ಉತ್ತಮ ಮಳೆಯ ಸಂತಸದಲ್ಲಿರುವ ರೈತರಿಗೆ ಕುದುರೆ ಶಾಕ್

ಉತ್ತಮ ಮಳೆಯ ಸಂತಸದಲ್ಲಿರುವ ರೈತರಿಗೆ ಕುದುರೆ ಶಾಕ್ Horse shock for farmers who are happy with good rains

ರಾಯಚೂರು: 26 ಉತ್ತಮ ಮಳೆಯಾಗುತ್ತಿರುವುದರಿಂದ ಉತ್ತಮ ಬೆಳೆ ಬೆಳೆಯುವ ನಿರೀಕ್ಷೆಯಲ್ಲಿರುವ ರಾಯಚೂರು ಜಿಲ್ಲೆಯ ಲಿಂಗಸುಗೂರು ಗ್ರಾಮದ ರೈತರಿಗೆ ಒಂಟಿ ಕುದುರೆ ಸಂಟಕವಾಗಿದೆ.

ಹೌದು ಈ ಕುದುರೆ ಸುಮಾರು 70 ಎಕರೆ ಭೂಮಿಯಲ್ಲಿ ಬೆಳೆದ ಬೆಳೆಯನ್ನು ಹಾನಿಗೊಳಿಸಿದೆ. ಓಡಿಸಲು ಹೋದ ರೈತರ ಮೈಮೇಲೆ ಎರಗಿ ಬೆದರಿಸುತ್ತೆ, ರೈತನ ನಾಯಿ ಮೇಲೆ ದಾಳೆ ನಡೆಸಿ ನಾಯಿಯನ್ನು ಕೊಂದು ಹಾಕಿದೆ.

ಈ ಕುದುರೆಯಿಂದ ಅಪಾರ ತೊಂದರೆ ಎದುರಿಸುತ್ತಿರುವ ರೈತರು ಸಂಬಂಧ ಪಟ್ಟ ಅಧಿಕಾರಿಗಳು ಈ ಕಡೆ ಗಮನಹರಿಸಿ ಕುದುರೆಯ ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.