ಐತಿಹಾಸಿಕ ಅತ್ತಿವಟ್ಟಿ ಗ್ರಾಮದ ಹನುಮ ಜಯಂತಿ

ಐತಿಹಾಸಿಕ ಅತ್ತಿವಟ್ಟಿ ಗ್ರಾಮದ ಹನುಮ ಜಯಂತಿ Hanuman Jayanti in the historic Attivatti village


                                                                                                                                                                                                                        ಕೊಪ್ಪಳ 03 : ಜಿಲ್ಲೆಯ ಐತಿಹಾಸಿಕ ಶಿವಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಪುರಾತನ ಕಾಲದ ಅತ್ತಿವಟ್ಟಿ ಗ್ರಾಮದ ಶ್ರೀ ಅಭಯ ಆಂಜನೇಯ ಸ್ವಾಮಿ ದೇವಸ್ಥಾನ ದಲ್ಲಿ ಏಪ್ರಿಲ್ 2 ರಂದು ಗುರುವಾರ ಶ್ರೀ ಹನುಮ ಜಯಂತಿ ಪ್ರಯುಕ್ತ ವಿಶೇಷ ಅಲಂಕಾರ, ಶಾಸೊೊಥಕ್ತ ಪೂಜೆ, ಮಹಾ ಮಂಗಳಾರತಿ ಮತ್ತು ಅನ್ನದಾಸೋಹ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು. ಪ್ರಧಾನ ಅರ್ಚಕರಾದ ಶ್ರೀನಿವಾಸರಾವ್ ಅವರಿಂದ ಹನುಮಂತನಿಗೆ ಪೂಜೆ ಮತ್ತು ಅರ್ಚನೆಗಳು ಜರುಗಿದವು. ಶಿವಪುರ ಸೇರಿದಂತೆ ಸುತ್ತ ಮುತ್ತಲ ಹತ್ತಾರು ಗ್ರಾಮಗಳ ಭಕ್ತರು ಹನುಮ ಜಯಂತಿ ಯಲ್ಲಿ ಪಾಲ್ಗೊಂಡು ಧನ್ಯತೆ ಹೊಂದಿದರು. ಇದೇವೇಳೆ ಭಕ್ತರಿಗಾಗಿ ಅನ್ನಸಂತರೆ​‍್ಣ ನೆರವೇರಿತು.