ಕಾಗವಾಡ 12: ಮುಂಗಾರು ಮಳೆ ಆರಂಭವಾಗಿದ್ದು, ಕಾಗವಾಡ ತಾಲೂಕಿನಾದ್ಯಂತ ಬುಧವಾರ ದಿ. 12 ರಂದು ಮಧ್ಯಾಹ್ನ 2 ಗಂಟೆಯಿಂದ 5 ಗಂಟೆಯ ವರೆಗೆ ಭಾರಿ ಮಳೆಯಾಗಿದ್ದು, ಮಳೆಯಿಂದಾಗಿ ರಸ್ತೆ ಮೇಲೆ ನೀರು ಹರಿದು ಬಂದಿರುವುದರಿಂದ ವಾಹನ ಸವಾರರು ಪರದಾಡುವ ಪರಿಸ್ಥಿತಿ ಉಂಟಾಯಿತು. ಸತತ 3 ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ ಹಳ್ಳಕೊಳ್ಳಗಳು ತುಂಬಿ ಹರಿಯಲಾರಂಭಿಸಿವೆ. ಮಳೆಯ ಜೊತೆಗೆ ಗುಡುಗು ಸಿಡಿಲಿನ ಅಬ್ಬರವೂ ಜೋರಾಗಿದ್ದು, ಇದು ಮುಂಗಾರು ಮಳೆಯೋ ಅಥವಾ ಅಕಾಲಿಕ ಮಳೆಯೋ ತಿಳಿಯದಂತಾಗಿದೆ. ತಾಲೂಕಿನ ಕಾಗವಾಡ, ಶೇಡಬಾಳ, ಉಗಾರ, ಐನಾಪೂರ, ಮೋಳೆ, ಕವಲಗುಡ್ಡ, ಶಿರಗುಪ್ಪಿ, ಜುಗೂಳ ಗ್ರಾಮದಲ್ಲಿಯೂ ಮಳೆ ಜೋರಾಗಿತ್ತು.