಾರೋಹಣವನ್ನು ನೆರೆವೇರಿಸಿ, ರಾಷ್ಟ್ರನಾಯಕರು ಸ್ವಾತಂತ್ರ್ಯ ಹೋರಾಟಗಾರರು, ವೀರಯೋಧರನ್ನು ಗೌರವಿಸಿ ನಿತ್ಯವು ದೇಶಕ್ಕಾಗಿ ದುಡಿಯುವ ಮನೋಭಾವನೆಯನ್ನು ಬೆಳೆಸಿಕೊಳ್ಳುವಂತೆ, ದೇಶ ನಿನಗೇನು ಮಾಡಿದೆ ಎನ್ನುವದಕ್ಕಿಂತ, ದೇಶಕ್ಕಾಗಿ ನೀನೇನು ಮಾಡೀದೀಯ ಎಂಬುದು ಮುಖ್ಯ ಎಂದು 1999 ರಿಂದ 2025 ರವರೆಗೆ ಸತತ 26 ನೇ ಬಾರಿಗೆ ಧ್ವಜಾರೋಹಣವನ್ನು ನೆರೆವೇರಿಸುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ, ಹೀಗೆ ತಾಯಿ ಭಾರತಾಂಭೆಯ ಸೇವೆಗೈಯುವ ಅವಕಾಶ ವಿದ್ಯಾರ್ಥಿಗಳಿಗೂ ಸಿಗಲಿ ಮತ್ತು ಈಗ ಜಗತ್ತೆ ಭಾರತದತ್ತ ತಿರುಗಿ ನೋಡುವಂತೆ ಮಾಡುವ ಶಕ್ತಿ ಪ್ರತಿಯೊಬ್ಬ ಭಾರತೀಯನಲ್ಲಿಯೂ ಇದೆ, ರಾಷ್ಟ್ರಗೀತೆ, ರಾಷ್ಟ್ರಧ್ವಜ ನಮ್ಮ ರಾಷ್ಟ್ರಾಭಿಮಾನದ ಸಂಕೇತ ಎಂದು ಮಾತನಾಡಿದರು.
ನಂತರ ಕಾಲೇಜಿನ ಪ್ರಾಚಾರ್ಯರಾದ ಪ್ರೊ ವಿ. ಎಂ. ಸಗರಿ, ಉಪನ್ಯಾಸಕರಾದ ಪ್ರೊ ಹೆಚ್. ಎಸ್. ಗೌಡರ ಮತ್ತು ಪ್ರೊ ರಾಜನಾರಾಯಣ ನಲವಡೆ ಅವರು ಭಾರತಕ್ಕೆ ಹೇಗೆ ಸ್ವಾತಂತ್ರ್ಯ ಬಂತು, ಇತಿಹಾಸವನ್ನು ಮೆಲಕು ಹಾಕಿ ವಿದ್ಯಾರ್ಥಿಗಳಿಗೆ ಮನ ಮಟ್ಟುವಂತೆ ಮಾತನಾಡಿದರು ಹಾಗೂ ದೇಶಪ್ರೇಮ ಎಲ್ಲರಲ್ಲಿಯೂ ಬಿತ್ತರಿಸಲಿ ಎಂದು ಮಾತನಾಡಿದರು.
ಉಪನ್ಯಾಸಕರಾದ ಜಿ.ಡಿ. ಬಡಿಗೇರ, ಅಶೋಕ ಹಡಪದ, ಶರೀಫ್ ನದಾಫ್, ಸಮೀರ ಬಾಗವಾನ, ಖಾಜಿ, ಪ್ರಭಾಕರ್, ಬಸವರಾಜ ಕತ್ತಿ, ಅಕ್ಷತಾ ಕುಟ್ಟೆ, ರೋಹಿನಿ ನಾಯ್ಕೋಡಿ, ಬಸಮ್ಮಾ ಹಲವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 