ಆಲಮೇಲದಲ್ಲಿ ಸ್ವಾತಂತ್ರ ದಿನಾಚರಣೆ

ಆಲಮೇಲದಲ್ಲಿ ಸ್ವಾತಂತ್ರ ದಿನಾಚರಣೆ  Independence Day celebration at Alamela

ಆಲಮೇಲ 16: ಭಾರತದ ಅತ್ಯಂತ ಮಹತ್ವವಾದ ಹಬ್ಬವೆಂದರೆ ಅದು ಭಾರತಕ್ಕೆ ಸ್ವಾತಂತ್ರ್ಯ ಬಂದ ದಿನ ಪ್ರತಿಯೊಂದು ಸರಕಾರಿ ಇಲಾಖೆ ಹಾಗೂ ಸಂಘ ಸಂಸ್ಥೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದಾರೆ.  

ಪಟ್ಟಣದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪಿಎಸ್‌ಐ ಅರವಿಂದ್ ಅಂಗಡಿ ಪೊಲೀಸ್ ಪರೇಡ್ ದೊಂದಿಗೆ ತಹಶೀಲ್ದಾರ ಧನಪಾಲ ಶೆಟ್ಟಿ 79ನೇ ದ್ವಜಾರೋಹಣ ಮಾಡಿ ಮಾತನಾಡಿದರು.  

ಎರಡು ನೂರು ವರ್ಗಳ ಪರೀಕೀಯರ ಕೈಯಲ್ಲಿ ಸಿಕ್ಕು ಪರದಾಡುತ್ತಿದ್ದೆವು ನಮ್ಮ ದೇಶಕ್ಕೆ  1947 ಆಗಸ್ಟ್‌ 15 ರಂದು ನಮಗೆ ಸ್ವಾತಂತ್ರ್ಯ ಸಿಕ್ಕಿತುವೆಂದು ಹೇಳಿದರು  

ಕಾರ್ಯಕ್ರಮದಲ್ಲಿ ಶಾಲೆಯ ಅನೇಕ ವಿದ್ಯಾರ್ಥಿಗಳು ತಮ್ಮ ನೃತ್ಯ ಮಾಡುವುದರ ಜೊತೆಗೆ ದೇಶಭಕ್ತಿ ಹಾಡುಗಳು ಹಾಡಿದರು.  ವಿಶೇಷ ಸನ್ಮಾನಿತರು ವರದಿಗಾರ ಗಾಂಧಿಗೌಡ ಪಾಟೀಲ, ಎ.ಕೆ ನಂದಿ ಹೈಸ್ಕೂಲ್ ನಿವೃತ್ತಿ ದೈಹಿಕ ಶಿಕ್ಷಕ ಚಂದ್ರಕಾಂತ  ಸಿಂಪಿ,  ಕಾರ್ಮಿಕ ಶಿವಪ್ಪ ಭೋವಿ ಸೇರಿದಂತೆ ಅನೇಕ ಸಾಧಕರಿಗೆ ಸನ್ಮಾನಿಸಲಾಯಿತು.  

ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಾಧಿಕ್ ಸುಂಬುಡ, ಗ್ಯಾರಂಟಿ ಯೋಜನೆಯ ಅಧ್ಯಕ್ಷ ಅಶೋಕ್ ಕೊಳಾರಿ, ಸುರೇಶ್ ನಾಯಕ್, ರಮೇಶ್ ಬಂಟನೂರ  ಬಗರ್ ಹುಕಮ್ ನಾಮ ನಿರ್ದೇಶಕರು ಪ್ರಕಾಶ್ ಉಪ್ಪಿನ, ಅಪ್ಪು ಶೆಟ್ಟಿ ಅನೇಕ ಊರಿನ ಹಿರಿಯರು ರಾಜಕೀಯ ಮುಖಂಡರು ಮಹಿಳೆಯರು ಮಕ್ಕಳು ಉಪಸ್ಥಿತರಿದ್ದರು.