ಮನೆ ನಿರ್ಮಾಣ ಭೂಮಿ ಪೂಜೆ

ಮನೆ ನಿರ್ಮಾಣ ಭೂಮಿ ಪೂಜೆ House construction land worship


ರಾಣೇಬೆನ್ನೂರು  07:  ನಗರದ ಕುರಬಗೇರಿಯ ಕಾರ್ಯಕ್ಷೇತ್ರದ   ಉಮಾ ಮಡಿವಾಳರ ಅವರಿಗೆ ವಾತ್ಸಲ್ಯ ಮನೆ ಮಂಜೂರಾಗಿದ್ದು  ವಾತ್ಸಲ್ಯ ಮನೆ ನಿರ್ಮಾಣ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಶಿವರಾಯ ಪ್ರಭು ಅವರು, ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದವರು ಪ್ರತಿಯೊಬ್ಬರ ಕನಸು ಮನೆ ಕಟ್ಟುವುದು. ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವ ಗಾದೆ ಮಾತು ಇಂದಿನ ದಿನಮಾನಗಳಲ್ಲಿ ವಾಸ್ತವ ಸಂಗತಿ. ಯೋಜನೆಯಲ್ಲಿ ವಾತ್ಸಲ್ಯ ಮನೆ ನಿರ್ಮಾಣವಾಗುತ್ತಿರುದು ಅತ್ಯಂತ ಸಂತೋಷದ ಸಂಗತಿಯಾಗಿದೆ ಎಂದರು   ಕಾರ್ಯಕ್ರಮದಲ್ಲಿ  ಜ್ಞಾನ ವಿಕಾಸ ಯೋಜನಾಧಿಕಾರಿ ಶ್ರೀಮತಿ ಸುಧಾ,  ಯೋಜನಾಧಿಕಾರಿ ಮಂಜುನಾಥ ಗೌಡ, ಎಮ್‌.ಕೃಷಿ ಮೇಲ್ವಿಚಾರಕ ಮಹಾಂತೇಶ, ಜ್ಞಾನ ವಿಕಾಸ ಸಮನ್ವಯಧಿಕಾರಿ, ಸೇವಾಪ್ರತಿನಿಧಿ ಮತ್ತು ನಗರದ ಗಣ್ಯರು ಪಾಲ್ಗೊಂಡಿದ್ದರು.