ಧ್ಯಾನ ಮಾಡಿದರೆ ಮನುಷ್ಯ ಮಾನವನಿಂದ ಮಾಧವನಾಗುತ್ತಾನೆ
If one meditates, one becomes a Madhava from a human being
ಹನಮಸಾಗರ 28: ನಿಯಮಿತ ಅನಾಪಾನಸತಿ ಧ್ಯಾನವೇ ಮನುಷ್ಯನಿಗೆ ದೊಡ್ಡ ಓಷಧ. ಧ್ಯಾನ ಮಾಡಿದರೆ ಮನುಷ್ಯ ಮಾನವನಿಂದ ಮಾಧವನಾಗುವ ಪರಿವರ್ತನೆ ಹೊಂದುತ್ತಾನೆ” ಎಂದು ಪಿರಮಿಡ್ ಮಾಸ್ಟರ್ ಹಾಗೂ ಧ್ಯಾನ ಪ್ರಚಾರಕರಾದ ಬ್ರಹ್ಮಋಷಿ ಪ್ರೇಮನಾಥ ಅವರು ಹೇಳಿದರು.ಗ್ರಾಮದ ಜಗದಂಬ ಮಂಗಲ ಭವನದಲ್ಲಿ ಶುಕ್ರವಾರ ಒಂದು ದಿನದ ಧ್ಯಾನ ಕಾರ್ಯಗಾರ ಪಿರಮಿಡ್ ಸ್ಪಿರಿಚುವಲ್ ಸೊಸೈಟಿ ಮೂವ್ಮೆಂಟ್ (ಪಿಎಸ್ಎಸ್ಎಂ) ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.“ಇಂದಿನ ಒತ್ತಡದ ಯುಗದಲ್ಲಿ ಮನುಷ್ಯನಿಗೆ ಧ್ಯಾನವೇ ದೊಡ್ಡ ಶರಣಾಗತಿ. ಧ್ಯಾನ ಮಾಡಿದರೆ ಎಲ್ಲವೂ ಶಾಂತಗೊಳ್ಳುತ್ತವೆ.
ಆ ಕ್ಷಣದಲ್ಲಿ ಮನುಷ್ಯ ನಿಜವಾದ ವಿಚಾರಸ್ಥಿತಿಗೆ, ಅಂದರೆ ಧ್ಯಾನದ ಮೂಲ ಸ್ವರೂಪಕ್ಕೆ ಪ್ರವೇಶಿಸುತ್ತಾನೆ. ಅನಾಪಾನಸತಿ ಧ್ಯಾನವು ಸುಲಿದ ಬಾಳೆಹಣ್ಣಿನಂತಿದೆ ಸರಳ, ಸುಲಲಿತ ಮತ್ತು ಎಲ್ಲರಿಗೂ ಸೂಕ್ತ ಸ್ವಾಸವನ್ನು ಮಾತ್ರ ಗಮನಿಸಿದರೆ ಸಾಕು. ಹೀಗೆ ಮಾಡಿದರೆ ಎಲ್ಲಾ ಆಲೋಚನೆಗಳು ನಿಧಾನವಾಗಿ ಶೂನ್ಯಗೊಳ್ಳುತ್ತವೆ.“ಸ್ವಾಸ ಕೇವಲ ಗಾಳಿ ಅಲ್ಲ ಅದು ವಿಶ್ವಶಕ್ತಿಯ ಪ್ರವೇಶದ್ವಾರ. ನಾವು ಸ್ವಾಸವನ್ನು ಗಮನಿಸಿದಾಗ ಈ ವಿಶ್ವಶಕ್ತಿ ದೇಹದೊಳಗೆ ಹರಡುತ್ತದೆ. ಆ ಶಕ್ತಿ ದೇಹದಲ್ಲಿರುವ ಅನೇಕ ರೋಗಗಳನ್ನು ನಿವಾರಿಸುತ್ತದೆ. ಮನಸ್ಸು ಕಟ್ಟಿಕೊಳ್ಳುತ್ತದೆ. ಮನುಷ್ಯ ಸಂಪೂರ್ಣವಾಗಿ ಪರಿವರ್ತಿತನಾಗುತ್ತಾನೆ, ದೇವರನ್ನು ಹೊರಗೆ ಹುಡುಕಬೇಡಿ; ನಿಮ್ಮೊಳಗೆ ಅನುಸಂಧಾನ ಮಾಡಿ. ನಿಮ್ಮೊಳಗೆ ಉದಯಿಸುತ್ತದೆ ಎಂದರು.ಪ್ರಮುಖರಾದ ಶಿವಶಂಕರ ಮದಿಕೇರಿ, ಶಿವಕುಮಾರ ಹಿರೇಮಠ, ಏಕನಾಥ ಮದಿಕೇರಿ, ತುಳಜನಸಾ ಕಾಟವಾ, ಗ್ಯಾನನಗೌಡ ಮಾಲಿ ಪಾಟೀಲ, ಧ್ಯಾನಿಗಳು, ವಿವಿಧ ಗ್ರಾಮದ ಮಹಿಳೆಯರು ಇತರರು ಇದ್ದರು.ಹನುಮಸಾಗರದ ಜಗದಂಬಾ ಮಂಗಲ ಭವನದಲ್ಲಿ ಶುಕ್ರವಾರ ಒಂದು ದಿನದ ಧ್ಯಾನ ಕಾರ್ಯಗಾರ ನಡೇಯಿತು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 