ಅಪ್ಪಟ ದೇಶಪ್ರೇಮಿ ಜಗದೀಶ್ ಹಡಪದ ಈ ಬಾರಿ ಅಶೋಕ ಚಕ್ರದ ಚಿತ್ತಾರದಲ್ಲಿ
Image of Ashoka Chakra on the back of the head
ರಾಣೇಬೆನ್ನೂರು 14 : ಅಪ್ಪಟ ದೇಶಪ್ರೇಮಿ, ಜಗದೀಶ್ ನಿಂಗಪ್ಪ ಹಡಪದ ಸ್ವಾತಂತ್ರ್ಯ ದಿನಾಚರಣೆ ಬಂತೆಂದರೆ ಈತನಿಗೆ ಬಲು ಹಿಗ್ಗು, ಮತ್ತು ಸಡಗರ ಸಂಭ್ರವೂ, ಸಂಭ್ರಮ. ವೃತ್ತಿಯಲ್ಲಿ ಕ್ಷೌರಿಕ, ಪ್ರವರ್ತಿಯಲ್ಲಿ ಗೃಹರಕ್ಷಕ ದಳದಲ್ಲಿ ಹೋಂ ಗಾರ್ಡ ಎಂದು ಕಳೆದ 32 ವರ್ಷಗಳಿಂದ ಸೇವೆಸಲಿಸುತ್ತಿದ್ದಾನೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ, ದೇಶದ ಅಭಿಮಾನದೊಂದಿಗೆ, ಕಳೆದ 18 ವರ್ಷಗಳಿಂದ ತನ್ನ ತಲೆಯ ಹಿಂಭಾಗ ಅಶೋಕ ಚಕ್ರದ ಚಿತ್ರವನ್ನು ಬಿಡಿಸಿಕೊಂಡು, ತನ್ನ ಕಾಯಕದೊಂದಿಗೆ ದೇಶಪ್ರೇಮ ಮೆರೆಯುವ ಅಪರೂಪದ ವ್ಯಕ್ತಿಯಾಗಿದ್ದಾನೆ.
ತಾಲೂಕು, ಜಿಲ್ಲೆ ಮತ್ತು ನಾಡಿನಲ್ಲಿ ತನ್ನ ಜನಪ್ರಿಯತೆ ಗಳಿಸಿರುವ ದೇಶಪ್ರೇಮಿ ಜಗದೀಶ್ ನಿಂಗಪ್ಪ ಹಡಪದ, ಈತನು ತಾಲೂಕಿನ ಮಾಗೋಡು ಗ್ರಾಮದ ಅಪ್ಪಟ ಗ್ರಾಮೀಣ ಸೊಗಡು ಮೈಗೂಡಿಸಿಕೊಂಡಿರುವ ಪ್ರತಿಭೆ. ತನ್ನ ಹಿರಿಯ ಅಧಿಕಾರಿಗಳ ಪ್ರೀತಿ, ವಿಶ್ವಾಸ, ಅಭಿಮಾನ ಗಳಿಸಿರುವ ಜಗದೀಶ್ ಜನಪ್ರಿಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾನೆ. ಈತನ ದೇಶ ಪ್ರೇಮ ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿದೆ. ಭಾರತ ದೇಶದಲ್ಲಿ ಅದು ವಿಶೇಷವಾಗಿ ಕನ್ನಡ ನಾಡಿನಲ್ಲಿ ಜನ್ಮತಾಳುವುದೇ, ಪೂರ್ವಜನ್ಮದ ಸುಕೃತ ಫಲ ಎಂದು ಭಾವಿಸುವ ಹಡಪದ, ಕನ್ನಡ ನಾಡಿನಲ್ಲಿ ಹುಟ್ಟಬೇಕು ಎಂದು ತನ್ನ ಆತ್ಮಭಿಮಾನದಿಂದ ನು ಡಿಯುತ್ತಾನೆ.ಈತನ ದೇಶಪ್ರೇಮವನ್ನು ನೋಡಲು ಕಣ್ತುಂಬಿಕೊಳ್ಳಲು ನಾಡಿನಿಂದ ಸಾವಿರಾರು ಜನರು ಹರಿದು ಬರುವುದು ಈತನ ಹೆಮ್ಮೆ. ಈ ಬಾರಿ ವಿಶೇಷವಾಗಿ ತನ್ನ ತಲೆಯ ಹಿಂಭಾಗ ಅಶೋಕ ಚಕ್ರದ ಗುರುತಿನ ಬಣ್ಣ, ಬಣ್ಣದ ಚಿತ್ರ, ಚಿತ್ತಾರವನ್ನು ಬಿಡಿಸಿಕೊಂಡಿರುವ ಜಗದೀಶ್ ಹಡಪದ, ನಮ್ಮೂರಿನ ಹೆಮ್ಮೆ ಎನ್ನುತ್ತಾರೆ ಸಾರ್ವಜನಿಕರು, ಸಂಘ ಸಂಸ್ಥೆಗಳ ಮುಖಂಡರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 