ಬಾಕಿ ಬಿಲ್ ಪಾವತಿಸದಿದ್ದರೆ ವಿದ್ಯುತ್ ಕಡತ ಗೊಳಿಸಲಾಗುವುದು
If the outstanding bill is not paid, the electricity will be cut off
ಸಂಬರಗಿ, 09 ; 2018ರಲ್ಲಿ ಹೆಸ್ಕಾಂ ಇಲಾಖೆಯಿಂದ ಅಕ್ರಮ್-ಸಕ್ರಮ್ದಲ್ಲಿ ಕೊಳವೆ ಬಾವಿ ಹಾಗೂ ತೆರೆದ ಭಾವಿ ವಿದ್ಯುತ್ ಸಂಪರ್ಕಕ್ಕಾಗಿ ರೂ.50 ಗಳನ್ನು ಡಿಪಾಸಿಟ್ ತುಂಬಿದ ರೈತರು ಈಗ ಕಾರ್ಯಾಲಯಕ್ಕೆ ಇನ್ನೂ ಠೇವಣಿ ತುಂಬಬೇಕೆಂದು ಜಂಬಗಿ ವಲಯ ಹೆಸ್ಕಾಂ ಅಧಿಕಾರಿಯಾದ ಕೆ.ಎಸ್. ಠಕ್ಕಣ್ಣವರ ತಿಳಿಸಿದರು.
ಜಂಬಗಿ ಗ್ರಾಮದ ಹೆಸ್ಕಾಂ ಕಾರ್ಯಲಯದಲ್ಲಿ ಸುದ್ಧಿಗಾರರಿಗೆ ಮಾಹಿತಿ ನೀಡಿ ಅವರು ಗಡಿ ಭಾಗದಲ್ಲಿ ವಿದ್ಯುತ್ ಬಿಲ್ ಬಾಕಿ ಬಹಳ ಇದ್ದು, ಗ್ರಾಹಕರು ತಮ್ಮ ಬಾಕಿಯನ್ನು ಕಾರ್ಯಲಯಕ್ಕೆ ಅಥವಾ ವಸೂಲಿ ಅಧಿಕಾರಿಗಳಿಗೆ ಜಮಾ ಮಾಡಿ ಪಾವತಿ ಪಡೆದುಕೊಳ್ಳಬೇಕು. ಇಲ್ಲವಾದರೆ ವಿದ್ಯುತ್ ಕಡತ ಗೊಳಿಸಲಾಗುವುದು ಎಂದು ಎಚ್ಚರಿಗೆ ನೀಡಿ ಮಾತನಾಡಿ ಅವರು ಇತ್ತೀಚಿಗೆ ಮಳೆಯ ಪ್ರಮಾಣ ಹೆಚ್ಚಿದ್ದು, ರೈತರು ವಿದ್ಯುತ್ ತಂತಿಗಳು, ವಿದ್ಯುತ್ ಕಂಬ, ಅರ್ತಿಂಗ್ ವೈರ್ಗೆ ಜಾನುವಾರುಗಳನ್ನು ಕಟ್ಟಬಾರದು ಅಥವಾ ಮಳೆಯಲ್ಲಿ ವಿದ್ಯುತ್ ಕಂಬಕ್ಕೆ ಸ್ಪರ್ಶ ಮಾಡಬಾರದು ಹಾಗೂ ಖಾಸಗಿ ವ್ಯಕ್ತಿಗಳು ವಿದ್ಯುತ್ ಕಂಬಗಳನ್ನು ಏರಿ ಕೆಲಸ ಮಾಡಬಾರದು. ಏನೇ ಅನಾಹುತಗಳಾದರೆ ಅದಕ್ಕೆ ಹೆಸ್ಕಾಂ ಹೊಣೆಗಾರ ಆಗುವುದಿಲ್ಲ ಎಂದು ಮುನ್ನೆಚ್ಚರಿಕೆ ನೀಡಿದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 