ಇಂಡಿಯಾ ವಾಲಿ ಇರಾನಿ: ನೆನಪಿನ ಬುತ್ತಿ ಬಿಚ್ಚಿಟ್ಟ ಸಚಿವೆ ಸ್ಮೃತಿ ಇರಾನಿ .!!
ನವದೆಹಲಿ , ಫೆ 22 : ಕಳದೆ ಲೋಕಸಭಾ ಚುನಾವಣೆಯಲ್ಲಿ ಅಮೇಥಿ ಗೆಲುವಿಗಾಗಿ ನಾನು ಇನು ಮುಂದೆ ಮುಂಬೈ ಬಿಟ್ಟು ಅಮೇಥಿಯಲ್ಲೇ ಮನೆ ಕಟ್ಟಿ, ವಾಸ ಮಾಡಿ ಜನರಿಗೆ ಹತ್ತಿರವಾಗಿರುವುದಾಗಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸ್ಪಷ್ಟಪಡಿಸಿದ್ದಾರೆ. ರಾಹುಲ್ ವಿರುದ್ದದ ಗೆಲುವು ನನ್ನದಲ್ಲ. ಅದು ಅಮೇಥಿ ಜನರ ಗೆಲುವಾಗಿತ್ತು. ನಾನು ಕೇವಲ ಸಂಕೇತವಾಗಿದ್ದೆ. ಹೀಗಾಗಿ ನಾನು ಅಮೇಥಿಯ ಸಹೋದರಿ, ಹೀಗಾಗಿ ಅಲ್ಲಿಯೇ ಮನೆಯೊಂದನ್ನು ನಿರ್ಮಿಸುವೆ ಎಂದು ಹೇಳಿದ್ದಾರೆ. ಈ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗಲಿದ್ದೇನೆ . ಅಮೇಥಿಯಲ್ಲಿ ಮನೆ ಕಟ್ಟುವ ಕೆಲಸ ಈಗಾಗಲೇ ಆರಂಭವಾಗಿದೆ. ನಾನು ಬಹಳ ಹಿಂದೆಯೇ ಮುಂಬೈಯನ್ನು ತ್ಯಜಿಸಿದ್ದೇನೆ. ಹೀಗಾಗಿ ನಾನೀಗ ಅಮೇಥಿ ಹಾಗೂ ದೆಹಲಿಯಲ್ಲಿ ಇರುತ್ತೇನೆ ಎಂದೂ ಇರಾನಿ ಹೇಳಿಕೊಂಡಿದ್ದಾರೆ. ಲಕ್ನೋದಲ್ಲಿ ನಡೆದ 'ಹಿಂದೂಸ್ತಾನ್ ಶಿಖರ್ ಸಮಾಗಮ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನನ್ನ ಹೆಸರಿನೊಂದಿಗೆ ಇರುವ 'ಇರಾನಿ' ಹೆಸರನ್ನು ನೋಡಿ ವಿದೇಶದ ವಿಮಾನ ನಿಲ್ದಾಣದಲ್ಲಿ ಅಲ್ಲಿನ ಅಧಿಕಾರಿಗಳು ನನ್ನನ್ನು ತಡೆದಿದ್ದರು. ಆಗ ನಾನು ಅವರಿಗೆ ನನ್ನ ಹೆಸರಿನ ಬಗ್ಗೆ ಸ್ಪಷ್ಟನೆ ನೀಡಿದ್ದೆ ಎಂದು ಹಳೆಯ ನೆನಪು ಮೆಲಕು ಹಾಕಿದರು. ಹೆಸರಿರುವ ಕಾರಣ ವಿದೇಶದ ವಿಮಾನ ನಿಲ್ದಾಣದಲ್ಲಿ ನನ್ನನ್ನು ತಡೆದು ಇದು ಯಾವ ಇರಾನಿ? ನೀವು ಯಾವ ಇರಾನಿ? ಎಂದು ಅಧಿಕಾರಿಗಳು ಪ್ರಶ್ನೆ ಮಾಡಿದ್ದರು . ನಾನು 'ಇಂಡಿಯಾ ವಾಲಿ ಇರಾನಿ' ಎಂದೂ ಉತ್ತರಿಸಿದ್ದೆ ಎಂದೂ ಆಕೆ ಟಿವಿ ಸಿರಿಯಲ್ ಮಾದರಿಯಲ್ಲೇ ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ 