ಕುಕನೂರ 09: ತಾಲೂಕಿನ ರಾಜೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ನರೇಗಾ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಆರೋಗ್ಯ ತಪಾಸಣಾ ಶಿಬಿರ, ರೋಜಗಾರ ದಿನಾಚರಣೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಿದ್ದನಗೌಡ ರಬ್ಬನಗೌಡ್ರ ಎಲ್ಲರೂ ಆರೋಗ್ಯವಂತ ಜೀವನ ನಡೆಸಲು ಆಸ್ಪತ್ರೆಗಳು ಇವೆ ಆದರೆ ಇಂದು ಒತ್ತಡದ ಬದುಕು ಸಮಯದ ಕೊರತೆಯಿಂದಾಗಿ ಆಸ್ಪತ್ರೆಗೆ ಹೋಗುವುದನ್ನ ಕಡಿಮೆ ಮಾಡಿದ್ದೇವೆ, ಅದರಲ್ಲೂ ದುಡಿಯುವ ಕೂಲಿಕಾರರು ತಮ್ಮ ದೈನಂದಿನ ಕೆಲಸದಲ್ಲಿ ತೊಡಗಿಕೊಳ್ಳುವುದರಿಂದ ಆರೋಗ್ಯದ ಖಾಳಜಿ ವಹಿಸುವುದು ಕಡಿಮೆ ಅದಕ್ಕಾಗಿ ರಾಜೂರ ಗ್ರಾಮ ಪಂಚಾಯತಿಯಿಂದ ಆರೋಗ್ಯ ಶಿಬಿರ ಏರಿ್ಡಸಿದ್ದು ಅದರ ಅದುಪಯೋಗ ಪಡಿಸಿಕೊಳ್ಳು ಸಲಹೆ ನೀಡದರು.
ಕುಕನೂರ ತಾಲೂಕ ಐ.ಇ.ಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ ಮಾತನಾಡಿ ನರೇಗಾಯೋಜನೆಯಲ್ಲಿಒಂದುಕುಟುಂಬಕ್ಕೆಒಂದುಆರ್ಥಿಕವರ್ಷದಲ್ಲಿರೂ. 37,000/- ಗಳ ವರೆಗೆದುಡಿಯವಅವಕಾಶವಿದೆ, ಇದೊಂದು ಸರ್ಕಾರದ ಕೆಲಸ ಆಗಿರುವುದರಿಂದ ಕನಿಷ್ಠ ಅಳತೆ ಗರಿಷ್ಠ ಕೂಲಿ ಪಡೆಯಬಹುದು, ಮಹಿಳೆ ಮತ್ತು ಪುರುಷರಿಗೆ ಸಮಾನ ಕೂಲಿ ಇದೆ. ವಿಶೇಷ ಚೇತನರಿಗೆ ಅಳತೆಯ ಪ್ರಮಾಣದಲ್ಲಿರಿಯಾಯಿತಿಯೂ ಸಹ ಅದರ ಸದುಪಯೋಗ ಪಡಿಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸಕ್ಕೆ ಬರಲುಕರೆ ನೀಡಿದರು. ನಂತರ ಪ್ರಧಾನ ಮಂತ್ರಿ ಸುರಕ್ಷ್ಯಾ ಭಿಮಾಯೋಜನೆ, ಪ್ರಧಾನ ಮಂತ್ರಿಜೀವನ್ಜ್ಯೋತಿ ಭಿಮಾಯೋಜನೆ, ಅಟಲ್ ಪೆನ್ಷೆನ್ ಯೋಜನೆಗಳಲ್ಲಿ ನೊಂದಣಿ ಮಾಡಿಕೊಳ್ಳು ತಿಳಿಸಿದರು.
ವೈದ್ಯಾಧಿಕಾರಿಗಳಾದ *ಡಾ" ಸುಷ್ಮಾ ಜಿ* ಆರೋಗ್ಯ ನೀರೀಕ್ಷಣಾಧಿಕಾರಿಗಳಾದ ಬಸವರಾಜದೇವರಡ್ಡಿ, ಓಅಆ ಅಧಿಕಾರಿಗಳಾದ ಕೃಷ್ಣಾ ದೇಶಪಾಂಡೆ, ಅಊಓ ಅಧಿಕಾರಿಗಳಾದ ಮೇಘಾ ದೇಸಾಯಿ, ಖಏಖಏ ಆಪ್ತ ಸಮಾಲೋಚಕರಾದ ಕಳಕಪ್ಪ ಬಂಡಿ, ಂಃ-ಕಒಎಙ,ಅ ಂಖಏ ಯೋಜನೆಯಆರೋಗ್ಯ ಮಿತ್ರರಾದಗೋವಿಂದರಾವ್ ಮರಾಠಿ ,ಗ್ರಾಮ ಪಂಚಾಯತಿ ಸಿಬ್ಬಂದಿಯವರಾದ ಬಸವರಾಜ ಹುಬ್ಬಳ್ಳಿ, ಶರಣಪ್ಪ, ರಾಜು, ಕಾಯಕ ಬಂಧುಗಳಾದ ರೇಷ್ಮಾ, ಮಲ್ಲಪ್ಪ ಹಾಗೂ ಕಾಯಕ ನರೇಗಾಕೂಲಿಕಾರರು ಹಾಜರಿದ್ದರು.