ನಿಯಮಬಾಹೀರ ಸಂಚಾರ ಸಂಚಕಾರ : ಆದರೂ ಇಲ್ಲ ಭಯIllegal Traffic: No Fear, though
Lokadrshan Daily
5/28/25, 5:00 AM ಪ್ರಕಟಿಸಲಾಗಿದೆ
ಸಿ.ಎಂ.ಜೋಶಿ
ಗುಳೇದಗುಡ್ಡ: ನಿಯಮಬಾಹೀರ ಸಂಚಾರದಿಂದ ಸಾಕಷ್ಟು ಸಲ ರಸ್ತೆ ಅವಘಡಗಳು ಸಂಭವಿಸಿದರೂ ಟಂಟಂ ಚಾಲಕರು ಮಾತ್ರ ಹೆಚ್ಚಿನ ಪ್ರಯಣಿಕರನ್ನು ವಾಹನದಲ್ಲಿ ತುಂಬಿ ಸಾಗಿಸುವ ದೃಶ್ಯ ಈ ಭಾಗದಲ್ಲಿ ಸರ್ವ್ ಸಾಮಾನ್ಯವಾಗಿದೆ. ಪಟ್ಟಣದ ವಿವಿಧ ಕಡೆಗಳಿಗೆ ಕೂಲಿಕಾರ್ಮಿಕರನ್ನು ನಿತ್ಯ ಒಯ್ಯುವ ಟಂಟಂಗಳು ಹೆಚ್ಚಿನ ಪ್ರಮಾಣದಲ್ಲಿ ಕೂಲಿ ಕಾರ್ಮಿಕರನ್ನು ಸಾಗಿಸುತ್ತಾರೆ. ಹೀಗೆ ಟಂಟಂಗಳು ನಿಯಮಬಾಹೀರವಾಗಿ ಸಂಚಾರಿ ನಿಯಮ ಪಾಲಿಸದಿದ್ದರೂ ಸಂಬಂಧಪಟ್ಟ ಇಲಾಖೆ ಮಾತ್ರ ಇದರ ಕಡೆಗೆ ಗಮನಹರಿಸದೇ ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.
ಅಪಘಾತಗಳು ಹೆಚ್ಚುತ್ತಿವೆ: ಪಟ್ಟಣದಿಂದ ನೂರಾರು ಟಂಟಂಗಳು ಗ್ರಾಮೀಣ ಪ್ರದೇಶಗಳಿಗೆ ಕಾರ್ಮಿಕರನ್ನು ನಿತ್ಯ ಒಯ್ಯುತ್ತವೆ. ಅಲ್ಲದೇ ಪಕ್ಕದ ಗ್ರಾಮಗಳಿಂದ ಟಂಟಂಗಳು ಪಟ್ಟಣಕ್ಕೆ ನಿತ್ಯ ಪ್ರಯಾಣಿಕರನ್ನು ತರುತ್ತವೆ. ಟಂಟಂದಲ್ಲಿ ಸುಮಾರು 20ರಿಂದ 25 ಜನ ಪ್ರಯಣಿಕರನ್ನು ಒಯ್ಯುತ್ತಾರೆ. ಕೆಲ ಸಂದರ್ಭಗಳಲ್ಲಿ ಈ ಟಂಟಂಗಳು ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುವಾಗ ಪಲ್ಟಿಯಾಗಿ ಪ್ರಯಾಣಿಕರಿಗೆ ಗಾಯಗಳಾಗಿದ್ದರೂ ನಿಯಮ ಮಾತ್ರ ಪಾಲಿಸುತ್ತಿಲ್ಲ. ಹೊಟ್ಟೆ ಪಾಡಿಗೆ ಟಂಟಂ ಚಾಲಕರು ಟಾಪ್ ಸವರ್ಿಸ್ ಮಾಡಿದರೂ ಪೋಲಿಸರು ಮಾತ್ರ ಕ್ಯಾರೇ ಅನ್ನುವುದಿಲ್ಲ. ಅಪಘಾತದಿಂದ ಉಂಟಾಗುವ ಪ್ರಾಣ ಹಾನಿಗೆ ಯಾರು ಹೊಣೆ ಎಂದು ಸಾರ್ವಜನಿಕರು ಇಲಾಖೆಗೆ ಪ್ರಶ್ನೆ ಮಾಡುವಂತಾಗಿದೆ.
ಎಲ್ಇಡಿ ಹಾವಳಿ : ಇತ್ತೀಚೆಗೆ ಟಂಟಂ, ಬೈಕ್ಗಳಿಗೆ ಎಲ್ಇಡಿ ಲೈಟ್ ಅಳವಡಿಸುವುದು ಕಾಮನ್ ಆಗಿಬಿಟ್ಟಿದೆ. ಇದರಿಂದ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ರಾತ್ರಿ ಹೊತ್ತು ಇಂತಹ ವಾಹನಗಳು ಎಲ್ಇಡಿ ಹಚ್ಚಿಕೊಂಡು ಬಂದರೆ ಸಾಕು ಆ ಬೆಳಕಿಗೆ ಎದುರಿನ ವಾಹನ ಚಾಲಕರ ಕಣ್ಣು ಕುಕ್ಕಿ ಅಪಘಾತ ಸಂಭವಿಸುವುದು ಸಾಮಾನ್ಯ. ಆದರೆ ಸಂಬಂಧಿಸಿದ ಇಲಾಖೆ ಮಾತ್ರ ಯಾಕೆ ಎಲ್ಇಡಿ ಅಳವಡಿಸಿದ ವಾಹನ ಚಾಲಕರಿಗೆ ದಂಡಹಾಕಿ ಅದನ್ನು ತೆಗೆಸುತ್ತಿಲ್ಲವೆಂದು ಪ್ರಜ್ಞಾವಂತರು ಕೇಳುವಂತಾಗಿದೆ.
ಅಡ್ಡಾದಿಡ್ಡಿ ಚಾಲನೆ, ರಸ್ತೆ ಮೇಲೆ ನಿಲ್ಲಿಸುವಿಕೆ : ಪಟ್ಟಣದಲ್ಲಿ ಸಂಚಾರ ನಿಯಮ ಗಾಳಿಗೆ ತೂರಿ ನಿತ್ಯ ವಾಹನಗಳನ್ನು ರಸ್ತೆ ಮೇಲೆ ಎಲ್ಲೆಂದರಲ್ಲಿ ನಿಲ್ಲಿಸುವ ಹಾಗೂ ಚಲಾಯಿಸುವ ಪರಿಪಾಠವಾಗಿದೆ. ಜನನಿಬಿಡ ರಸ್ತೆಗಳ ಮೇಲೆ ಯುವಕರು ಬೈಕ್ಗಳನ್ನು ಅತಿವೇಗವಾಗಿ ಚಲಾಯಿಸುವುದು ಪ್ಯಾಶನ್ ಆಗಿಬಿಟ್ಟಿದೆ. ಲೈಸನ್ಸಂತೂ ಇರೂವುದೇ ಇಲ್ಲ. ಆದರೆ ಪೋಲಿಸರು ಮಾತ್ರ ಇದು ನಮಗೆ ಸಂಬಂಧವಿಲ್ಲ ಎಂಬಂತೆ ಪಟ್ಟಣದ ಹೊರಗಡೆ ವಾಹನಗಳನ್ನು ಅಡ್ಡಗಟ್ಟಿ ನಿಯಮ ಪಾಲನೆ ಮಾಡುವುದು ಜನರ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ಕ್ರಮಕ್ಕೆ ಸಾರ್ವಜನಿಕರ ಆಗ್ರಹ: ಪಟ್ಟಣದಲ್ಲಿ ಸಂಚಾರಿ ನಿಮಯ ಪಾಲನೆಯಾಗುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ತುಂಬಾ ಕಿರಿಕಿರಿ ಆಗುತ್ತಿದೆ. ಟಂಟಂಗಳ ಟಾಪ್ ಮೇಲಿಂದ ಮೇಲೆ ಅವಘಡಗಳು ಸಂಭವಿಸುತ್ತಿವೆ. ಸಂಬಂಧಪಟ್ಟ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಖಾಸಗಿ ವಾಹನಗಳಲ್ಲಿ ಪ್ರಯಾಣಿಕರ ಸುಗಮ ಸಂಚಾರಕ್ಕೆ ಇಲಾಖೆ ಮುಂದಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪೋಲೀಸ್ರಿಗಿ ತಿಂಗಳಾ ಹಪ್ತಾ ಕೋಡ್ತಿವಿ. ಅದಕ್ಕಂತ ಹೆಚ್ಚಿನ ಸೀಟ್ ಹಾಕೊಂಡ್ ಹೋಗ್ತಿವಿ. ಇಲ್ಲಂದ್ರ ನಮ್ಗ ಅವ್ರು ಹಂಗ ಬಿಡ್ತಾರೇನ್ರೀ
- ಹೆಸರು ಹೇಳದ ಟಂಟಂ ಚಾಲಕ
ಬಾದಾಮಿ ಬನಶಂಕರಿ ಜಾತ್ರೆ ಆರಂಭವಾಗಿದೆ. ಟಂಟಂಗಳ ಟಾಪ್ ಸವರ್ಿಸ್ ನಿಯಂತ್ರಣ ಹಾಗೂ ಎಲ್ಇಡಿ ಬಲ್ಪ ಬಳಕೆ ಬ್ಯಾನ್ ಮಾಡಿಸುವ ಕಾರ್ಯ ಇದೇ ಸಂದರ್ಭದಲ್ಲಿ ನಡೆದರೆ ಸೂಕ್ತ. ಇಲಾಖೆ ಕ್ರಮಕ್ಕೆ ಮುಂದಾಗಲಿ
- ವಿನೋದ ಗಾಜಿ, ಯುವ ಮುಖಂಡ, ಗುಳೇದಗುಡ್ಡ.