ಬೆಳಗಾವಿಯಲ್ಲಿ ನವೀಕೃತ ಬಂಟರ ಭವನ ಉದ್ಘಾಟನೆ ಸಂಭ್ರಮ

ಬೆಳಗಾವಿಯಲ್ಲಿ ನವೀಕೃತ ಬಂಟರ ಭವನ ಉದ್ಘಾಟನೆ ಸಂಭ್ರಮ Inauguration of the renovated Buntara Bhavan in Belgaum

ಮಹಾಲಿಂಗಪುರ: ಸರಿ ಸುಮಾರು 40 ವರ್ಷದ ಹಿಂದೆ ಬೆಳಗಾವಿ ನಗರದ ಕೇಂದ್ರ ಸ್ಥಾನದಲ್ಲಿ ಅತ್ಯಂತ ಸುಂದರವಾಗಿ ನಿರ್ಮಿಸಲ್ಪಟ್ಟ ಕರಾವಳಿ ಭಾಗದ ಬಂಟ ಸಮುದಾಯದವರು ಮಾನ್ಯ ವಿಠ್ಠಲ್ ಹೆಗಡೆಯವರ ಕರ್ಣ ದಾರತ್ವದಲ್ಲಿ ನಿರ್ಮಿಸಲ್ಪಟ್ಟ ಬಂಟರ ಭವನಕ್ಕೆ 40 ವರ್ಷ ಸಂದ ಪ್ರಯುಕ್ತ ಈ ಸಾರಿ ಎಮ್  ವಿಜಯ ಶೆಟ್ಟಿ ಅವರ ನೇತೃತ್ವದಲ್ಲಿ ನಂದ್ರೋಳ್ಳಿ ಪ್ರಭಾಕರ ಶೆಟ್ರ್‌ ಸಂಘಟನಾ ಚಾತುರ್ಯದಲ್ಲಿ ಕಟ್ಟಡವನ್ನ ನವೀಕೃತಗೊಳಿಸಿ ಅನೇಕ ದಾನಿಗಳ ಕೊಡುಗೆಯೊಂದಿಗೆ ಉದ್ಘಾಟಿಸಲಾಯಿತು.   

ಈ ಕಾರ್ಯಕ್ರಮವನ್ನು ಮುಂಜಾನೆ 11:00 ಗಂಟೆಗೆ ವಿಘ್ನೇಶ್ವರನ ಪೂಜೆಯೊಂದಿಗೆ ಕುಂಭಮೇಳ ದೀಪದೊಂದಿಗೆ ಸಭಾ ವೇದಿಕೆಯಲ್ಲಿ ಅಂತರಾಷ್ಟ್ರೀಯ ಜಾದೂ ಮಾಂತ್ರಿಕ ಸತೀಶ್ ಹೆಮ್ಮಾಡಿ ಅವರ ಜಾದು ಜಾತ್ರೆ ಸಭಿಕರನ್ನು ಬೆರಗುಗೊಳಿಸಿತು, ತದ ನಂತರ ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದ ಕಲಾವಿದರಿಂದ ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನೆರೆದ ಜನಸ್ತೋಮಕ್ಕೆ ಖುಷಿ ತಂದರೆ ಯಕ್ಷ ಪಲ್ಲವಿ ಟ್ರಾಪ್ಟ್‌ ಮಾಳಕೋಡ ಅವರಿಂದ ಕು.ಗಾನ ಸರಸ್ವತಿ ಚಿಂತನಾ ಹೆಗಡೆ ಚಂಡೆ ಮಾಂತ್ರಿಕ ಸುಜನ್ ಹಾಲಾಡಿ ಹಾಗೂ ಕಡತೋಕ ಸುನೀಲ ಭಂಡಾರಿ ಅವರ ಚಂಡೆಯ ಜೊತೆಗೆ ಹೊಟೇಲ ಉದ್ಯಮಿ ಗುಣಕರ ಶೆಟ್ಟಿ ಸುಪುತ್ರ ತ್ರಿದಿಲ್ ಬಾಲ ವೇಷ ದಾರಿಯ ಅಭಿನವ ಯಕ್ಷ ಪ್ರಿಯರ ಮನ ತಣಿಸಿತು, ಕ್ರಮೇಣ ಇಳಿಹೊತ್ತಿನ ಕಾರ್ಯಕ್ರಮದಲ್ಲಿ ಅರೆಹೊಳೆ ಪ್ರತಿಷ್ಠಾನದವರು ಕುಂದಾಪುರ ಬೈಂದೂರು ಭಾಗದ ಆರಾಧ್ಯ ದೈವ ಶ್ರೀ ಗುರು ಬ್ರಹ್ಮಲಿಂಗೇಶ್ವರರ ಪುಣ್ಯ ಕ್ಷೇತ್ರದ ಕಥಾಕದನದ ನೃತ್ಯ ರೂಪಕ ಬಿಡುವನೆ ಬ್ರಹ್ಮಲಿಂಗ ಆಧ್ಯಾತ್ಮಿಕದ ಪ್ರತೀಕವನ್ನು ಹಾಗೆ ಚಿತ್ರಿಸಿದರು.   

ಘಟಪ್ರಭಾ ಪಟ್ಟಣದ ಉದ್ಯಮಿ ಕೊಡಗೈ ದಾನಿ, ಜಯಶೀಲ ಶೆಟ್ರ ಗುತ್ತಿಗೆದಾರ, ಉದಯ ಶೆಟ್ರ ಅನೇಕ ಬಂಟ ಸಮುದಾಯದವರ ಆರ್ಥಿಕ ನೆರುವಿನ ಸಹಾಯದಿಂದ ಈ ಸುಂದರ ಕಟ್ಟಡ ನವೀಕೃತಗೊಂಡಿರುವುದು ನೆನಪಿಸಬೇಕಾದ ಅಂಶ,ಸಭಾ ಕಾರ್ಯಕ್ರಮದ ಉದ್ಘಾಟಿಸಿದ ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳಕರ್ ಮಾತನಾಡಿ ಬಂಟ ಸಮುದಾಯದ ಈ ದೇಶಕ್ಕೆ ಕೊಟ್ಟ ಕೊಡುಗೆ ಅವರ ಆಧಾರಥಿತ್ಯದ ಕುರಿತು ಬಹುಮೆಚ್ಚಿಗೆಯ ಮಾತನಾಡಿದರು.  

ಮುಖ್ಯ ಅತಿಥಿಗಳಾಗಿ ಚಿಕ್ಕೋಡಿ ಲೋಕಸಭಾ ಸದಸ್ಯರಾದ ಕುಮಾರಿ ಪ್ರಿಯಾಂಕ ಸತೀಶ ಜಾರಕಿಹೊಳಿ ಬಂಟ ಸಮುದಾಯದ ಪ್ರತಿಯೊಬ್ಬರೊಂದಿಗೆ ಹಾಲು ಜೇನಿನ ಸಂಬಂಧ ಬೆಳೆಸುವ ಕಾರ್ಯ ಮಾಡುತ್ತಾರೆ ಎಂದು ಹೊಗಳಿದರು.  

ಸಮಾರಂಭದ ಅಧ್ಯಕ್ಷತೆ ವಹಿಸಿದ ಬೆಂಗಳೂರಿನ ಎಂ ಆರ್ ಜಿ ಗ್ರೂಪ್ ಚೇರ್ಮನ್ ಡಾ ಪ್ರಕಾಶ್ ಶೆಟ್ರು ಮಾತನಾಡಿ ನಮ್ಮ ಬಂಟ ಸಮುದಾಯದ ನಡೆದು ಬಂದ ಹಾದಿ ಉದ್ಯಮಿಗಳಾದ ಪರಿ ಹಾಗೂ ಪ್ರಸ್ತುತ ಮಾಡಬೇಕಾದ ಮುಂದಿನ ಕಾರ್ಯ ಹಿಂದೆ ನಮ್ಮ ಸಮಾಜಕ್ಕೆ ಊರುಗೋಲಾದ ಮೂಲ್ಕಿ ಸುಂದರಾಮ ಶೆಟ್ರು ಆರ್ ಎನ್ ಶೆಟ್ಟರಂತ ಅನೇಕ ದಾನಿಗಳನ್ನು ಸ್ಮರಿಸಿದರು.  

ಮ್ಯೂಸಿಕ ಡೈರೆಕ್ಟರ ಗುರು ಕಿರಣ ಅವರು ಬಂಟ ಸಮುದಾಯ ಅಂತ ರಾಷ್ಟ್ರೀಯ ಮಟ್ಟದಲ್ಲಿ ನೀಡಿದ ಅನುಪಮ ಸೇವೆ ಕುಂದಾ ನಾಡಿನಲ್ಲಿ ಕುಂದಾಪುರದವರ ಕೊಡುಗೆ ಸದಾ ಸ್ಮರಣೀಯ ಎಂದರು.   

ಮುಖ್ಯ ಅತಿಥಿ ಬೆಳಗಾವಿ ಉತ್ತರ ವಿಭಾಗದ ಶಾಸಕರಾದ ಆಸಿಫ್ (ರಾಜ್) ಸೇಠ್ ಭವನ ನಿರ್ಮಿಸಿದ ವಿಠ್ಠಲ ಹೆಗಡೆಯವರ ಮತ್ತು ಬಂಟ ಸಮುದಾಯದವರ ಕಾರ್ಯಕ್ಕೆ ಅಭಿನಂದಿಸಿದರು. ಸಂಘದ ಅಧ್ಯಕ್ಷ ವಿಜಯಕುಮಾರ್ ಶೆಟ್ರು ಪ್ರಾಸ್ತಾವಿಕವಾಗಿ ಮಾತನಾಡಿದರು.ಮುಂಬೈ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ ಶೆಟ್ರು ಮಾತನಾಡಿದರು, ಸ್ವಾಗತ ಸಮಿತಿಯ ಪರವಾಗಿ ಶ್ರೀಧರ ಶೆಟ್ರು ಸ್ವಾಗತಿಸಿದರು, ರಮೇಶ ಶೆಟ್ಟಿ ವಂದಿಸಿದರು ಪ್ರಣಯ ಶೆಟ್ಟಿ ಪರಿಚಯಿಸಿದರು. ಈ ಸಂದರ್ಭದಲ್ಲಿ ಸಂಸ್ಥಾಪಪಕ ಅದ್ಯಕ್ಷರಾದ ವಿಠ್ಠಲ ಹೆಗಡೆ, ಸಾಂತೂರು ಭಾಸ್ಕರ ಶೆಟ್ಟಿ, ಪತ್ರಕರ್ತರಾದ ಬಿ ರತ್ನಾಕರ ಶೆಟ್ಟಿ, ಮುಧೋಳ ಜಯರಾಮ ಶೆಟ್ಟಿ, ಮಹಾಲಿಂಗಪೂರ ನವೀನ ಶೆಟಿ,್ಟ ಸುರೇಶ ಶೆಟ್ಟಿ, ಉದಯ ಶೆಟ್ಟಿ, ಅರುಣ ಶೆಟ್ಟಿ, ಗುಣಕರ ಶೆಟ್ಟಿ, ಚಂದ್ರಶೆಟ್ಟಿ ಸಂತೋಶ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. 

ಬೆಳಗಾವಿಯಲ್ಲಿ ನವೀಕೃತ ಬಂಟರ ಭವನ ಉದ್ಘಾಟನೆ ಸಂಭ್ರಮಮಹಾಲಿಂಗಪುರ: ಸರಿ ಸುಮಾರು 40 ವರ್ಷದ ಹಿಂದೆ ಬೆಳಗಾವಿ ನಗರದ ಕೇಂದ್ರ ಸ್ಥಾನದಲ್ಲಿ ಅತ್ಯಂತ ಸುಂದರವಾಗಿ ನಿರ್ಮಿಸಲ್ಪಟ್ಟ ಕರಾವಳಿ ಭಾಗದ ಬಂಟ ಸಮುದಾಯದವರು ಮಾನ್ಯ ವಿಠ್ಠಲ್ ಹೆಗಡೆಯವರ ಕರ್ಣ ದಾರತ್ವದಲ್ಲಿ ನಿರ್ಮಿಸಲ್ಪಟ್ಟ ಬಂಟರ ಭವನಕ್ಕೆ 40 ವರ್ಷ ಸಂದ ಪ್ರಯುಕ್ತ ಈ ಸಾರಿ ಎಮ್  ವಿಜಯ ಶೆಟ್ಟಿ ಅವರ ನೇತೃತ್ವದಲ್ಲಿ ನಂದ್ರೋಳ್ಳಿ ಪ್ರಭಾಕರ ಶೆಟ್ರ್‌ ಸಂಘಟನಾ ಚಾತುರ್ಯದಲ್ಲಿ ಕಟ್ಟಡವನ್ನ ನವೀಕೃತಗೊಳಿಸಿ ಅನೇಕ ದಾನಿಗಳ ಕೊಡುಗೆಯೊಂದಿಗೆ ಉದ್ಘಾಟಿಸಲಾಯಿತು.   

ಈ ಕಾರ್ಯಕ್ರಮವನ್ನು ಮುಂಜಾನೆ 11:00 ಗಂಟೆಗೆ ವಿಘ್ನೇಶ್ವರನ ಪೂಜೆಯೊಂದಿಗೆ ಕುಂಭಮೇಳ ದೀಪದೊಂದಿಗೆ ಸಭಾ ವೇದಿಕೆಯಲ್ಲಿ ಅಂತರಾಷ್ಟ್ರೀಯ ಜಾದೂ ಮಾಂತ್ರಿಕ ಸತೀಶ್ ಹೆಮ್ಮಾಡಿ ಅವರ ಜಾದು ಜಾತ್ರೆ ಸಭಿಕರನ್ನು ಬೆರಗುಗೊಳಿಸಿತು, ತದ ನಂತರ ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದ ಕಲಾವಿದರಿಂದ ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನೆರೆದ ಜನಸ್ತೋಮಕ್ಕೆ ಖುಷಿ ತಂದರೆ ಯಕ್ಷ ಪಲ್ಲವಿ ಟ್ರಾಪ್ಟ್‌ ಮಾಳಕೋಡ ಅವರಿಂದ ಕು.ಗಾನ ಸರಸ್ವತಿ ಚಿಂತನಾ ಹೆಗಡೆ ಚಂಡೆ ಮಾಂತ್ರಿಕ ಸುಜನ್ ಹಾಲಾಡಿ ಹಾಗೂ ಕಡತೋಕ ಸುನೀಲ ಭಂಡಾರಿ ಅವರ ಚಂಡೆಯ ಜೊತೆಗೆ ಹೊಟೇಲ ಉದ್ಯಮಿ ಗುಣಕರ ಶೆಟ್ಟಿ ಸುಪುತ್ರ ತ್ರಿದಿಲ್ ಬಾಲ ವೇಷ ದಾರಿಯ ಅಭಿನವ ಯಕ್ಷ ಪ್ರಿಯರ ಮನ ತಣಿಸಿತು, ಕ್ರಮೇಣ ಇಳಿಹೊತ್ತಿನ ಕಾರ್ಯಕ್ರಮದಲ್ಲಿ ಅರೆಹೊಳೆ ಪ್ರತಿಷ್ಠಾನದವರು ಕುಂದಾಪುರ ಬೈಂದೂರು ಭಾಗದ ಆರಾಧ್ಯ ದೈವ ಶ್ರೀ ಗುರು ಬ್ರಹ್ಮಲಿಂಗೇಶ್ವರರ ಪುಣ್ಯ ಕ್ಷೇತ್ರದ ಕಥಾಕದನದ ನೃತ್ಯ ರೂಪಕ ಬಿಡುವನೆ ಬ್ರಹ್ಮಲಿಂಗ ಆಧ್ಯಾತ್ಮಿಕದ ಪ್ರತೀಕವನ್ನು ಹಾಗೆ ಚಿತ್ರಿಸಿದರು.   

ಘಟಪ್ರಭಾ ಪಟ್ಟಣದ ಉದ್ಯಮಿ ಕೊಡಗೈ ದಾನಿ, ಜಯಶೀಲ ಶೆಟ್ರ ಗುತ್ತಿಗೆದಾರ, ಉದಯ ಶೆಟ್ರ ಅನೇಕ ಬಂಟ ಸಮುದಾಯದವರ ಆರ್ಥಿಕ ನೆರುವಿನ ಸಹಾಯದಿಂದ ಈ ಸುಂದರ ಕಟ್ಟಡ ನವೀಕೃತಗೊಂಡಿರುವುದು ನೆನಪಿಸಬೇಕಾದ ಅಂಶ,ಸಭಾ ಕಾರ್ಯಕ್ರಮದ ಉದ್ಘಾಟಿಸಿದ ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳಕರ್ ಮಾತನಾಡಿ ಬಂಟ ಸಮುದಾಯದ ಈ ದೇಶಕ್ಕೆ ಕೊಟ್ಟ ಕೊಡುಗೆ ಅವರ ಆಧಾರಥಿತ್ಯದ ಕುರಿತು ಬಹುಮೆಚ್ಚಿಗೆಯ ಮಾತನಾಡಿದರು.  

ಮುಖ್ಯ ಅತಿಥಿಗಳಾಗಿ ಚಿಕ್ಕೋಡಿ ಲೋಕಸಭಾ ಸದಸ್ಯರಾದ ಕುಮಾರಿ ಪ್ರಿಯಾಂಕ ಸತೀಶ ಜಾರಕಿಹೊಳಿ ಬಂಟ ಸಮುದಾಯದ ಪ್ರತಿಯೊಬ್ಬರೊಂದಿಗೆ ಹಾಲು ಜೇನಿನ ಸಂಬಂಧ ಬೆಳೆಸುವ ಕಾರ್ಯ ಮಾಡುತ್ತಾರೆ ಎಂದು ಹೊಗಳಿದರು.  

ಸಮಾರಂಭದ ಅಧ್ಯಕ್ಷತೆ ವಹಿಸಿದ ಬೆಂಗಳೂರಿನ ಎಂ ಆರ್ ಜಿ ಗ್ರೂಪ್ ಚೇರ್ಮನ್ ಡಾ ಪ್ರಕಾಶ್ ಶೆಟ್ರು ಮಾತನಾಡಿ ನಮ್ಮ ಬಂಟ ಸಮುದಾಯದ ನಡೆದು ಬಂದ ಹಾದಿ ಉದ್ಯಮಿಗಳಾದ ಪರಿ ಹಾಗೂ ಪ್ರಸ್ತುತ ಮಾಡಬೇಕಾದ ಮುಂದಿನ ಕಾರ್ಯ ಹಿಂದೆ ನಮ್ಮ ಸಮಾಜಕ್ಕೆ ಊರುಗೋಲಾದ ಮೂಲ್ಕಿ ಸುಂದರಾಮ ಶೆಟ್ರು ಆರ್ ಎನ್ ಶೆಟ್ಟರಂತ ಅನೇಕ ದಾನಿಗಳನ್ನು ಸ್ಮರಿಸಿದರು.  

ಮ್ಯೂಸಿಕ ಡೈರೆಕ್ಟರ ಗುರು ಕಿರಣ ಅವರು ಬಂಟ ಸಮುದಾಯ ಅಂತ ರಾಷ್ಟ್ರೀಯ ಮಟ್ಟದಲ್ಲಿ ನೀಡಿದ ಅನುಪಮ ಸೇವೆ ಕುಂದಾ ನಾಡಿನಲ್ಲಿ ಕುಂದಾಪುರದವರ ಕೊಡುಗೆ ಸದಾ ಸ್ಮರಣೀಯ ಎಂದರು.   

ಮುಖ್ಯ ಅತಿಥಿ ಬೆಳಗಾವಿ ಉತ್ತರ ವಿಭಾಗದ ಶಾಸಕರಾದ ಆಸಿಫ್ (ರಾಜ್) ಸೇಠ್ ಭವನ ನಿರ್ಮಿಸಿದ ವಿಠ್ಠಲ ಹೆಗಡೆಯವರ ಮತ್ತು ಬಂಟ ಸಮುದಾಯದವರ ಕಾರ್ಯಕ್ಕೆ ಅಭಿನಂದಿಸಿದರು. ಸಂಘದ ಅಧ್ಯಕ್ಷ ವಿಜಯಕುಮಾರ್ ಶೆಟ್ರು ಪ್ರಾಸ್ತಾವಿಕವಾಗಿ ಮಾತನಾಡಿದರು.ಮುಂಬೈ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ ಶೆಟ್ರು ಮಾತನಾಡಿದರು, ಸ್ವಾಗತ ಸಮಿತಿಯ ಪರವಾಗಿ ಶ್ರೀಧರ ಶೆಟ್ರು ಸ್ವಾಗತಿಸಿದರು, ರಮೇಶ ಶೆಟ್ಟಿ ವಂದಿಸಿದರು ಪ್ರಣಯ ಶೆಟ್ಟಿ ಪರಿಚಯಿಸಿದರು. ಈ ಸಂದರ್ಭದಲ್ಲಿ ಸಂಸ್ಥಾಪಪಕ ಅದ್ಯಕ್ಷರಾದ ವಿಠ್ಠಲ ಹೆಗಡೆ, ಸಾಂತೂರು ಭಾಸ್ಕರ ಶೆಟ್ಟಿ, ಪತ್ರಕರ್ತರಾದ ಬಿ ರತ್ನಾಕರ ಶೆಟ್ಟಿ, ಮುಧೋಳ ಜಯರಾಮ ಶೆಟ್ಟಿ, ಮಹಾಲಿಂಗಪೂರ ನವೀನ ಶೆಟಿ,್ಟ ಸುರೇಶ ಶೆಟ್ಟಿ, ಉದಯ ಶೆಟ್ಟಿ, ಅರುಣ ಶೆಟ್ಟಿ, ಗುಣಕರ ಶೆಟ್ಟಿ, ಚಂದ್ರಶೆಟ್ಟಿ ಸಂತೋಶ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.