ಅಕ್ರಮ ಹಣ ಸಾಗಾಟ: 1 ಕೋಟಿ ರೂ.ವಶಕ್ಕೆ
Illegal money laundering: Rs. 1 crore seized
ಕಾರವಾರ 28: ಕಾರವಾರ ಗೋವಾ ಗಡಿಭಾಗದ ಮಾಜಾಳಿ ಚೆಕ್ಪೋಸ್ಟ್ನಲ್ಲಿ ಸೋಮವಾರ ತಡರಾತ್ರಿ ನಡೆದ ರೋಚಕ ಕಾರ್ಯಾಚರಣೆಯಲ್ಲಿ, ಚಿತ್ತಾಕುಲಾ ಪಿಎಸ್ ಐ ಪರುಶುರಾಮ್ ನೇತೃತ್ವದಲ್ಲಿ ಪೊಲೀಸರು ಖಾಸಗಿ ಬಸ್ ಪರೀಶೀಲನೆ ಮಾಡುವಾಗ ಒಂದು ಕೋಟಿ ರೂ.ಹಣ ಪತ್ತೆಯಾಗಿದೆ.
ಈ ಹಣವನ್ನು ಗೋವಾದಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿತ್ತು. ದಾಖಲೆಗಳಿಲ್ಲದ 1 ಕೋಟಿ ರೂ. ಗಳನ್ನು ತಗೋ ಆತ ವಶಪಡಿಸಿಕೊಂಡಿದ್ದಾರೆ. ಕರ್ತವ್ಯ ನಿರತ ಅಧಿಕಾರಿಗಳ ತಂಡವು ದಿನನಿತ್ಯದಂತೆ ಖಾಸಗಿ ಬಸ್ ಪ್ರಯಾಣಿಕರ ಬ್ಯಾಗ್ ಪರೀಶೀಲನೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ತಪಾಸಣೆಯ ಸಮಯದಲ್ಲಿ, ಕಲ್ಪೇಶ್ ಕುಮಾರ್ ಎಂದು ಗುರುತಿಸಲಾದ ಪ್ರಯಾಣಿಕರೊಬ್ಬರಿಗೆ ಸೇರಿದ ಬ್ಯಾಗ್ನಲ್ಲಿ ದೊಡ್ಡ ಮೊತ್ತವನ್ನು ಬಚ್ಚಿಟ್ಟಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದರು. ಕಲ್ಪೇಶ ಜೊತೆ ಇನ್ನೊಬ್ಬ ವ್ಯಕ್ತಿ ಪ್ರಯಾಣಿಸುತ್ತಿದ್ದರು. ಅವರ ಹೆಸರನ್ನು ಪೊಲೀಸರು ಬಹಿರಂಗ ಮಾಡಿಲ್ಲ. ಹೆಚ್ಚಿನ ಬೆಲೆಯ( 500 ) ನೋಟು ಬಂಡಲ್ ಮಾಡಲಾಗಿದೆ. ವಶಪಡಿಸಿಕೊಂಡ ಹಣವನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಆದರೆ ಅದರ ಮಾಲೀಕತ್ವ ಮತ್ತು ಮೂಲವು ಸ್ಪಷ್ಟವಾಗಿಲ್ಲ.
ಸದಾಶಿವಗಡ ದ ಚಿತ್ತಕುಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಣ ಮೂಲ ಮತ್ತು ಸಾಗಾಟದ ಉದ್ದೇಶವನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ.ಪ್ರಾಥಮಿಕ ಅನುಮಾನದಂತೆ ಹಣದ ಅಕ್ರಮ ವಹಿವಾಟು ಅಥವಾ ರಾಜಕೀಯ ನಿಧಿಗೆ ಸಂಬಂಧಿಸಿರಬಹುದು ಎಂದು ಭಾವಿಸಲಾಗಿದೆ. ಆದರೂ ಯಾವುದೇ ಅಧಿಕೃತ ದೃಢೀಕರಣವನ್ನು ಪೊಲೀಸರು ಮಾಡಿಲ್ಲ. ಹಣವು ಹವಾಲಾ ಕಾರ್ಯಾಚರಣೆಗಳು, ಚುನಾವಣೆಗೆ ಸಂಬಂಧಿಸಿದ ಚಟುವಟಿಕೆಗಳು ಅಥವಾ ಇತರ ಅಕ್ರಮ ವ್ಯವಹಾರಗಳ ಭಾಗವಾಗಿರಬಹುದೇ ಎಂದು ಹೆಚ್ಚಿನ ತನಿಖೆ ನಡೆಯುತ್ತಿದೆ.ಹಣವನ್ನು ವಶಪಡಿಸಿಕೊಂಡ ನಂತರ ಅಧಿಕಾರಿಗಳು ಮಾಜಾಳಿ ಚೆಕ್ ಪೋಸ್ಟ್ ಅಂತರರಾಜ್ಯ ಮಾರ್ಗದಲ್ಲಿ ತಪಾಸಣೆಯನ್ನು ತೀವ್ರಗೊಳಿಸಿದ್ದಾರೆ.....
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 