ಹೊಳಗುಂದಿ : ಸಂಭ್ರಮದ ಹನುಮಪ್ಪ ಸ್ವಾಮಿಯ ಮುಳ್ಳು ಗದ್ದುಗೆ ಉತ್ಸವ
Holagundi: A festive festival to pay homage to Lord Hanuman's thorny throne
ಲೋಕದರ್ಶನ ವರದಿ
ಹೂವಿನಹಡಗಲಿ: 20- ಹೊಸ ವರುಷದ ಯುಗಾದಿ ಹಬ್ಬದಲ್ಲಿ ತಾಲ್ಲೂಕಿನ ಹೊಳಗುಂದಿ ಗ್ರಾಮದ ಶ್ರೀ ಹನುಮಪ್ಪ ಸ್ವಾಮಿಯ ರಥೋತ್ಸವ ನಿಮಿತ್ತ ಶುಕ್ರವಾರ ಸಾಯಂಕಾಲ 5.30ಕ್ಕೆ ಜರುಗಿದ ಭೇಟಿ ಮುಳ್ಳು ಗದ್ದುಗೆ ಉತ್ಸವ ಸಂಭ್ರಮದಿಂದ ಜರುಗಿತು. ಬೆಳಿಗ್ಗೆ 10ಗಂಟೆಗೆ ಭಕ್ತರು ಗ್ರಾಮದ ಹೊರವಲಯದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಭೇಟಿ ಮುಳ್ಳಿನ ಕಂಟಿಗಳನ್ನು ಕಡಿದು ಕೊಂಡು ದೇಗುಲ ಮುಂಭಾಗದಲ್ಲಿ ಮುಳ್ಳಿನ ಗದ್ದುಗೆ ಸಿದ್ದಪಡಿಸುತ್ತಾರೆ. ಸಂಜೆ 5.30ಕ್ಕೆ ರಾಶಿ ರಾಶಿ ಹಾಕಿರುವ ಭೇಟಿ ಮುಳ್ಳಿನ ಕಂಟಿಗಳ ಮೇಲೆ ಬರಗಾಲಲ್ಲಿ ಪೂಜಾರಿ ಬಸವರಾಜ್ ಮುಳ್ಳು ಗದ್ದುಗೆ ಹಾಯ್ದರು. ಈ ಉತ್ಸವದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.
ಸಂಭ್ರಮದ ಹನುಮಪ್ಪನ ರಥೋತ್ಸವ: ಹೊಳಗುಂದಿ ಗ್ರಾಮದಲ್ಲಿ ಗುರುವಾರ ಸಂಜೆ 5.30ಕ್ಕೆ ಹನುಮಪ್ಪ ಸ್ವಾಮಿ ರಥೋತ್ಸವ ಸಡಗರ ಸಂಭ್ರಮದಿಂದ ನೆರವೇರಿತು. ದೇವಸ್ಥಾನದಿಂದ ಭವ್ಯ ಮೆರವಣಿಗೆಯಲ್ಲಿ ಸಾಗಿ ಬಂದ ಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿದ ಬಳಿಕ ತೇರನ್ನು ಎಳೆಯಲು ಚಾಲನೆ ನೀಡಲಾಯಿತು. ಸಮಾಳ, ನಂದಿಕೋಲು ಸೇರಿದಂತೆ ಮಂಗಳ ವಾದ್ಯಗಳು ರಥೋತ್ಸವಕ್ಕೆ ಮೆರುಗು ತಂದವು.ದೇಗುಲ ಅಧ್ಯಕ್ಷ ಸಿ.ಬಸವರಾಜ್, ಟಿ.ಹನುಮಂತಪ್ಪ, ಪರಶುರಾಮಪ್ಪ, ಹಾವನೂರು ರಾಜಶೇಖರ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು. ಚಂದ್ರ ದರ್ಶನ : ಪ್ರತಿವರ್ಷ ದಂತೆ ಯುಗಾದಿ ಪಾಂಡ್ಯ ನಂತರ ಶುಕ್ರವಾರ ಚಂದ್ರ ದರ್ಶನ ಮಾಡಿ ತಂದೆ -ತಾಯಿ, ಗುರು-ಹಿರಿಯರಿಗೆ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 