918ನೇ ಹನುಮಂತ ಕೆರೆ ಗ್ರಾಮಸ್ಥರಿಗೆ ಹಸ್ತಾಂತರ

918ನೇ ಹನುಮಂತ ಕೆರೆ ಗ್ರಾಮಸ್ಥರಿಗೆ ಹಸ್ತಾಂತರ  Hanumantha Kere handed over to the villagers of the 918th village.


ಶಿಗ್ಗಾಂವಿ, ಆ. 4: ತಾಲೂಕಿನ ಬಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಯಾಣ ಗ್ರಾಮದಲ್ಲಿ “ನಮ್ಮ ಬ್ಘ್ದಿಹಿ್ಕ್ಲ್ಕೂ ಕೆರೆ” ಕಾರ್ಯಕ್ರಮದಡಿ ಅಭಿವೃದ್ಧಿಪಡಿಸಲಾದ 918ನೇ ಹನುಮಂತ ಕೆರೆಯನ್ನು ಗ್ರಾಮಸ್ಥರಿಗೆ ಹಸ್ತಾಂತರಿಸಲಾಯಿತು.  ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಶೇಖರ್ ನಾಯಕ್ ನಾಮಫಲಕ ಅನಾವರಣಗೊಳಿಸಿ, ಬಳಿಕ ಕೆರೆ ಸಮಿತಿ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಕೆರೆಯನ್ನು ಅಧಿಕೃತವಾಗಿ ಹಸ್ತಾಂತರಿಸಿದರು.  

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗರಾಜ್, ಕೆರೆ ಸಮಿತಿ ಅಧ್ಯಕ್ಷ ಮುತ್ತಣ್ಣ ಬಡಿಗೇರ, ಯೋಜನಾಧಿಕಾರಿ ಶೇಖರ್ ನಾಯಕ್, ಎಂಜಿನಿಯರ್ ನಿಂಗರಾಜ್ ಮಾಳವಾಡ, ಬಾಡ ವಲಯದ ಮೇಲ್ವಿಚಾರಕಿ ಉಷಾ, ಕೃಷಿ ಮೇಲ್ವಿಚಾರಕ ಮಂಜುನಾಥ ಗದಗ, ಬಾಡ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಸವಿತಾ, ಪಂಚಾಯಿತಿ ಸದಸ್ಯರು ಹಾಗೂ ಗ್ರಾಮದ ಗಣ್ಯರು ಉಪಸ್ಥಿತರಿದ್ದರು.