ಮೂರು ಸಾವಿರಮಠದಲ್ಲಿ ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಹಬ್ಬ

ಮೂರು ಸಾವಿರಮಠದಲ್ಲಿ ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಹಬ್ಬ Holy Ramadan festival of Muslim brothers and sisters at the Three Thousand Monastery

ಲೋಕದರ್ಶನ ವರದಿ 

ಹುಬ್ಬಳ್ಳಿ 27 :     ಶ್ರೀ ಜಗದ್ಗುರು ಮೂರು ಸಾವಿರಮಠದಲ್ಲಿ ಮುಸ್ಲಿಂ ಬಾಂಧವರ  ಪವಿತ್ರ ರಂಜಾನ್ ( ಈದ್ - ಉಲ್ - ಫಿತರ್ ) ಹಬ್ಬದ ಶುಭ ಸಂದರ್ಭದಲ್ಲಿ     ಟಿವಿ ವರದಿಗಾರ ಆಸಿಫ್ ಬಂಕಾಪುರ ಅವರನ್ನು ಮೂರುಸಾವಿರ ಮಠದ ವಿದ್ಯಾವರ್ಧಕ  ಸಂಘದ ಸದಸ್ಯರು, ಗಣ್ಯರಾದ, ವಾಯುವ್ಯ  ಕರ್ನಾಟಕ ರಾಜ್ಯ ರಸ್ತೆಸಾರಿಗೆ ನಿಗಮದ ಮಾಜಿ ಅಧ್ಯಕ್ಷ ಸದಾನಂದ  ಡಂಗನವರ ಅವರು ಪ್ರೀತಿ, ಆತ್ಮೀಯತೆಯಿಂದ ಹೃದಯ ಪೂರ್ವಕವಾಗಿ ಗೌರವಿಸಿದರು. ಅಭಿನಂದನೆಗಳನ್ನು ಸಲ್ಲಿಸಿ  ಹಬ್ಬದ  ಶುಭಕೋರಿದರು.  ಹಿರಿಯರಾದ ಲಿಂಗರಾಜ ಇಂಗಳಹಳ್ಳಿ, ಎ   ಬಿ ಪಾಟೀಲ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ   ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ವರದಿಗಾರರಾದ ಬಾಲು, ಸಲ್ಮಾನ್, ವಿಜಯಕುಮಾರ, ಅಜೀಜ್ಲೋಕಪ್ಪಲಿ, ಮೊಹಮ್ಮದ್, ಖತೀಬ್, ನವೀನ್ಕುದರಿ, ಗೀರೀಶ, ಮುಂತಾದಭಕ್ತರು ಇದ್ದರು.