ಪ್ರಭಾಕರ್ ಕೋ-ಅಪ್ ಕ್ರೆಡಿಟ್ ಸೊಸೈಟಿಯ ನೂತನ ಶಾಖೆಯ ಉದ್ಘಾಟನೆ

Inauguration of new branch of Prabhakar Co-op Credit Society

ಮಾಂಜರಿ/ ಶಿವಮೊಗ್ಗ, 14 : ಗ್ರಾಮೀಣ ಭಾಗದಲ್ಲಿ ರೈತರ ಸಮಗ್ರ ಅಭಿವೃ ದ್ದಿಯಲ್ಲಿ ಸಹಕಾರಿ ತತ್ವದ ಅಡಿ ಸ್ಥಾಪಿಸಿರುವ ಸಂಸ್ಥೆಗಳು  ಅತ್ಯುತ್ತಮ ಸೇವೆ ನೀಡುತ್ತಿವೆ. ಆದರೂ ಸಮನ್ವಯ, ಸಾಮರಸ್ಯ ಹಾಗೂ ಪ್ರಾಮಾಣಿಕತೆಯಿಂದ ಇನ್ನೂ ಪರಿಣಾಮಕಾರಿ ಸೇವೆ ನೀಡುವ ಅಗತ್ಯವಿದೆ ಎಂದು ಶಿವಮೊಗ್ಗ ಸಂಸದ ರಾಘವೇಂದ್ರ ಯಡಿಯೂರ​‍್ಪ  ಕಿವಿಮಾತು ಹೇಳಿದರು. 

ಶಿವಮೊಗ್ಗ ಪಟ್ಟಣದಲ್ಲಿ ಶುಕ್ರವಾರರಂದು  ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಪ್ರಭಾಕರ್ ಕೋ ಅಪ್ ಕ್ರೆಡಿಟ್ ಸೊಸೈಟಿಯ ನೂತನ ಶಾಖೆಯ ಕಟ್ಟಡ  ಉದ್ಘಾಟಿಸಿ ಅವರು  ಮಾತನಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕ ಮಾಜಿ ರಾಜ್ಯಸಭಾ ಸದಸ್ಯ ಹಾಗೂ ಕೆಎ??? ಸಂಸ್ಥೆಯ ಕಾರ್ಯಾಧ್ಯಕ್ಷರಾಗಿರುವ ಡಾ ಪ್ರಭಾಕರ್ ಕೋರೆ ವಹಿಸಿದ್ದರು ಅತಿಥಿಯಾಗಿ  ಸಂಸ್ಥೆಯ  ಅಧ್ಯಕ್ಷ ಮಹಾಂತೇಶ್ ಪಾಟೀಲ್ ಶಾಖೆಯ ಸಲಹಾ ಸಮಿತಿಯ  ಅಧ್ಯಕ್ಷರಾದ ಜೆ ಈ ಪ್ರಶಾಂತ್ ಈಶ್ವರ​‍್ಪ ಹಾಜರಿದ್ದರು  ಪ್ರಾಮಾಣಿಕತೆ, ಬದ್ಧತೆ ಹಾಗೂ ಸಹಕಾರತತ್ವದಸೇವೆಯೇ ಸಹಕಾರಿ ರಂಗದಮೂಲತತ್ವ ಹಾಗೂ ಧೈಯ. ಹೀಗಾಗಿ ಸಹಕಾರಿ ರಂಗದ ಆಡಳಿತ ಚುಕ್ಕಾಣಿ ಹಿಡಿರುವ ಸಹಕಾರಿಗಳು ಸೇವಾ ಬದ್ಧತೆ, ಸಹಕಾರಿ ತತ್ವಪರತೆಯಿಂದಆಡಳಿತ ನಡೆಸಿದಲ್ಲಿ ಕೃಷಿ ಆಧಾರಿತ ಗ್ರಾಮೀಣ ರೈತರ ಬದುಕನ್ನು ಹಸನಾಗಿಸಲು ಸಾಧ್ಯವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಗ್ರಾಮೀಣ ಭಾಗದಲ್ಲಿ ರೈತರಿಗೆ ಕೃಷಿ ಚಟುವಟಿಕೆಯ ಜೊತೆಗೆ ಉದ್ಯೋಗಾವಕಾಶ ಕಲ್ಪಿಸಲು ಮತ್ತು ಸಮಾಜದಲ್ಲಿರುವ ಸುಶಿಕ್ಷಿತ ಯುವಕರಿಗೆ ಉದ್ಯೋಗಾವಕಾಶ ಮಾಡಲು ಕಡಿಮೆ  ಬಡ್ಡಿದರದಲ್ಲಿ ಸಾಲ ವಿತರಣೆ, ಕೃಷಿಯೇತರ ಸಾಲ ವಿತರಣೆಯಲ್ಲಿ ಗ್ರಾಮೀಣ ಸಹಕಾರಿ ಸಮಸ್ಯೆಗಳ  ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅದಕ್ಕಾಗಿ ಗ್ರಾಮೀಣ ಸಹಕಾರಿ ಸಂಘಗಳಿಂದ ಪಡೆದ ಸಾಲ ಪ್ರತಿಯೊಬ್ಬ ಸಾಲಗಾರರು ಸರಿಯಾದ ಸಮಯಕ್ಕೆ ಸಾಲವನ್ನು ಮರುಪಾವತಿಸಿ ಮಾಡಿ ಸಂಸ್ಥೆಯ ಆರ್ಥಿಕ ಪ್ರಗತಿ ಹೊಂದಲು ಸಹಕಾರಿ ಯಾಗಲಿದೆ ಎಂದು ಸಂಸ್ಥೆಯ ಸಂಸ್ಥಾಪಕ ಮಾಜಿ ರಾಜ್ಯಸಭಾ ಸದಸ್ಯ ಕೆ ಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ ಪ್ರಭಾಕರ್ ಕೋರೆ ಹೇಳಿದರು  

ಈ ವೇಳೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ದೇವೇಂದ್ರ ಕರೋಶಿ ಮಾತನಾಡಿ 2024-25ನೇ ಆರ್ಥಿಕ ವರ್ಷದಲ್ಲಿ ಸದಸ್ಯರ ಠೇವಣಿ ಈ 1511 ಕೋಟಿ ಸಂಗ್ರಹದೊಂದಿಗೆ ದಾಖಲಾರ್ಹ ಸಾಧನೆ ಮಾಡಿದೆ. 98 ಸಾವಿರ ಸದಸ್ಯರಿಗೆ ರು 1063 ಕೋಟಿ ಸಾಲ ನೀಡಿದ್ದು, ಸದರಿ ಸಂಘವು  1650 ಕೋಟಿ ರೂ ದುಡಿಯುವ ಬಂಡವಾಳ ಹೊಂದಿವೆ. ಪ್ರಸಕ್ತ ಆರ್ಥಿಕ ಸಾಲಿನಲ್ಲಿ  25 ಕೋಟಿ ರೂ ಸಹಕಾರಿ ಸಂಘಗಳು ಲಾಭದಲ್ಲಿವೆ ಪ್ರಕಾರ ಸದರಿ ಸಹಕಾರಿ ಸಂಘವು ರಾಜ್ಯದಲ್ಲಿ ಸುಮಾರು 55 ಶಾಖೆಗಳಲ್ಲಿ ಕಾರ್ಯನಿರ್ವಹಿಸಲಾಗಿದೆ  ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಸದರಿ ಶಾಖೆಯ ಉದ್ಘಾಟನಾ ಸಮಾರಂಭಕ್ಕೆ ಶಿವಮೊಗ್ಗ ಶಾಖಾ ಸಲಹಾ ಸಮಿತಿಯ  ಜೆ ಸೋಮಶೇಖರ್ ಚೆನ್ನಪ್ಪ, ಬಿ.ಜೆ ಪ್ರವೀಣ್‌. ಜಯಪ್ರಕಾಶ್ ಜಗದೀಶ್ ಅಂಗಡಿ, ಪ್ರಭುಲಿಂಗಪ್ಪ, ಚಂದ್ರಶೇಖರ್, ಶಾಂತಪ್ಪ, ಕೆ.ಜೆ ಸದಾನಂದ,  ಕಲ್ಲಪ್ಪ, ಎನ್‌.ಜೆ ಸುಶ್ರುತ್ ಉಪ್ಪಾರ್, ಸೌ.ಎಸ್ ಸುಧಾರಾಣಿ ಬೋರಯ್ಯ, ಸಂಸ್ಥೆಯ ಉಪಾಧ್ಯಕ್ಷರಾದ ಸಿದ್ಧಗೌಡ ಮಗದುಮ್, ನಿರ್ದೇಶಕರಾದ ಡಾ ಪ್ರೀತಿ ದೊಡ್ಡವಾಡ,  ಮಲ್ಲಿಕಾರ್ಜುನ್ ಕೋರೆ, ಅನ್ನಸಾಹೇಬ್ ಸಂಕೇಶ್ವರಿ, ಬಸನಗೌಡ ಆಸಂಗಿ, ಡಾ ಸುಕುಮಾರ್ ಚೌಗುಲೆ, ಪಿಂಟು ಹಿರೇಕುರುಬರ, ಅಮಿತ್ ಜಾಧವ್, ಪ್ರಫುಲ್ ಶೆಟ್ಟಿ, ಬಾಳಪ್ಪ ಉಮರಾಣಿ, ಅಶೋಕ್ ಚೌಗುಲೆ, ಅನಿಲ್ ಪಾಟೀಲ್,  ಶೋಭಾ ಜಕಾತೆ, ಶೈಲಜಾ ಪಾಟೀಲ್, ಪಾರ್ವತಿ ಧರನಾಯಿಕ್, ಶ್ರೀಕಾಂತ್ ಉಮಾರಾಣೆ, ವಿವೇಕ್ ಕಮತೇ, ಹಾಗೂ ಹಿನ್ನೆಲೆದ ಗಣ್ಯ ನಾಗರಿಕರು ಸದಸ್ಯರು ಗ್ರಾಹಕರು ಹಾಜರಿದ್ದರು .

ಇತ್ತೀಚಿನ ಸುದ್ದಿ