ಹುಬ್ಬಳ್ಳಿ ಸಿದ್ದಾರೂಢ ಪುರಾಣ ಮಾಹಾಮಂಗಲ

ಹುಬ್ಬಳ್ಳಿ ಸಿದ್ದಾರೂಢ ಪುರಾಣ ಮಾಹಾಮಂಗಲ Hubli Siddharudha Purana Mahamangala

ಇಂಡಿ 22: ತಾಲ್ಲೂಕಿನ ಸುಕ್ಷೇತ್ರ ತಡವಲಗಾ ಗ್ರಾಮದ ಶ್ರೀ ಮರುಳಸಿದ್ದೇಶ್ವರ ದೇವಾಲಯದಲ್ಲಿ ಶ್ರಾವಣ ಮಾಸದ ನಿಮಿತ್ತ ತಿಂಗಳ ಕಾಲ ಹಮ್ಮಿಕೊಂಡಿದ್ದ ಹುಬ್ಬಳ್ಳಿ ಸಿದ್ಧಾರೂಢ ಪುರಾಣ ಮಹಾಮಂಗಲಗೊಳಿಸಲಾಯಿತು.  

ಬೆಳಗ್ಗೆ ಶ್ರೀಮರಳುಸಿದ್ದೇಶ್ವರ ಕತೃ ಗದ್ದುಗಿಗೆ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ ಹತ್ತಹಳ್ಳಿಯ ಶ್ರೀ ಗುರುಪಾದೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿ ಮಾತನಾಡಿ ಶ್ರಾವಣ ಮಾಸ ಪ್ರತಿಯೊಬ್ಬರಿಗೂ ಶ್ರೇಷ್ಠವಾಗಿದೆ. ಶಿವಶರಣರ ವಿಚಾರಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ಬೆಳೆಯಬೇಕು. ನಾನು ಸುಮಾರು ವರ್ಷಗಳಿಂದ ಹಿಂದೆ ಈ ಶ್ರೀ ಮರುಳಸಿದ್ದೇಶ್ವರ ದೇವಾಲಯದಲ್ಲಿ ತಿಂಗಳ ಕಾಲ ಪುರಾಣ ಹೇಳಿದ್ದನ್ನು ಈ ಸ್ಮರಿಸಿದರು.ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ ತಡವಲಗಾ ಹಿರೇಮಠದ ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಮಾತನಾಡಿ ಪುರಾಣ ಕೇಳುವುದರಿಂದ ಜೀವನ ಶೈಲಿ ಬದಲಾವಣೆ ಆಗಲು ಸಾಧ್ಯ. ಮನುಷ್ಯ ಜೀವನದಲ್ಲಿ ದಾನ ಧರ್ಮ ದಂತ ಪುಣ್ಯದ ಕಾರ್ಯ ಮಾಡಬೇಕು ಧಾರ್ಮಿಕ ಮನೋಭಾವ ಬೆಳೆಸಿಕೊಳ್ಳಬೇಕು ಧಾರ್ಮಿಕ ಪರಂಪರೆಗಳಲ್ಲಿ ಸಮಾಜಮುಖಿ ಕಾರ್ಯ ಕೈಗೊಂಡಿರುವುದು ಭಕ್ತಿ ಭಾವೈಕತೆಗೆ ಸಾಕ್ಷಿ ಎಂದು ಹೇಳಿದರು.  

ಈ ಸಂದರ್ಭದಲ್ಲಿ ರೇವಣಸಿದ್ದಯ್ಯ ಹೀರೆಮಠ ಪುರಾಣಿಕರಾದ ವೇ.ಶರಣಬಸವಶಾಸ್ತ್ರಿಗಳು ಇಲಕಲ.ಸಂಗೀತ ಸೇವೆ ಮರಿಸ್ವಾಮಿ. ತಬಲಾವಾದ ವೀರೇಶ್ ಹೀರೆಮಠ, ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಬಾಬುಸಾಹುಕಾರ ಮೇತ್ರಿ ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಸುನಂದಾ ವಾಲಿಕಾರ  ಅಶೋಕ ಮಿರ್ಜಿ ರಾಮನಗೌಡ ಪಾಟೀಲ ಶಿವಶಂಕರ ಹಿಳ್ಳಿ  ರವಿ ಮಸಳಿ ಕಾಮಣ್ಣ ಮಿರ್ಜಿ ಮಲ್ಲೇಶಿ ಇಂಡಿ ನಿಂಗಪ್ಪ ಗಬ್ಬೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.