ಇಷ್ಟಪಟ್ಟು ಓದಿದರೆ ಇಚ್ಛಿತ ಜೀವನ ಸಾಧ್ಯ: ಉಪತಹಶೀಲ್ದಾರ ಕಾಂಬಳೆ
If you enjoy reading, you can live the life you want: Sub-Tahsildar Kambale
ರಬಕವಿ-ಬನಹಟ್ಟಿ 16: ಆಯಾ ಕಾಲಘಟ್ಟಗಳಲ್ಲಿನ ನಮ್ಮ ಜವಾಬ್ದಾರಿಗಳನ್ನು ಮರೆತರೆ ಬದುಕು ಸುಂದರವಾಗದು. ವಿದ್ಯಾರ್ಥಿ ದೆಸೆಯಲ್ಲಿ ಕಷ್ಟ ಪಟ್ಟು ಓದದೇ ಇಷ್ಟ ಪಟ್ಟು ಓದಿದಲ್ಲಿ ಇಚ್ಛಿತ ಜೀವನ ನಿಮ್ಮದಾಗುತ್ತದೆಂದು ರಬಕವಿ-ಬನಹಟ್ಟಿ ಉಪತಹಶೀಲ್ದಾರ ಸದಾಶಿವ ಕಾಂಬಳೆ ಹೇಳಿದರು.
ಹನಗಂಡಿ ಗ್ರಾಮದ ಸರ್.ಸಿ.ವಿ.ರಾಮನ್ ಶಾಲೆಯ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಮಕ್ಕಳು ಶಾಲೆಯಿಂದ ಮನೆಗೆ ಮರಿಳಿದ ತಕ್ಷಣ ಅಂಡ್ರಾಯ್ಡ್ ಫೋನ್ ಬಳಸುತ್ತ ವೃಥಾ ಕಾಲಹರಣ ಮಾಡುವುದು ತರವಲ್ಲ. ಇಷ್ಟದ ಓದು ಕಷ್ಟವಾದಲ್ಲಿ ಭವಿತವ್ಯದ ಇಚ್ಛಿತ ಬದುಕು ನಿಮ್ಮದಾಗದು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು. ಉತ್ತಮ ಸಂಸ್ಕಾರವಂತರಾಗಿ, ಸಮಾಜಕ್ಕೆ, ಪೋಷಕರಿಗೆ ಮತ್ತು ದೇಶಕ್ಕೆ ಹೆಮ್ಮೆಯ ಆಸ್ತಿಯಾಗಿ ಎಂದರು.
ಧುರೀಣ ಪ್ರಸನ್ನಕುಮಾರ ದೇಸಾಯಿ ಮಾತನಾಡಿ, ಶಾಲಾ ಮುಖ್ಯಸ್ಥ ದಿಗ್ಗೇವಾಡಿ ಮತ್ತವರ ತಂಡ ಮಾಜಿ ಸೈನಿಕರಿಗೆ, ಶಿಕ್ಷಕರಿಗೆ ಹಾಗೂ ವಿಶೇಷ ಸಾಧಕರಿಗೆ ಸನ್ಮಾನಿಸುವ ಮೂಲಕ ಗುರುತಿಸುವ ಕಾರ್ಯ ಮಾಡುತ್ತಿರುವದು ಶ್ಲಾಘನೀಯವೆಂದರು. ಮಹ್ಮದ್ ರಫೀಕ್ ದಿಗ್ಗೇವಾಡಿ, ರಂಜಾನ್ ದಿಗ್ಗೇವಾಡಿ ಸೇರಿದಂತೆ ಶಾಲಾ ಶಿಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು. ಮಕ್ಕಳಿಂದ ಮನರಂಜನೆ ಕಾರ್ಯಕ್ರಮಗಳು ಜರುಗಿದವು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 