ರಾಣೆಬೆನ್ನೂರಲ್ಲಿ ಹಿಂದೂ ಸಮ್ಮೇಳನ: ಶೋಭಾ ಯಾತ್ರೆಯ ಅದ್ದೂರಿ ಮೆರವಣಿಗೆ
Hindu Sammelan in Ranebennur: A grand procession of Shobha Yatra
ರಾಣೇಬೆನ್ನೂರು 08: ಇಲ್ಲಿನ ಕೆಇಬಿ ದೇವಸ್ಥಾನ ಆವರಣದಿಂದ ರವಿವಾರ ಸಂಜೆ ನಗರದಲ್ಲಿ ಆಯೋಜಿಸಲಾಗಿದ್ದ ದಕ್ಷಿಣ ವಿಭಾಗದ ಹಿಂದೂ ಸಮ್ಮೇಳನದ ಹಿನ್ನೆಲೆಯಲ್ಲಿ, ಹಿಂದೂ ಸಮ್ಮೇಳನ ಸಮಿತಿಯು ಅದ್ದೂರಿ ಮೆರವಣಿಗೆ ಆಯೋಜಿಸಿತ್ತು, ಮೆರವಣಿಗೆಗೆ ಪುರ ಜನರು ಪೂಜೆ ಸಲ್ಲಿಸಿ ಭವ್ಯ ಚಾಲನೆ ನೀಡಿದರು. ಬ್ರಹತ ರೂಪದಲ್ಲಿ ನಡೆದ ಶೋಭಾ ಯಾತ್ರೆಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಪುರುಷರು ಮಹಿಳೆಯರು, ಯುವಕ ಯುವಕ ಯುವತಿಯರು ಪಾಲ್ಗೊಂಡಿದ್ದರು. ಮುಂಚೂಣಿಯಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನ ಆರಾಧಕ ಮಂಜುನಾಥ ಸ್ವಾಮಿ ಮಣೇಗಾರ, ಸಮಿತಿಯ ಮುಖಂಡರಾದ ರಾಜು ರೇವಣಕರ್, ಕೆ ಶಿವಲಿಂಗಪ್ಪ, ಪ್ರಕಾಶ್ ಬುರಡಿಕಟ್ಟಿ, ನವೀನ ಬಾಳನಗೌಡ್ರ, ಗೀರೀಶ ಬ್ಯಾಡಗಿ, ಸಂದೀಪ ಕುರುಡೇಕರ, ಪ್ರದೀಪ ಮಜ್ಜಿಗಿ, ವಿನಾಯಕ ಜೋಶಿ, ಯುವರಾಜ್ ಬ್ಯಾಡಗಿ, ನಾಗರಾಜ ಕೊರವರ, ಗಂಗಮ್ಮ ಹಾವನೂರ, ಪವಿತ್ರ ಹುಲ್ಮನಿ,
ಮಂಜುಳಾ ಹತ್ತಿ, ಗೀತಾ ಜಂಬಿಗಿ, ಭಾರತಿ ಜಂಬಿಗಿ, ಕೊಟ್ರೇಶಪ್ಪ ಎಮ್ಮಿ, ಡಾ. ಸಂಜಯ ನಾಯಕ, ಸರೋಜಾ ಉದಗಟ್ಟಿ ಸೇರಿದಂತೆ ನಗರ ಮತ್ತು ತಾಲೂಕಿನ ನೂರಾರು ಮುಖಂಡರು, ಗಣ್ಯರು ಉದ್ಯಮಿಗಳು, ಸಂಘ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು. ಯುವಕ ಯುವತಿಯರು ಪಾಲ್ಗೊಂಡಿದ್ದರು. ಅದ್ದೂರಿಯಾಗಿ ಜರುಗಿದ ಮೆರವಣಿಗೆಗೆ ಪ್ರಸಿದ್ಧ ಅಟವಾಳಗಿ ವೀರಗಾಸೆ,ಸಮಾಳ ವಾದ್ಯ ಮೇಳ ತಂಡಗಳು,ಭಜನೆ, ಜಾನಪದ ನೃತ್ಯ ತಂಡಗಳು, ತಮಾಷಾ ಗೊಂಬೆಗಳು, ಮತ್ತಿತರ ವಾದ್ಯ ಮೇಳಗಳು ಜನಪದ ಸಂಸ್ಕೃತಿ ಪ್ರತಿಬಿಂಬಿತ ಕಲಾತಂಡಗಳು, ಮೆರಗು ನೀಡಿದವು. ದೇವಸ್ಥಾನ ಆವರಣದಿಂದ ಹೋರಾಟ ಭವ್ಯ ಭಾರಿ ಮೆರವಣಿಗೆಯು, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಹವಾಲ್ದಾರ ಹೊಂಡದ ವಾಲಿ ಜಮೀನಿನಲ್ಲಿ ಸಮ್ಮೇಳನವು ಸಮಾವೇಶಗೊಂಡಿತು. ರಾಣೆಬೆನ್ನೂರು ನಗರದಲ್ಲಿ ಹಿಂದೂ ಸಮ್ಮೇಳನದ ಹಿನ್ನೆಲೆಯಲ್ಲಿ ರವಿವಾರ ಸಂಜೆ ಆಯೋಜಿಸಿದ್ದ, ಶೋಭಾ ಯಾತ್ರೆಯಲ್ಲಿ ಭಾಗವಹಿಸಿದ ಭಾರಿ ನಾಗರಿಕ ಸಮುದಾಯ.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 