ವಿಜಯಪುರ,13: ಆದ್ಯರ ಕುಲಗುರು ಕೃಷಶಿದ್ವಯಪಾಯನಾಚಾರ್ಯರು ಪ್ರತಿಷ್ಠಾಪಿಸಿದ ಇಂಡಿ ತಾಲೂಕಿನ ಭುಯ್ಯಾರ ಗ್ರಾಮದಲ್ಲಿ ಹನುಮ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು
ನಾಲ್ಕು ನೂರು ವರ್ಷಗಳ ಹಿಂದೆ ಕೃಷಶಿದ್ವಯಪಾಯನಾಚಾರ್ಯರು ಪ್ರತಿಷ್ಠಾಪಿಸಿದ್ದಾರೆಂದು ಹೇಳಲಾಗುತ್ತಿರುವ ಈ ಭವ್ಯ ಹನುಮ ಜಯಂತಿಯನ್ನು ಬ್ರಾಹ್ಮಣ ಸಮಾಜದ ಸರ್ವ ಮುಖಂಡರು ಆಚರಣೆ ಮಾಡಿದರು.
12 ರಂದು ಬೆಳಿಗ್ಗೆ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ತೊಟ್ಟಿಲೋತ್ಸವ, ವಾಯುಸ್ತುತಿ ಪುನಶ್ಚರಣ, ಪವಮಾನ ಹೋಮವನ್ನು ಪಂಡಿತ ಸತ್ಯಬೋಧಾಚಾರ್ಯ ಘಟಾಲಿ ಅವರಿಂದ ನಡೆಯಿತು. ಪೂಜೆಗೆ ಕುಳಿತು ಕೃಷ್ಣಾಚಾರ್ಯ ಆದ್ಯ ದಂಪತಿಗಳು ಪವಮಾನ ಹೋಮವನ್ನು ನಡೆಸಿಕೊಟ್ಟರು. ವೇದೇಶ ತೀರ್ಥ ವಿದ್ಯಾಪೀಠದ ಶಿಷ್ಯ ಆದಿತ್ಯಾಚಾರ್ಯ ಹಾಗೂ ಧೀರೇಂದ್ರಾಚಾರ್ಯ ನಾಗರಹಳ್ಳಿ, ಸುದೀಂದ್ರಾಚಾರ್ಯ ನಾಗರಹಳ್ಳಿ ಪೂಜಾ ಕಾರ್ಯಗಳನ್ನು ನೆರವೇರಿಸಿಕೊಟ್ಟರು.
ಪಂಚಾಮೃತ ಅಭಿಷೇಕ ಹಾಗೂ ವಿವಿಧ ಅಂಲಕಾರಗಳು ಮತ್ತು ಭಜನೆ ಕಾರ್ಯಕ್ರಮ ಜರುಗಿದವು. ಭುಯ್ಯಾರ ಗ್ರಾಮದ ಹಿರಿಯ ಆದ್ಯ ಮನೆತನದ ಉಡುಪಾಚಾರ್ಯ ಅವರ ಮೊಮ್ಮಕ್ಕಳಾದ ವಿದ್ಯಾಧೀಶ ಹಯವದನಾಚಾರ್ಯ ಆಧ್ಯ ಅವರಿಂದ ಗುಡಿಯ ಮುಂಭಾಗದಲ್ಲಿ ದಾಸವಾಣಿ ನಡೆಯಿತು. ಸಹೋಧರ ಜಯತೀರ್ಥ ಆದ್ಯ ತಬಲಾ ಸಾಥಿಯನ್ನು ತಾಳವಾದ್ಯವನ್ನು ಸುನೀಲ ಆದ್ಯ (ಕುಲಕರ್ಣಿ) ನಡೆಸಿಕೊಟ್ಟರು. ವಿದ್ಯಾಧೀಶ ಹಾಗೂ ಜಯತೀರ್ಥ ಅವರನ್ನು ಸತ್ಕರಿಸಲಾಯಿತು. ಗುರುರಾಜ ಆದ್ಯ ಅವರು ಸತತವಾಗಿ 12 ವರ್ಷಗಳಿಂದ ಹನುಮಂತ ದೇವರ ಪೂಜೆ ಮಾಡುತ್ತ ಬರುತ್ತಲಿದ್ದಾರೆ ಇದಕ್ಕೆ ಬ್ರಾಹ್ಮಣ ಸಮಾಜ ಹೆಮ್ಮೆ ವ್ಯಕ್ತಪಡಿಸಿತು.
ಪಾಟೀಲ ಮನೆತನದ ಹನುಮಂತ ದೇವರ ಜಯಂತಿ: ಇದೇ ಗ್ರಾಮದಲ್ಲಿ ಪಾಟೀಲ ಮನೆತನದವರು ನಿರ್ಮಿಸಿದ ಹನುಮಂತ ದೇವರ ಜಯಂತಿಯನ್ನು ಆಚರಿಸಿ ಆಚಾರ್ಯ ಸುಧೀಂದ್ರಾಚಾರ್ಯ ನಾಗರಹಳ್ಳಿ ಅವರಿಂದ ಪೂಜೆ ನೆರವೇರಿಸಲಾಯಿತು
ಭುಯ್ಯಾರ ಗ್ರಾಮದ ಕೃಷ್ಣಾಚಾರ್ಯ ಆದ್ಯ, ಕಿಟ್ಟು ಆದ್ಯ, ಮುರಲೀಧರ ಜಹಾಗೀರದಾರ, ಮದಸೂದನ ಆದ್ಯ, ಮನೋಜ ಆದ್ಯ, ಮಣ್ಣೂರಿನ ಸೇತುರಾಮಾರ್ಯ ಅವಧಾನಿ, ಜಯತೀರ್ಥ ಮಾಹುಲಿ, ಹನುಮಂತರಾವ ಪಾಟೀಲ, ಭೀಮಸೇನ ಜಹಾಗೀರದಾರ, ಸುನೀಲ ಆದ್ಯ (ಕುಲಕರ್ಣಿ) ಜಗನ್ನಾಥ ಪಾಟೀಲ, ರಮೇಶ ಪಾಟೀಲ, ಪುರುಷೋತ್ತಮ ಮಾಹುಲಿ, ಪತ್ರಕರ್ತ ಕಲ್ಯಾಣರಾವ ಕುಲಕರ್ಣಿ, ಪ್ರದೀಪ ಪಾಟೀಲ, ಶ್ರೀಹರಿ ಕುಲಕರ್ಣಿ ಹಾಗೂ ಸಮಸ್ತ ಗ್ರಾಮದ ಮುಖಂಡರುಗಳು ಭಾಗವಹಿಸಿ ಹನುಮಂತ ದೇವರ ಕೃಪೆಗೆ ಪಾತ್ರರಾದರು.