ಮುಂಡರಗಿ 29: ಪಟ್ಟಣದಲ್ಲಿ ಪುರಸಭೆ ಪೌರ ಕಾರ್ಮಿಕರು ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ನೇತೃತ್ವದಲ್ಲಿ ಸರಕಾರಿ ಸೌಲಭ್ಯಕ್ಕಾಗಿ ಆಗ್ರಹಿಸಿ ಕೆಲಸ ಸ್ಥಗೀತಗೊಳಿಸಿ ಅನಿರ್ಧಿಷ್ಟಾವದಿ ಧರಣಿ ಸತ್ಯಾಗ್ರವನ್ನು ಮಂಗಳವಾರ ಹಮ್ಮಿಕೊಂಡಿದ್ದಾರೆ.
ಈ ವೇಳೆ ಮನವಿಯಲ್ಲಿ ವಿವಿಧ ಹಂತದಲ್ಲಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಪೌರ ನೌಕರರನ್ನು ಸರಕಾರಿ ನೌಕರರು ಎಂದು ಘೋಷಿಸಬೇಕು. ಕೆಜಿಐಡಿ, ಜಿಪಿಎಫ್, ಜ್ಯೋತಿ ಸಂಜೀವಿನಿ ಸೇರಿದಂತೆ ಸರಕಾರಿ ನೌಕರರಿಗೆ ಸಿಗುವ ಎಲ್ಲಾ ಸೌಲಭಗಳನ್ನು ಪೌರ ನೌಕರರಿಗೂ ಜಾರಿಗೊಳಿಸಬೇಕು. ಹೊರಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೀರು ಸರಬರಾಜು ಸಿಬ್ಬಂದಿ, ಲೋಡರ್ಸ, ಕ್ಲೀನರ್ಸ, ಕ್ಲೀನರ್ಸ, ಕಂಪ್ಯೂಟರ್ ಆಪರೇಟರ್ಸ, ಸೂಪರ್ ವೈಜರ್ ನೇರ ಪಾವತಿ ವೇತನ ಮಾಡುವದು. ನೌಕರರಿಗೆ ಸ್ಥಳೀಯ ನಿಧಿಯಿಂದ ವೇತನ ಪಡೆಯಲು ಆದೇಶಿಸಿದ್ದು ರದ್ದುಪಡಿಸಿ, ಎಸ್ಎಫ್ಸಿ ಅನುದಾನದಲ್ಲಿ ವೇತನ ನೀಡಬೇಕು. ಈಗಾಗಲೇ 45 ದಿನಗಳವರೆಗೆ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿ ಅನಿರ್ಧಿಷ್ಟಾವಧಿಯ ಮುಷ್ಕರವನ್ನು ಹಮ್ಮಿಕೊಳ್ಳಲಾಗಿರುತ್ತದೆ.ಅಲ್ಲದೇ ಸರಕಾರವು ನಮ್ಮ ಬೇಡಿಕೆ ಈಡೇರಿಸದೇ ಇದ್ದರೇ, ವಿವಿಧ ಹಂತದಲ್ಲಿ ನೀರು ಸರಬರಾಜು ನಿಲ್ಲಿಸಿ, ಬೀದಿ ದೀಪ ಬಂದ್ ಮಾಡಿ ಮುಷ್ಕರವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಮನವಿಯಲ್ಲಿ ಬೇಡಿಕೆಗಳ ಕುರಿತು ಸ್ಪಷ್ಠಪಡಿಸಲಾಗಿದೆ ಎಂದು ತಾಲೂಕಾ ಪೌರ ನೌಕರರ ಸಂಘದ ಅಧ್ಯಕ್ಷ ಮೈಲಪ್ಪ ದೊಡ್ಡಮನಿ ಪ್ರಸ್ತಾಪಿಸಿದರು.ಮುಷ್ಕರದಲ್ಲಿ ಮೈಲಪ್ಪ ದೊಡ್ಡಮನಿ, ಆರ್.ಎಂ.ಕುಂಬಾರ, ಎ.ಎಚ್.ನದಾಫ್, ಎಂ.ಡಿ,ದೊಡ್ಡಮನಿ, ದೇವರಾಜ ಗೋಡಿ, ರಣದಪ್ಪ ಹಿರೇಮನಿ, ಮಂಜುಳಾ ಹಾಲಿನವರ, ನಿಂಗಪ್ಪ ಹರಿಜನ, ಅಶೋಕ ಪೂಜಾರ, ಎಂ.ಎಸ್.ಬರದೂರು, ಎಸ್.ಸಿ.ಹೊತ್ತಗಿಮಠ, ಉಮಾ ಯಟ್ಟಿ, ಧಾನೇಶ್ವರಿ ಹಿರೇಮಠ, ಶಾರದಾ ಕೆ.ವಿ, ಹನುಮಂತ ದೊಡ್ಡಮನಿ, ಮುದುಕಪ್ಪ ಬಚನಹಳ್ಳಿ ಮತ್ತಿತರರು ಪಾಲ್ಗೊಂಡಿದ್ದರು.
ಬೆಂಬಲ :
ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಸ್ಥಾಯಿ ಸಮಿತಿ ಚೇರಮನ್ ಮಹ್ಮದರಫೀಕ್ ಮುಲ್ಲಾ, ಸದಸ್ಯ ನಾಗರಾಜ ಹೊಂಬಳಗಟ್ಟಿ, ಮುಖಂಡ ವಿಠಲ್ ಗಣಾಚಾರಿ ಮತ್ತಿತರರು ಪೌರ ನೌಕರರ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದರು.