ಉನ್ನತ ಹುದ್ದೆ ಅಲಂಕರಿಸಿ : ಸುಧಾಕರ ದೈವಜ್ಞ
Hold a high position said Sudhakar Daivagya
ಶಿಗ್ಗಾವಿ 18: ನಮ್ಮ ಸಮಾಜದ ವಿದ್ಯಾರ್ಥಿಗಳು ಉನ್ನತ ಹುದ್ದೆಯನ್ನು ಅಲಂಕರಿಸಬೇಕು ಎಂದು ದೈವಜ್ಞ ಸಮಾಜ ಅಧ್ಯಕ್ಷ ಸುಧಾಕರ ದೈವಜ್ಞ ಹೇಳಿದರು.
ಪಟ್ಟಣದ ವಿಠ್ಠಲ ದೇವಸ್ಥಾನದಲ್ಲಿ ನಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಎಲ್ಲ ಸಮಾಜದವರು ಮುಖ್ಯವಾಹಿನಿಗೆ ಬಂದಿದ್ದಾರೆ ದೈವಜ್ಞ ಸಮಾಜ ಮುಂದೆ ಬರುವ ಅನಿವಾರ್ಯತೆ ಇದೆ ಎಂದು ಮಾರ್ಮಿಕವಾಗಿ ಹೇಳಿದರು. ಮಾಜಿ ಅಧ್ಯಕ್ಷ ಪ್ರಕಾಶ ವೇರ್ಣೆಕರ ಮಾತನಾಡಿ ಸಮಾಜದಲ್ಲಿ ಸಂಘಟನೆ ಪ್ರಮುಖವಾಗಿದೆ ಆದ್ದರಿಂದ ಸಂಘಟನೆ ಮುಖಾಂತರ ಎಲ್ಲ ಕಾರ್ಯಗಳನ್ನು ನಿರ್ವಹಿಸಬಹುದು ಎಂದರು. ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಹೆಚ್ಚು ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳಾದ ಅಮೃತಾ ಪಾಲನಕರ, ರಾಧಿಕಾ ಶೇಜವಾಡಕರ, ಅಣ್ಣಯ್ಯ ಶೇಜವಾಡಕರ, ಕಾವ್ಯಾ ಕುರ್ಡೇಕರ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಭೂದಾನಿ ವಾಸುದೇವ ರಾಯ್ಕರ, ಚಂದ್ರಕಾಂತ ಪಾಲನಕರ, ದತ್ತಣ್ಣಾ ವೇರ್ಣೇಕರ, ವಿನಾಯಕ ರಾಯ್ಕರ, ಮೋಹನ ರಾಯ್ಕರ, ಪ್ರಕಾಶ ಪಾಲನಕರ, ಸಂಕೇತ ರಾಯ್ಕರ್, ಮಂಜುನಾಥ ವೇರ್ಣೆಕರ, ಆನಂದ ವೇರ್ಣೆಕರ, ಜಗದೀಶ ಶೇಜವಾಡಕರ, ನಾಗೇಶ ರಾಯ್ಕರ, ಸಂತೋಷ ರಾಯ್ಕರ್, ನಾಗರಾಜ ರಾಯ್ಕರ್, ವಿನೋದಾ ಕುರ್ಡೇಕರ, ಭೂಷಣ ರೇವಣಕರ, ರಾಘವೇಂದ್ರ ದೈವಜ್ಞ, ಗಣೇಶ ಕುಡತರಕರ ಸೇರಿದಂತೆ ಸಮಾಜದ ಪ್ರಮುಖರು ಉಪಸ್ಥಿತರಿದ್ದರು. ರಾಯೇಶ್ವರ ರಾಯ್ಕರ ಕಾರ್ಯಕ್ರಮ ನಿರ್ವಹಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 