ಮುಂಬರುವ ಶೈಕ್ಷಣಿಕ ವರ್ಷದಿಂದ ಐಐಟಿ ಫೌಂಡೇಶನ್ ತರಗತಿಗಳು ಪ್ರಾರಂಭ: ಸಂಜಯ ಕುಚನೂರೆ

ಮುಂಬರುವ ಶೈಕ್ಷಣಿಕ ವರ್ಷದಿಂದ ಐಐಟಿ ಫೌಂಡೇಶನ್ ತರಗತಿಗಳು ಪ್ರಾರಂಭ: ಸಂಜಯ ಕುಚನೂರೆ IIT Foundation classes to start from the upcoming academic year: Sanjay Kuchanure

ಲೋಕದರ್ಶನ ವರದಿ 

ಕಾಗವಾಡ 27 : ತಾಲೂಕಿನ ಐನಾಪೂರ ಪಟ್ಟಣದ ಪದ್ಮಾವತಿ ಸೆಂಟ್ರಲ್ ಸ್ಕೂಲನಲ್ಲಿ 6 ರಿಂದ 9 ನೇ ತರಗತಿಯ ವಿದ್ಯಾರ್ಥಿಗಳಿಗೆ ಮುಂಬರುವ 2026-27 ನೇ ಶೈಕ್ಷಣಿಕ ವರ್ಷದಿಂದ ಐಐಟಿ ಫೌಂಡೇಶನ್ ತರಗತಿಗಳನ್ನು ಪ್ರಾರಂಭಿಸುತ್ತೀದ್ದೇವೆ ಎಂದು ಘೋಷಿಸಲು ಅತ್ಯಂತ ಸಂತೋಶವಾಗುತ್ತಿದೆ. ವಿದ್ಯಾರ್ಥಿಗಳ ಪರಿಕಲ್ಪನಾತ್ಮಕ ತಿಳುವಳಿಕೆಯನ್ನು ಬಲಪಡಿಸಲು ಮತ್ತು ಐಐಟಿ, ಜಿಇಇ, ನೀಟ್, ಒಲಿಂಪಿಯಾಡ್‌ಗಳು ಸೇರಿದಂತೆ ಇತರೇ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಗಳು ಮತ್ತು ಭವಿಷ್ಯದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅವರನ್ನು ಸಿದ್ಧಪಡಿಸಲು ಇದು ಸಹಕಾರಿಯಾಗಲಿದ್ದು, ವಿದ್ಯಾರ್ಥಿಗಳು ಇದರ ಲಾಭವನ್ನು ಪಡೆದುಕೊಳ್ಳಬೇಕೆಂದು ಸಂಸ್ಥೆಯ ಅಧ್ಯಕ್ಷ ಹಾಗೂ ವಕೀಲರಾದ ಸಂಜಯ ಕುಚನೂರೆ ತಿಳಿಸಿದ್ದಾರೆ. 

ಅವರು, ಬುಧವಾರ ದಿ. 27 ರಂದು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಐಐಟಿ ಫೌಂಡೇಶನ್ ತರಗತಿಗಳು ಆರಂಭಿಕ ಹಂತದಿಂದಲೇ ವ್ಯವಸ್ಥಿತ ತರಬೇತಿ, ನಿಯಮಿತ ಅಭ್ಯಾಸದ ಅವಧಿಗಳು ಮತ್ತು ತಜ್ಞರ ಮಾರ್ಗದರ್ಶನದ ಮೂಲಕ, ವಿದ್ಯಾರ್ಥಿಗಳು ಆತ್ಮವಿಶ್ವಾಸ ಮತ್ತು ಶೈಕ್ಷಣಿಕ ಶ್ರೇಷ್ಠತೆಯನ್ನು ಈ ಮೂಲಕ ವಿದ್ಯಾರ್ಥಿಗಳು ಪಡೆಯಲಿದ್ದಾರೆ ಎಂದು ಅವರು ತಿಳಿಸಿದರು. 

ಪ್ರಾಚಾರ್ಯ ಮ್ಯಾಥು ಮಾತನಾಡಿ, ಐಐಟಿ ಫೌಂಡೇಶನ್ ತರಗತಿಗಳಿಂದ ವಿದ್ಯಾರ್ಥಿಗಳಲ್ಲಿ ಗಣಿತ ಮತ್ತು ವಿಜ್ಞಾನದಲ್ಲಿ ಬಲವಾದ ಅಡಿಪಾಯ, ತಾರ್ಕಿಕ ಮತ್ತು ವಿಶ್ಲೇಷಣಾತ್ಮಕ ಚಿಂತನಾ ಕೌಶಲ್ಯಗಳಲ್ಲಿ ಸುಧಾರಣೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆರಂಭಿಕ ತಯಾರಿ, ಸಿಬಿಎಸ್‌ಇ ಪಠ್ಯಕ್ರಮದ ಪರಿಕಲ್ಪನೆಗಳ ಉತ್ತಮ ತಿಳುವಳಿಕೆ, ಸಮಯ ನಿರ್ವಹಣೆ ಮತ್ತು ಸಮಸ್ಯೆ ಪರಿಹರಿಸುವ ತಂತ್ರಗಳ ಅಭಿವೃದ್ಧಿ, ಶೈಕ್ಷಣಿಕ ಮತ್ತು ಪರೀಕ್ಷೆಗಳಲ್ಲಿ ಆತ್ಮವಿಶ್ವಾಸ, ಒಲಿಂಪಿಯಾಡ್‌ಗಳು ಮತ್ತು ಪ್ರತಿಭಾ ಪರೀಕ್ಷೆಗಳಲ್ಲಿ ಭಾಗವಹಿಸುವ ಅವಕಾಶ, ಒಟ್ಟಾರೆ ಶೈಕ್ಷಣಿಕ ಕಾರ್ಯಕ್ಷಮತೆಯ ವರ್ಧನೆಯಾಗಲಿದೆ ಎಂದ ಅವರು, ಒಟ್ಟಾರೆಯಾಗಿ ಮಧ್ಯಮ ಶಾಲಾ ಮಟ್ಟದಲ್ಲಿ ಐಐಟಿ ಫೌಂಡೇಶನ್ ತರಗತಿಗಳನ್ನು ಪರಿಚಯಿಸುವುದರಿಂದ ವಿದ್ಯಾರ್ಥಿಗಳು ಉಜ್ವಲ ಶೈಕ್ಷಣಿಕ ಭವಿಷ್ಯವನ್ನು ನಿರ್ಮಿಸಲು ಮತ್ತು ಆತ್ಮವಿಶ್ವಾಸದಿಂದ ಉನ್ನತ ಗುರಿಗಳನ್ನು ಸಾಧಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು. 

ಈ ವೇಳೆ ಸಂಸ್ಥೆಯ ಉಪಾಧ್ಯಕ್ಷ ರವೀಂದ್ರ ಬಣಜವಾಡ, ನಿರ್ದೇಶಕರಾದ ಪ್ರಮೋದ ಲಿಂಬಿಕಾಯಿ, ಗಜಕುಮಾರ ಪಾಟೀಲ, ಬಾಪುಸಾಬ ಪಾಟೀಲ, ಮಹಾವೀರ ಪಾಟೀಲ, ಜಯಕುಮಾರ ಪಾಟೀಲ, ಮಹಾವೀರ ಲಿಂಬಿಕಾಯಿ, ವಸಂತ ಹುದ್ದಾರ, ಶೀತಲ ಪಾಟೀಲ, ಮೋಹನ ಪಾಟೀಲ, ಸಿದ್ಧಾತ ಬಣಜವಾಡ, ಮಂಜುನಾಥ ಕುಚನೂರೆ, ಭರತೇಶ ತೇರದಾಳೆ, ಶಾಂಥಿನಾಥ ಪಾಟೀಲ, ಸಂತೋಶ ತೇರದಾಳೆ, ಪ್ರೌಢಶಾಲೆ ಮುಖ್ಯೋಪಾಧ್ಯಾಯ ಶೀತಲ ಪಾಟೀಲ, ಸಂಜೀವ ಕಟಗೇರಿ, ರವಿ ಬಡಿಗೇರ, ಶ್ರೀಕಾಂತ ಪಾಟೀಲ ಸೇರಿದಂತೆ ಶಾಲೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.