ಹುಕ್ಕೇರಿಮಠದ ಲಿಂ. ಶಿವಲಿಂಗ ಸ್ವಾಮಿಗಳ 108 ನೇ ಜಯಂತಿ ಕಾರ್ಯಕ್ರಮ

Hukkerimath Lim. 108th Jayanti Program of Shivlinga Swami

ಹುಕ್ಕೇರಿಮಠದ  ಲಿಂ. ಶಿವಲಿಂಗ ಸ್ವಾಮಿಗಳ 108 ನೇ ಜಯಂತಿ ಕಾರ್ಯಕ್ರಮ

ಹಾವೇರಿ 05 :ಸಂತ ಮಹಾತ್ಮರು  ಮಾಡುವ  ಅನುಷ್ಠಾನದ ಬಲದಿಂದ ಗಳಿಸುವ ಶಕ್ತಿಯನ್ನು ಭಕ್ತರ ಉದ್ಧಾರಕ್ಕಾಗಿ ಬಳಸಿ, ಸಮಾಜದ ಉದ್ಧಾರವೇ ಮಹಾತ್ಮರ ಜೀವನದ ಪರಮ ಗುರಿ ಎಂದು ಭಾವಿಸಿ,ವಿರಕ್ತ ಪರಂಪರೆಗೆ ಮಾದರಿಯಾಗಿ ಬದುಕಿ, ಬಯಲಲ್ಲಿ ಹುಟ್ಟಿ ಬಯಲಾದವರು ಹುಕ್ಕೇರಿಮಠ ಲಿಂ. ಶಿವಲಿಂಗ ಸ್ವಾಮೀಜಿ ಎಂದು  ರಟ್ಟಿಹಳ್ಳಿಯ ಕಬ್ಬಿಣಕಂತಿಮಠದ ಷ.ಬ್ರ.  ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ  ಹೇಳಿದರು.  ನಗರದ ಹುಕ್ಕೇರಿಮಠದ ಶಿವಾನುಭವ ಮಂಟಪದಲ್ಲಿ ಹಮ್ಮಿಕೊಂಡಿದ್ದ ಹುಕ್ಕೇರಿಮಠದ  ಲಿಂ. ಶಿವಲಿಂಗ ಸ್ವಾಮಿಗಳ 108 ನೇ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.    ಜಗತ್ತಿನಲ್ಲಿನ ಎಲ್ಲಾ ಧರ್ಮಗಳು, ಮತ್ತು ಧರ್ಮ ಗುರುಗಳು  ಸತ್ಯ, ಅಹಿಂಸೆಯನ್ನು ಪ್ರತಿಪಾದಿಸಿದರೆ, ಮಾನವೀಯತೆ ಮತ್ತು ಕಾಯಕ ಸಿದ್ಧಾಂತವನ್ನು ಪ್ರತಿಪಾದಿಸಿದ ಏಕೈಕ ಧರ್ಮಗುರು ಎಂದರೆ  ಅವರು ಮಹಾನ್ ಮಾನವತಾವಾದಿ ಬಸವಣ್ಣನವರು, ಕಾಯಕವನ್ನು ಸಮಾಜೋಧಾರ್ಮಿಕ ಉನ್ನತಿಗೆ ಬಳಸಿದ ಶಿವಶರಣರ ಅನ್ನ, ಅರಿವು, ಆಶ್ರಯ ಪರಂಪರೆಯನ್ನು ಇಂದು ಶ್ರೀ ಹುಕ್ಕೇರಿಮಠ ಮುಂದುವರೆಸುತ್ತಿದೆ ಎಂದರು.ಮುಖ್ಯ ಅತಿಥಿಯಾಗಿದ್ದ ಹಿರಿಯ ಸಾಹಿತಿ ಹನುಮಂತಗೌಡ ಗೊಲ್ಲರ  ಮಾತನಾಡಿ, ಜಗತ್ತಿನಲ್ಲಿ ಎಲ್ಲ ಧರ್ಮಗಳು ನಿರ್ವಾಣವನ್ನೇ ಬೋಧಿಸಿವೆ. ಬುದ್ಧ, ಮಹಾವೀರ, ಪೈಗಂಬರ ಜೀವನ ಸಂದೇಶವು ಇದೇ ಆಗಿತ್ತು. ನಡೆದಂತೆ ನುಡಿದರು, ನುಡಿದಂತೆ ನಡೆದರು. ಬಸವಾದಿ ಶಿವಶರಣರು ಇದನ್ನೇ ಶೂನ್ಯ ಸಂಪಾದನೆ ಎಂದರು,  ಸ್ವಾರ್ಥವಿಲ್ಲದ ಬದುಕು, ಸಮಾಜ ಸುಧಾರಣೆಯ ತುಡಿತ, ನೊಂದವರ ಕಣ್ಣೀರು ಒರೆಸುವದೇ ನಿಜವಾದ ಮುಕ್ತಿಗೆ ಮಾರ್ಗ, ಶಿವಯೋಗ ಮತ್ತು ಶಿವಾನುಭವವು  ಮಹಾತ್ಮರ ಜೀವನ ದರ್ಶನವಾಗಿದೆ. ಹುಕ್ಕೇರಿಮಠದ ಲಿಂ. ಶಿವಲಿಂಗ  ಶ್ರೀಗಳು ಅಂತಹ ಮಹಾತ್ಮರಲ್ಲಿ ಅಗ್ರಗಣ್ಯರಾಗಿದ್ದಾರೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಶ್ರೀಮಠ ಹಾಗೂ ಜಿಲ್ಲಾ ಆಸ್ಪತ್ರೆ  ಸಹಯೋಗದಲ್ಲಿ ರಕ್ತದಾನ ಶಿಬಿರ ಏರಿ​‍್ಡಸಲಾಗಿತ್ತು.ಸಮಾರಂಭದಲ್ಲಿ ಜಾತ್ರಾ ಸಮಿತಿ ಅಧ್ಯಕ್ಷ  ಅಶೋಕ ಮಾಗನೂರ, ಎಸ್‌.ಎಸ್‌. ಮುಷ್ಠಿ, ಶಿವಯೋಗಿ ವಾಲಿಶೆಟ್ಟರ, ಆರ್‌.ಎಸ್‌. ಮಾಗನೂರ,ನಿರಂಜನ ತಾಂಡೂರ, ಜಗದೀಶ ತುಪ್ಪದ, ಎಸ್‌.ಎಂ. ಹಾಲಯ್ಯನವರಮಠ,ಜೆ.ಬಿ. ಸಾವಿರಮಠ, ಅಶೋಕ ಹೇರೂರ, ಡಾ. ಸಹನಾ, ಡಾ. ಬಸವರಾಜ ಕಮತರ, ಡಾ.ಸಿದ್ದು ಟಿ.ಎಚ್‌. ನಿಂಗಪ್ಪ ಆರೇರ,ಬಿ.ಬಸವರಾಜ, ಆನಂದ ಅಟವಾಳಗಿ, ಶಿವಯೋಗಿ ಹೂಲಿಕಂತಿಮಠ, ಚಂಪಾ ಹುಣಸಿಕಟ್ಟಿ, ಶಿವು ಬೆಳವಿಗಿ, ಮಹಾಂತೇಶ ಮಳಿಮಠ, ಎಸ್‌.ವಿ.ಹಿರೇಮಠ, ಡಾ. ಸವಿತಾ ಹಿರೇಮಠ, ಸಿ.ವೈ.ಅಂತರವಳ್ಳಿ, ಎಸ್‌.ಎನ್‌.ಕಾಳಿ, ಎಸ್‌.ವಿ. ರವಿ, ಎಂ.ಎಸ್‌.ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.   ಆರಂಭದಲ್ಲಿ ವೀರಣ್ಣ ಅಂಗಡಿ ಸ್ವಾಗತಿಸಿದರು. ಎಸ್‌.ಎನ್‌.ಮಳೆಪ್ಪನವರ ನಿರೂಪಿಸಿದರು. ಶಿವಬಸವ ಮರಳಿಹಳ್ಳಿ ವಂದಿಸಿದರು.