ಜನೇವರಿ 1 ರಂದು ಹುಣಶ್ಯಾಳ ಪಿಜಿ ಸಿದ್ದಲಿಂಗೇಶ್ವರ ಜಾತ್ರೆ

ಜನೇವರಿ 1 ರಂದು ಹುಣಶ್ಯಾಳ ಪಿಜಿ ಸಿದ್ದಲಿಂಗೇಶ್ವರ ಜಾತ್ರೆ Hunashyal PG Siddalingeshwara Fair on January 1st

   

ಘಟಪ್ರಭಾ  24: ಸಮೀಪದ ಹುಣಶ್ಯಾಳ ಪಿಜಿ   ಸಿದ್ಧಲಿಂಗ ಕೈವಲ್ಯಾಶ್ರಮದ ಶ್ರೀ ಸಿದ್ದಲಿಂಗೇಶ್ವರ ಜಾತ್ರೆಗೆ ಜನೇವರಿ 1ರಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ: ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರರು ಆಗಮಿಸಲಿದ್ದಾರೆ ಎಂದು ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ನಿಜಗುಣ ದೇವ ಮಹಾಸ್ವಾಮಿಗಳು ತಿಳಿಸಿದರು. 

ಅವರು ಬುಧವಾರದಂದು ಶ್ರೀಮಠದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. 27ನೇ ಸತ್ಸಂಗ ಸಂಭ್ರಮ ಮತ್ತು ಅಪ್ಪನ ಜಾತ್ರೆ ಕಾರ್ಯಕ್ರಮವು 2026 ಜನೇವರಿ 1 ರಿಂದ 3ರವರೆಗೆ ವಿಜೃಂಭನೆಯಿಂದ ಜರುಗಲಿದ್ದು, 

ಮೂರು ದಿನಗಳ ನಡೆಯುವ ಶ್ರೀ ಸಿದ್ದಲಿಂಗೇಶ್ವರ ಜಾತ್ರೆಗೆ ಸಚಿವರು,ಸಂಸದರು, ಶಾಸಕರು, ಗಣ್ಯ ಮಾನ್ಯರು, ಯುವ ಮುಖಂಡರು ಸೇರಿದಂತೆ ನಾಡಿನ ಹಲವಾರು ಮಹಾತ್ಮರು ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವರು ಎಂದು ತಿಳಿಸಿದರು.