ಹೆಪಟೈಟಿಸ್ ಬಿ ಚುಚ್ಚುಮದ್ದು ನೀಡುವ ಕಾರ್ಯಕ್ರಮಕ್ಕೆ ಚಾಲನೆ

ಹೆಪಟೈಟಿಸ್ ಬಿ ಚುಚ್ಚುಮದ್ದು ನೀಡುವ ಕಾರ್ಯಕ್ರಮಕ್ಕೆ ಚಾಲನೆ  Hepatitis B vaccination program launched

ಹೆಪಟೈಟಿಸ್ ಬಿ ಚುಚ್ಚುಮದ್ದು ನೀಡುವ ಕಾರ್ಯಕ್ರಮಕ್ಕೆ ಚಾಲನೆ  

ಸವಣೂರ 01: ನಗರದ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆಪಟೈಟಿಸ್ ಬಿ ದಿನವನ್ನು ಆಚರಣೆ ಮಾಡಲಾಥಿಣಣ.ಆರೋಗ್ಯ ಇಲಾಖೆಯು ತಾಲೂಕಾ ಆರೋಗ್ಯಧಿಕಾರಿಗಳಾದ ಡಾ. ಚಂದ್ರಕಲಾ ಜೆ. ಅವರು ಮುಖ್ಯ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಎಸ್ ವಾಯ್ ಹಿರೇಗೌಡರ ಅವರಿಗೆ ಹೆಪಟೈಟಿಸ್ ಬಿ ಚುಚ್ಚುಮದ್ದು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  

             ಡಾ. ಎಸ್ ವಾಯ್ ಹಿರೇಗೌಡರ ಅವರು ಮಾತನಾಡಿ 2023ರ ವೇಳೆಗೆ ಹೆಪಟೈಟಿಸ್ ಮುಕ್ತ ದೇಶವನ್ನಾಗಿಸುವ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಿ ಕರ್ತವ್ಯ ನಿರ್ವಹಿಸಬೇಕು, ಆರೋಗ್ಯ ಕಾರ್ಯಕರ್ತೆಯರು ತಪ್ಪದೆ ಲಸಿಕೆ ಪಡಿಯಬೇಕು ಎಂದು ತಿಳಿಸಿದರು.ಆಸ್ಪತ್ರೆಯ ಸಿಬ್ಬಂದಿಗಳಾದ ಕಚೇರಿ ಅಧೀಕ್ಷಕರು ಸುಷ್ಮಾ ನೀರಲಗಿ, ನಾರಾಯಣ ದಾಯಿಪಲ್ಲೆ,ನಾಗರಾಜ್ ಹಾವೇರಿ,ಹಿರಿಯ ಚಿಕಿತ್ಸಾ ಮೇಲ್ವಿಚಾರಕರು ಪ್ರಭು ಕಟ್ಟಿ, ಶುಶ್ರೂಷಾಧಿಕಾರಿಗಳಾದ ಅನಿತಾ ಬೆಳವಲಕೊಪ್ಪ, ಸಮೀನಾ,ಮಾಲಿ, ಯಲ್ಲಮ್ಮ ನವಲಿ, ಫಾರ್ಮಸಿ ಅಧಿಕಾರಿಗಳಾದ ರಾಮಕೃಷ್ಣ ಘಾಟಗೆ, ಶಾಂತವೀರೇಶ ಯಳಮಲಿ, ಆಪ್ತ ಸಮಾಲೋಚಕ ಜಿಲಾನಿ ನವಲಗುಂದ,ಮಹಾಂತೇಶ ಹೊಳೆಮ್ಮನವರ, ಮಂಜುನಾಥ ಸವಣೂರ ಆಶಾ ಕಾರ್ಯಕರ್ತರು ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.